ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ ಧರ್ಮ, ದೇಶದ ಸಂಸ್ಕೃತಿಯನ್ನು ರಕ್ಷಣೆ ಮಾಡಿದ ಅಪ್ಪಟ ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಬಿಜೆಪಿ ಶಿರಹಟ್ಟಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ತಿಳಿಸಿದರು.
ಅವರು ಪಟ್ಟಣದ ಅಖಂಡ ಭಾರತ ಯುವಸೇನೆ ಇವರ ವತಿಯಿಂದ ರವಿವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯುತ್ಸವದ ಅಂಗವಾಗಿ ಶಿವಾಜಿ ಮಹಾರಾಜರ ಭವ್ಯಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಶಿವಾಜಿ ಮಹಾರಾಜರ ಧೈರ್ಯ ಮತ್ತು ಸ್ಫೂರ್ತಿದಾಯಕ ಕಾರ್ಯಗಳು ಯುವಕರಿಗೆ ಪ್ರೇರಣೆ ಆಗಬೇಕು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿವಾಜಿ ಮಹಾರಾಜರ ಭವ್ಯಮೂರ್ತಿ ಶೋಭಾಯಾತ್ರೆ ಪಂಪ ವೃತ್ತದಿಂದ ಪ್ರಾರಂಭಗೊಂಡು, ಬಸ್ತಿಕೇರಿ ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಪಾದಗಟ್ಟಿ, ಪುರಸಭೆ, ಸರ್ಕಾರಿ ಆಸ್ಪತ್ರೆ, ಹಳೆ ಬಸ್ಸ್ಟಾಂಡ್ ಮುಂಭಾಗದಿಂದ ಪರ್ವತ ಮಲ್ಲಯ್ಯನ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಅಮರೀಶ ಗಾಂಜಿ, ಶ್ರೇಯಾಂಕ ಹಿರೇಮಠ, ಪ್ರತಾಪ ಅಂಕಲಿ, ಎಂ.ಆರ್. ಪಾಟೀಲ, ಗಂಗಾಧರ ಮೆಣಸಿನಕಾಯಿ, ವಿವೇಕ ಕದಂ, ಚಂದ್ರಗೌಳಿ, ಶಕ್ತಿ ಕತ್ತಿ, ಈಶ್ವರ ಗದಗ, ಶಂಕರ ಶಳಕೆ, ಶರಣಬಸಪ್ಪ ಗಾಂಜಿ, ಪ್ರವೀಣ ದಶಮನಿ, ಚಂದ್ರು ಬಾರ್ಕಿ, ನವೀನ ಗಾಯಕವಾಡ, ಪ್ರಕಾಶ ಗುತ್ತಲ, ನವೀನ ಗುರಿಕಾರ, ಶಿವು ಆರೇರ, ಖಂಡಪ್ಪ ಅಣ್ಣಿಗೇರಿ, ಮಂಜುನಾಥ ಗಾಂಜಿ, ಆಕಾಶ ಸೌದತ್ತಿ, ಗೋವಿಂದ ಗೋಸಾವಿ ಸೇರಿದಂತೆ ನೂರಾರು ಯುವಕರು, ಹಿರಿಯರು ಇದ್ದರು.



