ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ತಾಲೂಕಿನ ಹಾಲುಮತ ಸಮಾಜದ ಹಿರಿಯರು, ಕೆಪಿಸಿಸಿ ಸದಸ್ಯರಾಗಿದ್ದ ದಿ. ಯು.ಎನ್. ಹೊಳಲಾಪುರ ಅವರ ಜನ್ಮದಿನದ ಪ್ರಯುಕ್ತ ತಾಲೂಕಿನ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ಬುಕ್ ಮತ್ತು ಪೆನ್ ವಿತರಿಸಲಾಯಿತು.
Advertisement
ಸೋಮವಾರ ಬಾಲೆಹೊಸೂರ ಗ್ರಾಮದ ಸರ್ಕಾರಿ ಶಾಲೆಯ 300 ಮಕ್ಕಳಿಗೆ ನೋಟ್ಬುಕ್-ಪೆನ್ ವಿತರಿಸಲಾಯಿತು. ಗ್ರಾಮದ ಬಸವರಡ್ಡಿ ಹನುಮರಡ್ಡಿ, ಯಲ್ಲಪ್ಪ ಸೂರಣಗಿ, ಫಕ್ಕೀರೇಶ ಮ್ಯಾಟಣ್ಣವರ, ಬಸವರಾಜ ಗೂಳಣ್ಣವರ, ಮಾಹಾಂತೇಶ ಈರಗಾರ, ಜುಂಜಪ್ಪ ಮುದಿಯಮ್ಮನವರ, ಜಗದೀಶ ಜೊಗೇರ, ಶಾಮಣ್ಣ ಕಡೇಮನಿ, ನರೆಂದ್ರಪ್ಪ ಜಾಲವಾಡಗಿ, ಕರಿಯಪ್ಪ ಸಾದ್ಲಿ, ಪಕ್ಕಿರಯ್ಯ ಹಿರೇಮಠ ಸಿದ್ದಲಂಗಾಸ್ವಾಮಿ ಪಶುಪತಿಮಠ ಇದ್ದರು.