ಬೆಂಗಳೂರು: ಡಿಸಿಎಂ, ತಾನೇ ಗೆದ್ದು ತಂದಿದ್ದೇನೆ ಎನ್ನುವಂತೆ ಕಪ್’ಗೆ ಮುತ್ತಿಟ್ಟುಕೊಳ್ತಿದ್ರು ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿಸಿಎಂ, ತಾನೇ ಗೆದ್ದು ತಂದಿದ್ದೇನೆ ಎನ್ನುವಂತೆ ಕಪ್ಗೆ ಮುತ್ತಿಟ್ಟುಕೊಳ್ತಿದ್ರು ಎಂದು ಹೆಚ್ಡಿ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ರು.
ಈ ಸರ್ಕಾರ ಎರಡು ಕಡೆ ಯಾವ ಆಧಾರದಲ್ಲಿ ಕಾರ್ಯಕ್ರಮ ಮಾಡಿದೆ? ಅಧಿಕಾರಿಗಳು ಸಲಹೆ ಕೊಟ್ಟರು ಬಡವರ ಜೀವನದಲ್ಲಿ ಚೆಲ್ಲಾಟ ಆಡಿಬಿಟ್ರು. ಇಷ್ಟು ಸಾವು- ನೋವುಗಳಾಗ್ತಿದ್ರೂ, ಇತ್ತ ಸಿಎಂ ಮೊಮ್ಮಗನನ್ನು ಕರೆದುಕೊಂಡು ಜನಾರ್ದನ್ ಹೋಟೆಲ್ಗೆ ಬಾದಾಮಿ ಹಾಲು, ದೋಸೆ ತಿನ್ನೋಕೆ ಹೋಗಿದ್ರು ಎಂದು ಕಿಡಿಕಾರಿದ್ರು.
ಡಿಕೆ ಶಿವಕುಮಾರ್ ಕ್ರೆಡಿಟ್ ತೆಗೆದುಕೊಳ್ಳಲು ಈ ರೀತಿ ಮಾಡಿದ್ದಾರೆ. ತಮ್ಮ ಪಟಾಲಂ ಕರೆದುಕೊಂಡು ನೇರವಾಗಿ ಹೆಚ್ಎಎಲ್ ಗೆ ಹೋದ್ರು. ಇವರ ಕೈಯಲ್ಲಿ ಕನ್ನಡ ಫ್ಲಾಗ್ ಗಳು, ಆದ್ರೆ ಕತ್ತಲ್ಲಿ ಯಾವುದೋ ಸ್ಟೈಲ್ ಟವಲ್ ಅಂತೆ. ಅಲ್ಲಿ ಸ್ಟೈಲ್ ಮಾಡಿಕೊಂಡು ಬ್ರಾಂಡ್ ಬೆಂಗಳೂರು ಅಂತಾ ತೋರಿಸೋಕೆ ಕಾರಿನಲ್ಲೇ ಆರ್ಸಿಬಿ ಫ್ಲಾಗ್ ಹಿಡಿದು ಪೋಸ್ ಕೊಟ್ಟಿದ್ದಾರೆ ಎಂದು ಹೆಚ್ಡಿಕೆ ವ್ಯಂಗ್ಯ ಮಾಡಿದ್ರು.