ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ರಾಜಕೀಯ ಮುಖಂಡ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ದೊರೆಯಲೆಂದು ನಗರದ ಗಂಗಿಮಡಿ ಅಬುಹರೇರ ಮಸೀದಿಯಲ್ಲಿ ಮಂಗಳವಾರ ವಿಶೇಷ ಸಾಮೂಹಿಕ ದುವಾ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಜನಾಬ್ ಇನಾಯತುಲ್ಲಾ ಸಾಹೇಬ್ ಪೀರಜಾದೆ, ಮೌಲಾನಾ ಅಬ್ದುಲ್ ಗಫೂರ್ ಸಾಹೇಬ್ ಪಲ್ಲೇದ್, ಮೌಲಾನಾ ಅಬ್ದುಲ್ ಸಮದ್ ಜಕಾತಿ, ಹಫೀಜ್ ಅಬೂಬಕರ್, ಹಫೀಜ್ ಸದ್ದಾಂ ಹಾಗೂ ಹಫೀಜ್ ಅಬ್ದುಲ್ಲಾ ಸೇರಿದಂತೆ ಹಲವರು ಭಾಗವಹಿಸಿ, ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೈಯದ್ ಖಾಲಿದ್ ಕೊಪ್ಪಳ, ಉಸ್ಮಾನ್ ಮಾಳೆಕೊಪ್ಪ, ಫಾರೂಕ್ ಸಿಂದಗಿ, ಅಕ್ಬರ್ ಅತ್ತಾರ, ಮೊಹಮ್ಮದ್ ಬೆಟಗೇರಿ, ಉಜೈರ್, ಮೈನು ಗುಜಮಾಗಡಿ, ಚಾಂದ್ ಸಾಬ್ ಅಬ್ಬಿಗೇರಿ, ಮಹಮ್ಮದ್ ಬೋದ್ಲೆಖಾನ್, ಹಾಫೀಸ್ ರೋಣ, ಬಾಬಾಜಾನ್ ಹಣಗಿ, ಬಾಬಾಜಾನ್ ಕೊಡತಗೇರಿ ಸೇರಿದಂತೆ ಹಲವಾರು ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಎಚ್.ಕೆ. ಪಾಟೀಲ್ ಅವರ ಅನುಭವ, ಜನಪರ ಸೇವೆ ಹಾಗೂ ಆಡಳಿತಾತ್ಮಕ ಸಾಮರ್ಥ್ಯವನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯದ ಅಭಿವೃದ್ಧಿ, ಶಾಂತಿ, ಸೌಹಾರ್ದತೆ ಹಾಗೂ ಜನರ ಸುಖ-ಸಮೃದ್ಧಿಗಾಗಿ ವಿಶೇಷ ದುವಾ ಮಾಡಲಾಯಿತು.
“ಎಚ್.ಕೆ. ಪಾಟೀಲ್ ಅವರು ದೀರ್ಘಕಾಲದ ರಾಜಕೀಯ ಅನುಭವ ಹೊಂದಿರುವ ಜನನಾಯಕರು. ಅವರ ಸೇವೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬುದು ಜನರ ಆಶಯವಾಗಿದೆ.”
ಸಯ್ಯದ್ ಖಾಲಿದ್ ಕೊಪ್ಪಳ

