ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಜನಪ್ರತಿನಿಧೀಗಳ ಸಹಕಾರ ಅಗತ್ಯ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ, ಸರಕಾರಿ ಶಾಲೆಗಳ ಮಕ್ಕಳು ಎಂದೆಂದಿಗೂ ಶಿಕ್ಷಣದಲ್ಲಿ ಮುಂದಿದ್ದು, ಸರಕಾರಿ ಶಾಲೆಗಳು ಸಾರ್ವಜನಿಕರು, ಪಾಲಕರು, ಜನಪ್ರತಿನಿಧಿಗಳ ಸಹಕಾರದಿಂದ ಇಂದು ಪ್ರಗತಿ ಹಂತದಲ್ಲಿ ಮುಂದುವರೆಯುತ್ತಿವೆ. ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಶಾಲಾ ಪ್ರಧಾನ ಗುರು ಡಾ. ಎಸ್.ವಿ. ತಮ್ಮನಗೌಡ್ರ, ಎಸ್ಡಿಎಂಸಿ ಅಧ್ಯಕ್ಷ ಮಾಹಾಂತೇಶ ಕಣವಿ, ಗೌರಮ್ಮಾ ಬಡ್ನಿ, ವಿಜಯ ನೀಲಗುಂದ, ಎಸ್.ಸಿ. ಬಡ್ನಿ, ಕೆ.ಎಲ್. ಕರಿಗೌಡ್ರ, ಪಿ.ಎಸ್. ಮರಿದೇವರಮಠ, ಆರ್.ಎಂ. ರೋಣದ, ಎಸ್.ಪಿ. ಸರ್ವದೆ, ಕೆ.ಎಸ್. ಗಾಣಿಗೇರ, ಬಸಮ್ಮಾ ಲದ್ದಿ, ಹರ್ಷಲತಾ ದೇಶಪಾಂಡೆ, ಪ್ರೇಮಾ ಬಡ್ನಿ, ಎಸ್ಡಿಎಂಸಿ ಸರ್ವ ಸದಸ್ಯರು ಇದ್ದರು.