ಕೈಕೊಟ್ಟ ಬೆಳೆ: ಸಾಲಬಾಧೆ ತಾಳಲಾರದೇ ಯುವ ರೈತ ಆತ್ಮಹತ್ಯೆ!

0
Spread the love

ತೀರ್ಥಹಳ್ಳಿ:- ಬೆಳೆದ ಬೆಳೆ ಕೈಕೊಟ್ಟ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೇ ಯುವ ರೈತ ನದಿಗೆ ಹಾರಿ ಸೂಸೈಡ್ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜರುಗಿದೆ.

Advertisement

ವಾರಾಹಿ ಹಿನ್ನೀರಿಗೆ ಹಾರಿ 30 ವರ್ಷ ಕೌಶಿಕ್ ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಇವರು ಕೈಮರ ಸಮೀಪದ ಹಾಗಲಮನೆ ವಾಸಿ ಎನ್ನಲಾಗಿದೆ. ಅವಿವಾಹಿತ ಕೌಶಿಕ್ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದರು. ಆದರೆ ಅವರು ಮಾಗರವಲ್ಲಿ ಸೊಸೈಟಿ, ಧರ್ಮಸ್ಥಳ ಸಂಘ, ಮೈಕ್ರೋ ಫೈನಾನ್ಸ್ ಸೇರಿದಂತೆ ಹಲವು ಕಡೆ ಬಡ್ಡಿಗೆ ಸಾಲ ಪಡೆದಿದ್ದರು.

ಇದೇ ಹೊರೆಯಾಗಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಅಡಕೆಗೆ ಕಾಣಿಸಿಕೊಂಡಿರುವ
ಎಲೆ ಚುಕ್ಕಿ ರೋಗದಿಂದ ಒಂದೆಡೆ ರೈತ ಕಂಗೆಟ್ಟಿದ್ದ. ಹೀಗಾಗಿ ಸಾಲ ತೀರಿಸಲು ದಿಕ್ಕೇ ತೋಚದಂತಾಗಿ ಸೂಸೈಡ್ ಮಾಡಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here