HomeBengaluru Newsನಂದಿನಿ ತುಪ್ಪ, ಬೆಣ್ಣೆ ದರ ಏರಿಕೆ; ಗ್ರಾಹಕರ ಜೇಬಿಗೆ ಮತ್ತೆ ಬಿತ್ತು ಹೊರೆ!

ನಂದಿನಿ ತುಪ್ಪ, ಬೆಣ್ಣೆ ದರ ಏರಿಕೆ; ಗ್ರಾಹಕರ ಜೇಬಿಗೆ ಮತ್ತೆ ಬಿತ್ತು ಹೊರೆ!

For Dai;y Updates Join Our whatsapp Group

ಬೆಂಗಳೂರು: ರಾಜ್ಯದ ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಬಿಸಿ ತಟ್ಟಿದೆ.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಂದಿನಿ ಬ್ರ್ಯಾಂಡ್‌ನ ತುಪ್ಪ ಮತ್ತು ಬೆಣ್ಣೆ ದರವನ್ನು ಹೆಚ್ಚಳ ಮಾಡಿದ್ದು, ಪರಿಷ್ಕೃತ ದರಗಳು ನಾಳೆಯಿಂದ ಜಾರಿಗೆ ಬರಲಿವೆ.

ಹೊಸ ದರದ ಪ್ರಕಾರ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ ₹15 ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ ₹22 ಹೆಚ್ಚಳವಾಗಿದೆ. ಇದರಿಂದ ದಿನನಿತ್ಯದ ಬಳಕೆಯ ಹಾಲಿನ ಉತ್ಪನ್ನಗಳ ಖರೀದಿ ಗ್ರಾಹಕರಿಗೆ ಮತ್ತಷ್ಟು ದುಬಾರಿಯಾಗಲಿದೆ.

ಸದ್ಯ ನಂದಿನಿ ತುಪ್ಪ ಪ್ರತಿ ಕೆಜಿಗೆ ₹700 ದರದಲ್ಲಿದ್ದು, ನಾಳೆಯಿಂದ ₹715ಕ್ಕೆ ಮಾರಾಟವಾಗಲಿದೆ. ಇದೇ ವೇಳೆ ಬೆಣ್ಣೆಯ ದರದಲ್ಲೂ ಏರಿಕೆ ಮಾಡಲಾಗಿದ್ದು, ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವತಿಯಿಂದ ಈ ದರ ಪರಿಷ್ಕರಣೆ ಮಾಡಲಾಗಿದ್ದು, ರಾಜ್ಯದ ಎಲ್ಲಾ ಕೆಎಂಎಫ್ ಮಳಿಗೆಗಳಲ್ಲೂ ಹೊಸ ದರ ಅನ್ವಯವಾಗಲಿದೆ.

ಹಾಲು ಉತ್ಪನ್ನಗಳ ಬೆಲೆ ಏರಿಕೆಯ ಪರಿಣಾಮ ಕೇವಲ ಮನೆ ಬಳಕೆದಾರರಿಗಷ್ಟೇ ಸೀಮಿತವಾಗದೆ, ಹೋಟೆಲ್ ಹಾಗೂ ಆಹಾರ ಉದ್ಯಮದ ಮೇಲೂ ಬೀರುವ ಸಾಧ್ಯತೆ ಇದೆ. ತುಪ್ಪ ಮತ್ತು ಬೆಣ್ಣೆ ಬಳಕೆ ಮಾಡುವ ವ್ಯಾಪಾರಿಗಳಿಗೆ ಹೆಚ್ಚುವರಿ ವೆಚ್ಚದ ಹೊರೆ ಎದುರಾಗುವ ನಿರೀಕ್ಷೆ ಇದೆ.

ಕಚ್ಚಾ ವಸ್ತುಗಳ ಬೆಲೆ, ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ. ಆದರೆ ಸತತ ಬೆಲೆ ಏರಿಕೆಗಳಿಂದ ಗ್ರಾಹಕರ ಮಾಸಿಕ ಖರ್ಚಿನ ಮೇಲೂ ಪರಿಣಾಮ ಬೀರುವಂತಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img