ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವಾತಾವರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯೊಂದಿಗೆ ದಟ್ಟ ಮಂಜು ಕವಿದಿದೆ.
ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಈ ಘಾಟಿಯಲ್ಲಿ ಕೆಲಕ್ಷಣಗಳಲ್ಲಿ ದಟ್ಟ ಮಂಜು ರಸ್ತೆಗಳನ್ನು ಆವರಿಸುತ್ತಿದ್ದು, ಮುಂದಿನ ಕ್ಷಣದಲ್ಲೇ ಮಳೆರಾಯನ ಅಬ್ಬರ ಕಾಣಿಸುತ್ತಿದೆ. ಮಳೆ ಮತ್ತು ಮಂಜಿನ ಈ ಸಂಯೋಜನೆ ಪರಿಸರವನ್ನು ಮತ್ತಷ್ಟು ಮನಮೋಹಕವಾಗಿಸಿದೆ.
ಘಾಟಿಯ ಹಸಿರು ಬೆಟ್ಟಗಳ ನಡುವೆ ಹರಡಿರುವ ಮಂಜು ಪ್ರಕೃತಿಯ ಅದ್ಭುತ ದೃಶ್ಯವನ್ನು ಸೃಷ್ಟಿಸಿದ್ದು, ವಾಹನ ಸವಾರರಿಗೆ ಸ್ವಲ್ಪ ಸವಾಲಿನ ಪರಿಸ್ಥಿತಿ ಉಂಟಾಗಿದ್ದರೂ ಪ್ರವಾಸಿಗರನ್ನು ಮಾತ್ರ ಇದು ಆಕರ್ಷಿಸುತ್ತಿದೆ.
ಪ್ರವಾಸಿಗರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಪ್ರಕೃತಿಯ ಈ ಅಪರೂಪದ ಸೌಂದರ್ಯ ಚಾರ್ಮಾಡಿ ಘಾಟಿಯನ್ನು ಮತ್ತೆ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿಸಿದೆ.

