ಕನ್ನಡ ಬಿಗ್ಬಾಸ್ ಸೀಸನ್ 11, 90ನೇ ದಿನಕ್ಕೆ ಕಾಲಿಟ್ಟಿದ್ದು, ದಿನ ಕಳೆದಂತೆ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ನಿನ್ನೆಯಿಂದ ಭವ್ಯಾ ಕ್ಯಾಪ್ಟನ್ಸಿ ಟಾಸ್ಕ್ ಬಗ್ಗೆಯೇ ಚರ್ಚೆ ಆಗುತ್ತಿದೆ. ಇಂದಿನ ವೀಕೆಂಡ್ ಎಪಿಸೋಡ್ನಲ್ಲಿಯೂ ಸುದೀಪ್ ಅವರು ಈ ಬಗ್ಗೆ ಮಾತನಾಡಿ ಭವ್ಯಾಗೌಡಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಎಸ್, ಕಳೆದ ವಾರ ಬಿಗ್ಬಾಸ್ ರೆಸಾರ್ಟ್ ಟಾಸ್ಕ್ಕೊಟ್ಟಿತ್ತು. ಇದರಲ್ಲಿ 29 ಸ್ಟಾರ್ಸ್ಗಳನ್ನು ಪಡೆದುಕೊಂಡಿದ್ದ ಭವ್ಯಾ ಗೌಡ ಟೀಮ್, ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆಯಾಗಿತ್ತು. ಹೀಗಾಗಿ ಅದೇ ತಂಡದ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಬಿಗ್ ಬಾಸ್ ಕೊಟ್ಟಿದ್ದರು.
ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್ಬಾಸ್ ಹೇಳುವ ನಂಬರ್ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್ನಲ್ಲಿ ಹಾಕಬೇಕು. ಇದೇ ಟಾಸ್ಕ್ನಲ್ಲಿ ಬಿಗ್ಬಾಸ್ ಮೊದಲು 9 ನಂಬರಿನ ಗೊಂಚಲಿನಿಂದ ಚಂಡುಗಳನ್ನು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಆಗ ಎಲ್ಲರೂ ಓಡಿ ಹೋಗಿ ಆ ಚೆಂಡನ್ನು ಹಿಡಿಯುತ್ತಾರೆ. ಆಗ ಇದೇ ವೇಳೆ 3ನೇ ಗೊಂಚಲಿನಿಂದ ಚಂಡೊಂದು ಬೀಳುತ್ತದೆ.
ಆದರೆ ಅದನ್ನೂ ಇಬ್ಬರು ಉಸ್ತುವಾರಿಗಳ ಗಮನಕ್ಕೆ ಬರೋದಿಲ್ಲ. ಆ ಕೂಡಲೇ ಭವ್ಯಾ ಆ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕುತ್ತಾರೆ. ಆಗ ಅದೇ ಬಾಲ್ ಬುಟ್ಟಿಗೆ ಬೀಳುತ್ತದೆ. ಇದರಿಂದ ಮೊದಲ ಹಂತದಲ್ಲಿ ಭವ್ಯಾ ಗೌಡ ಸೇಪ್ ಆಗುತ್ತಾರೆ. ಇದಾದ ಬಳಿಕ ಮತ್ತೆ ಇದೇ ಪ್ರಕ್ರಿಯೆಯಲ್ಲಿ ಚೆಂಡನ್ನು ಹಾಕಿ ಭವ್ಯಾ ಗೌಡ ಈ ವಾರದ ಕ್ಯಾಪ್ಟನ್ ಆಗುತ್ತಾರೆ.
ಇನ್ನೂ, ಭವ್ಯಾ ಗೌಡ ಮೋಸದ ಆಟದ ಬಗ್ಗೆ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ವಿಡಿಯೋ ಕ್ಲಿಪ್ ಎಲ್ಲರ ಮುಂದೆ ತೋರಿಸಿ, ರಜತ್ ಅವರಿಗೆ ಗೊತ್ತಿದೆ ಅದು 9ನೇ ನಂಬರಿನಿಂದ ಬಿದ್ದಿದೆ ಅಂತ ಹೇಳಿದ್ದಾರೆ. ಆಗ ರಜತ್ ನಾನು ಹೇಳಿದೆ ಸರ್, ಆಗ ಭವ್ಯಾ ಸುಮ್ನೆ ಇರಿ ಅಂತ ಹೇಳಿದ್ರು ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಮನೆ ಮಂದಿ ಶಾಕ್ ಆಗಿದ್ದಾರೆ.
ಮೋಸ ಬಯಲಾಗುತ್ತಿದ್ದಂತೆ ಭವ್ಯಾಗೌಡ ಕಿಚ್ಚನ ಮುಂದೆ ಗಳಗಳನೆ ಕಣ್ಣೀರು ಹಾಕಿದ್ದಾರೆ.