HomeGadag Newsಬರ ಪರಿಶೀಲನೆಗೆ ಆಗಮಿಸಿದ್ದ ಡಿಕೆಶಿಗೆ ಕ್ವಿಂಟಲ್‌ಗೂ ಹೆಚ್ಚು ತೂಕದ ಸೇಬಿನ ಮಾಲೆ, ಅದ್ದೂರಿ ಸ್ವಾಗತ!

ಬರ ಪರಿಶೀಲನೆಗೆ ಆಗಮಿಸಿದ್ದ ಡಿಕೆಶಿಗೆ ಕ್ವಿಂಟಲ್‌ಗೂ ಹೆಚ್ಚು ತೂಕದ ಸೇಬಿನ ಮಾಲೆ, ಅದ್ದೂರಿ ಸ್ವಾಗತ!

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬರ ಪರಿಸ್ಥಿತಿ ಪರಿಶೀಲನೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಮುಗಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ ಲಕ್ಷ್ಮೇಶ್ವರಕ್ಕೆ ಆಗಮಿಸಿ ರೈತರು ಹಾಗೂ ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಿದರು.

ಬಳಿಕ ಕಾರಿನಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ತೆರಳಿ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಶ್ರೀಗಳ ಅಜ್ಜಯ್ಯನ ಕೃತ್ಯ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಶಿಗ್ಲಿ ನಾಕಾದಲ್ಲಿ ಕಾಂಗ್ರೆಸ್‌ನ ಅಪಾರ ಸಂಖ್ಯೆಯ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.

ಕ್ರೇನ್ ಮೂಲಕ ಸೇಬಿನ ಮಾಲೆ!

ಡಿ.ಕೆ. ಶಿವಕುಮಾರ್ ಅವರ ಸ್ವಾಗತಕ್ಕಾಗಿ ಕಾರ್ಯಕರ್ತರು ೧ ಕ್ವಿಂಟಲ್ ೨೫ ಕೆಜಿ ತೂಕದ ಬೃಹತ್ ಸೇಬಿನ ಹಣ್ಣಿನ ಮಾಲೆಯನ್ನು ಸಿದ್ಧಪಡಿಸಿದ್ದರು. ಕ್ರೇನ್ ಮೂಲಕ ಬೃಹತ್ ಮಾಲೆಯನ್ನು ಹಾಕಿ ಕಾರ್ಯಕರ್ತರು ತಮ್ಮ ಅಭಿಮಾನ ಮೆರೆದರು.

ಈ ವೇಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆರತಿ ಮೂಲಕ ಸ್ವಾಗತಿಸಿದರು.

ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದಲೂ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ರೈತರು ಸೇರಿದಂತೆ ಸಾರ್ವಜನಿಕರಿಂದ ವಿವಿಧ ಮನವಿಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮುಕ್ತಿಮಂದಿರ ಧರ್ಮಕ್ಷೇತ್ರದತ್ತ ಪ್ರಯಾಣ ಬೆಳೆಸಿದರು.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಶಿಗ್ಲಿ ನಾಕಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಈ ವೇಳೆ ಜಿ.ಎಸ್. ಗಡ್ಡೆದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆನಂದ ಗಡ್ಡೆದೇವರಮಠ, ಚನ್ನಪ್ಪ ಜಗಲಿ, ಸೋಮಣ್ಣ ಬೆಟಗೇರಿ, ಪದ್ಮರಾಜ ಪಾಟೀಲ, ಜಿ.ಆರ್. ಕೊಪ್ಪದ, ಮಹೇಶ ಲಮಾಣಿ, ದೀಪಕ ಲಮಾಣಿ, ಮಂಜುನಾಥ ಶೆರಸೂರಿ, ಮುದಕಣ್ಣ ಗದ್ದಿ, ಯಲ್ಲಪ್ಪ ಹಂಜಿ, ನೀಲಪ್ಪ ಶೆರಸೂರಿ, ಶರಣು ಗೋಡಿ, ಯಲ್ಲಪ್ಪ ತಳವಾರ, ಗೋವಿಂದಗೌಡ ಪಾಟೀಲ, ಅಫಜಲ್‌ಖಾನ್ ರಿತ್ತಿ, ವಿರೇಂದ್ರಗೌಡ ಪಾಟೀಲ, ಮುತ್ತಣ್ಣ ಗಡೆಪ್ಪನವರ, ಶಿದ್ದು ಪೂಜಾರ, ಭರತ ಬಳಿಗಾರ, ಮಂಜಣ್ಣ ಶೆರಸೂರಿ, ರಾಮಣ್ಣ ರಿತ್ತಿ, ಅಣ್ಣಪ್ಪ ರಾಮಗೇರಿ, ಬಸವರೆಡ್ಡಿ ಹನುಮರೆಡ್ಡಿ, ಕೊಟೆಪ್ಪ ವರ್ದಿ, ನೀಲಪ್ಪ ಪಡಗೇರಿ, ರಾಜು ಕುರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img