ಬೆಂಗಳೂರು: ಆಡುಗೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಗಾಂಜಾ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಸಂತೋಷ, ರಂಜಿತ್ ಅಲಿಯಾಸ್ ಡೋರಿ, ಅರುಣ್ ಅಲಿಯಾಸ್ ಮುನ್ನ ಬಂಧಿತ ಆರೋಪಿಗಳಾಗಿದ್ದು,
ಬಂಧಿತರಿಂದ 27 ಕೆಜಿ ಗಾಂಜಾ ಹಾಗೂ 220 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಶೋಕಿ ಜೀವನಕ್ಕಾಗಿಮಹಿಳೆಯರು ಹಾಗೂ ಅಂಗವಿಕಲರ ಕೈಯಲ್ಲಿ ಗಾಂಜಾ ಮಾರಾಟ ಮಾಡಿಸುತ್ತಿದ್ದರು. ಇವರು ವಿವೇಕ ನಗರದ ಖಾಲಿ ಜಾಗದಲ್ಲಿ ಡ್ರಂಗಳೊಳಗೆ ಗಾಂಜಾವನ್ನು ಅಡಗಿಸಿ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು “ಗಾಂಜಾ ಆರ್ಗಾನಿಕ್, ಇದರಿಂದ ಯಾವುದೇ ಹಾನಿ ಇಲ್ಲ” ಎಂಬ ತಪ್ಪು ಭ್ರಮೆಯಲ್ಲಿ ಇದ್ದರು. “MDMA ಮಾತ್ರ ಅಪಾಯಕಾರಿ” ಎಂಬ ತಪ್ಪು ಕಲ್ಪನೆ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

