ಆಂಧ್ರದ ಟಿಡಿಪಿ ಶಾಸಕನ ಬೆಂಬಲಿಗನ ಹತ್ಯೆಗೆ ಸಂಚು: ಕೋಲಾರದ ಕಾನ್ಸ್ ಟೇಬಲ್ ಅರೆಸ್ಟ್!

0
Spread the love

ಕೋಲಾರ:– ಆಂಧ್ರದ ಟಿಡಿಪಿ ಶಾಸಕನ ಬೆಂಬಲಿಗನ ಹತ್ಯೆಗೆ ಸಂಚು ರೂಪಿಸಿದ ಗ್ಯಾಂಗ್ ನಲ್ಲಿ ಇದ್ದ ಆರೋಪದಡಿ ಕೋಲಾರದ ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್ ಆಗಿದ್ದಾರೆ.

Advertisement

ಆಂಧ್ರ ಪ್ರದೇಶದ ಗಂಗಾವರಂ ಪೊಲಿಸರಿಂದ ಕೋಲಾರ ಗ್ರಾಮಾಂತರ ಠಾಣೆಯ ಕಾನ್ಸ್ ಟೇಬಲ್ ವಿನಾಯಕ್ ನನ್ನು ಬಂಧಿಸಲಾಗಿದೆ. ಟಿಡಿಪಿ ಶಾಸಕನ ಬೆಂಬಲಿಗ ರಘುಚಂದ್ರಗುಪ್ತ ಹತ್ಯೆಗೆ ವಿನಾಯಕ ಸುಪಾರಿ ನೀಡಿದ್ದ ಎನ್ನುವ ಗುಮಾನಿ ಮೂಡಿದೆ.

ಆಂಧ್ರದ ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ವೈಸಿಪಿ ಮುಖಂಡ ಶ್ರೀನಿವಾಸಲುರೆಡ್ಡಿ ಹಾಗೂ ಇತರರಿಗೆ ಕಾರಿನಲ್ಲಿ ಡಿಕ್ಕಿಹೊಡೆದು ಹತ್ಯೆ ಮಾಡುವಂತೆ ಪಿಸಿ ವಿನಾಯಕ ಪ್ಲ್ಯಾನ್ ಕೊಟ್ಟಿದ್ದ. ಕಾರು ಡಿಕ್ಕಿ ಹೊಡೆದ ವೇಳೆ ಟಿಡಿಪಿ ಮುಖಂಡ ಅದೃಷ್ಟವಶಾತ್ ಬಚಾವ್ ಆಗಿದ್ದ.

ಕೊಲೆಗೆ ಉಪಾಯಮಾಡಿ ವಾಹನವನ್ನು ಕೊಟ್ಟು ವಿನಾಯಕ ಸಂಚು ಮಾಡಿದ್ದ. ಆಂಧ್ರ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ವಿನಾಯಕ ಹೆಸರು ಹೇಳಿದ್ದಾರೆ.

ಕೂಡಲೇ ವಿನಾಯಕನನ್ನು ಬಂಧಿಸಿದ ಆಂಧ್ರ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಓರ್ವ ಪೊಲೀಸ್ ಅಧಿಕಾರಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಆಂಧ್ರದ ಗಂಗಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here