ಬೆಂಗಳೂರು: ನಟ ದರ್ಶನ್ ಅವರ ಪ್ರಕರಣದ ತನಿಖೆ ಭರದಿಂದ ಸಾಗುತ್ತಿದೆ. ಶೀಘ್ರವೇ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಅಲ್ಲಿವರೆಗೆ ದರ್ಶನ್ಗೆ ಜೈಲೇ ಗತಿ ಆಗಲಿದೆ. ಆ ಬಳಿಕ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಈ ಮಧ್ಯೆ ದರ್ಶನ್ ಅವರನ್ನು ಎ2 ಆರೋಪಿ ಸ್ಥಾನದಿಂದ ಎ1 ಆರೋಪಿಯನ್ನಾಗಿ ಮಾಡಲು ಸಿದ್ಧತೆ ನಡೆದಿದೆ.
ಇದರ ಬೆನ್ನಲ್ಲೇ ದರ್ಶನ್ರ ಅಭಿಮಾನಿಯೊಬ್ಬ, ದರ್ಶನ್ ಚಿತ್ರವನ್ನು ಕೊರಳಿಗೆ ಹಾಕಿಕೊಂಡು ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ಹುಚ್ಚಾಟ ಮೆರೆದಿದ್ದಾನೆ. ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಅವರನ್ನು ಬಿಡುಗಡೆ ಮಾಡಬೇಕು ಎಂದಿದ್ದಾನೆ. ಕರುನಾಡ ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್ ನೂರೊಂದು ತೆಂಗಿನ ಕಾಯಿ ಹೊಡೆದು ಉರುಳು ಸೇವೆಗೆ ಯತ್ನ ಮಾಡಿದ್ದಾನೆ. ಉರುಳು ಸೇವೆ ಮಾಡಲು ಮುಂದಾದಾಗ ಪೋಲೀಸರು ಅಡ್ಡಗಟ್ಟಿದ್ದಾರೆ. ಕೊನೆಗೆ ಪೊಲೀಸರು ಆತನನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದಾರೆ.