ಮದುವೆಗೆ ಹೆಣ್ಣು ಕೊಡದ ಮನೆಗೆ ಗಾಂಜಾ ಎಸೆದ ಭೂಪ: ತನಿಖೆಯಲ್ಲಿ ಬಯಲಾಯ್ತು ಇಂಜಿನಿಯರ್ ಅಸಲಿ ಕಹಾನಿ!

0
Spread the love

ಶಿವಮೊಗ್ಗ:-ಮದುವೆಗೆ ಹೆಣ್ಣು ಕೊಡದ ಮನೆಗೆ ಭೂಪನೊಬ್ಬ ಗಾಂಜಾ ಎಸೆದು ತಗ್ಲಾಕಿಕೊಳ್ಳುವಂತೆ ಮಾಡಿ ಇದೀಗ ತಾನೇ ಕಂಬಿ ಎಣಿಸುವಂತಾಗಿದೆ.

Advertisement

ವೈಯಕ್ತಿಕ ದ್ವೇಷದ ಹಿನ್ನೆಲೆ ಹೆಣ್ಣಿನ ಮನೆಯವರನ್ನು ಗಾಂಜಾ ಕೇಸ್ ನಲ್ಲಿ ಸಿಕ್ಕಿಹಾಕಿಸಲು ಹೋಗಿ ಇಂಜಿನಿಯರ್ ಒಬ್ಬರು ತಾನೇ ತಗುಲಿ ಹಾಕಿಕೊಂಡ ಘಟನೆ ಇದೀಗ ಬೆಳಕಿಗೆ ಬಂದಿದೆ.

ಸರ್ಕಾರಿ ನೌಕರಿಯಲ್ಲಿದ್ದರೂ ತನ್ನ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬೇರೆಯವರ ಮನೆಯ ಒಳಗಡೆ ಗಾಂಜಾ ಪ್ಯಾಕೆಟ್ ಎಸೆದ ಕೃತ್ಯದ ಅಡಿಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮದುವೆಗೆ ಹೆಣ್ಣು ಕೊಡಲಿಲ್ಲ ಎಂಬ ದ್ವೇಷದ ಹಿನ್ನೆಲೆ ಹೆಣ್ಣಿನ ಕಡೆಯವರನ್ನ ಸಿಕ್ಕಿ ಹಾಕಿಸಲು ಭೂಪ ಪ್ಲಾನ್ ಮಾಡಿದ್ದ ಎನ್ನಲಾಗಿದೆ.

15 ರಿಂದ 20 ಗ್ರಾಂ ತೂಕವುಳ್ಳ 19 ಗಾಂಜಾ ಪ್ಯಾಕೆಟ್ ಗಳನ್ನ ಮನೆ ಹಿಂಭಾಗ ಎಸೆದು ಸಿಕ್ಕಿಹಾಕಿಸಲು ಭೂಪ ಪ್ಲಾನ್ ಮಾಡಿದ್ದ. ಇದೇ ತಿಂಗಳ 13 ನೇ ತಾರೀಖು ರಾತ್ರಿ 10 ಗಂಟೆ ವೇಳೆಗೆ ಕಪ್ಪು ಕವರ್ ನಲ್ಲಿ ಗಾಂಜಾ ಪ್ಯಾಕೆಟನ್ನು ತಂದು ಇನ್ನೊಬ್ಬನ ಕೈಯಿಂದ ಹುಡುಗಿ ಕಡೆಯ ಮನೆಯವರ ಹಿಂಭಾಗ ಅನಾಮಿಕ ಯುವಕನೊಬ್ಬ ಎಸೆದು ಹೋಗಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆಯಲ್ಲಿ ವಿಚಿತ್ರ ಘಟನೆ ಜರುಗಿದೆ. ಜಿತೇಂದ್ರ ಎಂಬುವವರ ಮನೆಗೆ ಹೆಣ್ಣು ನೋಡಲು ಇಂಜಿನಿಯರ್ ಶಾಂತಕುಮಾರ್ ಹೋಗಿದ್ದ. ಮದುವೆ ನಿಶ್ಚಯವಾಗುವ ವೇಳೆ ಮದುವೆ ಮುರಿದು ಬಿದ್ದಿದ್ದೆ. ನಂತರ ಹುಡುಗಿಯ ಮನೆಯವರ ಮೇಲೆ ಶಾಂತಕುಮಾರ್ ದ್ವೇಷ ಸಾಧಿಸುತ್ತಿದ್ದಂತೆ. ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸೇರಿಕೊಂಡು ಜಿತೇಂದ್ರ ಅವರ ಮನೆಯ ಹಿಂಭಾಗ ಗಾಂಜಾ ಪ್ಯಾಕೆಟ್ ಎಸೆಯಲು ಪ್ಲಾನ್ ಮಾಡಿದ್ದಾರೆ.

ಶಾಂತಕುಮಾರ್ ಸಹಚರ ನೊಬ್ಬ ಗಾಂಜಾ ಪ್ಯಾಕೆಟ್ ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಜಾ ಪ್ಯಾಕೆಟನ್ನು ಜಿತೇಂದ್ರ ಕುಮಾರ್ ಅವರ ಮನೆಯ ಹಿಂಭಾಗ ಎಸೆದು ನಂತರ ಅಬಕಾರಿ ಅಧಿಕಾರಿಗಳಿಗೆ ಶಾಂತಕುಮಾರ್ ವಿಷಯ ಮುಟ್ಟಿಸಿದ್ದಾರೆ.

ನಂತರ ಜಿತೇಂದ್ರ ಮನೆಯಲ್ಲಿ ಅಬಕಾರಿ ಅಧಿಕಾರಿಗಳು ಗಾಂಜಾ ಹುಡುಕಿದ್ದಾರೆ. ಆದರೆ ಗಾಂಜಾ ಪ್ಯಾಕೆಟ್ ಗಳು ಹಿಂಬದಿ ಇದ್ದಿದ್ದರಿಂದ ಅಧಿಕಾರಿಗಳಿಗೆ ದೊರಕಲಿಲ್ಲ. ಬೆಳಗ್ಗೆ ಎದ್ದು ಮನೆಯ ಹಿಂಬದಿ ಸ್ವಚ್ಛಗೊಳಿಸುವಾಗ ಗಾಂಜಾ ಪ್ಯಾಕೆಟ್ ಕಣ್ಣಿಗೆ ಬಿದ್ದಿದೆ.

ನಂತರ ಸಿಸಿಟಿವಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಇದೀಗ ಇಂಜಿನಿಯರ್ ಕಂಬಿ ಎಣಿಸುವಂತಾಗಿದೆ.


Spread the love

LEAVE A REPLY

Please enter your comment!
Please enter your name here