ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಶ್ರೀ ವೀರಭದ್ರೇಶ್ವರ ಸಿನಿ ಕ್ರಿಯೇಷನ್ ಅವರ ಮನು ಸಹಕಾರದ `ನೀ ಸಿಗುವ ಮೊದಲು’ ಎಂಬ ಸ್ಟೋರಿ ಕಂಟೆಂಟ್ ಆಲ್ಬಮ್ ಸಾಂಗ್ ಹಾಗೂ ಹೊಸ ಚಲನಚಿತ್ರದ ಪೋಸ್ಟರನ್ನು ಚಲನಚಿತ್ರ ನಟ ಧ್ರುವ ಸರ್ಜಾ ಬಿಡುಗಡೆ ಮಾಡಿ ಯುವ ಕಲಾವಿದರಿಗೆ, ತಂಡಕ್ಕೆ ಶುಭ ಕೋರಿದರು.
ಖ್ಯಾತ ನಟ ಧ್ರುವ ಸರ್ಜಾ ಅವರು ಪೋಸ್ಟರ್ ಬಿಡುಗಡೆ ಮಾಡಿ ಪ್ರೋತ್ಸಾಹಿಸಿ ಶುಭ ಹಾರೈಸಿರುವುದು ನಮ್ಮ ಭಾಗ್ಯ. ನಿಜಕ್ಕೂ ನಮ್ಮ ತಂಡಕ್ಕೆ ಖುಷಿಯಾಗಿದೆ. ಚಿತ್ರದಲ್ಲಿ ಕಲಾವಿದರಾದ ಮೋಹನ್ ಬಿ ಮತ್ತು ಅಶ್ವಿನಿ ಶೆಟ್ಟಿ ಮನೋಜ್ಞವಾಗಿ ನಟಿಸಿದ್ದಾರೆ. ಸದ್ಯ ಆಲ್ಬಂ ಸಾಂಗ್ ಮಾತ್ರ ಬಿಡುಗಡೆ ಮಾಡುತ್ತಿದ್ದು, ಇದೇ ಹೆಸರಿನಲ್ಲಿ ಚಲನಚಿತ್ರ ನಿರ್ಮಾಣ ತಯಾರಿ ನಡೆಸಿದ್ದೇವೆ. ಶೀಘ್ರದಲ್ಲೇ ಚಿತ್ರೀಕರಣ ಕೂಡ ಆರಂಭಿಸುತ್ತೇವೆ ಎಂದು ನಿರ್ದೇಶಕ ರಘು ತಿಳಿಸಿದರು.
ಚಿತ್ರಕಥೆ, ನಿರ್ದೇಶನ ರಘು ಅ.ರೂಗಿ, ಸಂಭಾಷಣೆ, ಸಹನಿರ್ದೇಶನ ರಮೇಶ್ ಜಿ.ಆರ್, ಕಥೆ, ಸಾಹಿತ್ಯ, ಸಂಗೀತ ವಿಶಾಲ್ ಆಲಾಪ್, ಹಿನ್ನೆಲೆ ಸಂಗೀತ ಎ.ಟಿ. ರವೀಶ್, ಸಂಕಲನ, ಛಾಯಾಗ್ರಹಣ ಪ್ರೀತಮ್ ಪೂಜಾರಿ, ಗಾಯನ ವಿಶಾಕ್ ನಾಗಲಾಪುರ, ಕೀರ್ತನ ಚಂದ್ರು, ಮ್ಯುಜಿಷಿಯನ್ ಅಭಿನವ್ ಅಯ್ಯಂಗಾರ್, ಸೌಂಡ್ ಇಂಜಿನಿಯರ್ ವಿಜಯ್ ಅರುಣ್, ರಘು ರೂಗಿ, ಪ್ರೋಗ್ರಾಮ್ ತೇಜಸ್ ಮತ್ತು ಆಕಾಶ್, ಮಾಸ್ಟರಿಂಗ್-ಮಿಕ್ಸಿಂಗ್ ಸುರಾಜ್ ಎಸ್.ವಾಸುದೇವ್, ಸಹಾಯ ಭಗವತಿ ಕಾಟೇಜ್ (ಮಡಿಕೇರಿ), ಮೋದಿ ತಳವಾರ, ಪ್ರೊಡಕ್ಷನ್ ಮ್ಯಾನೇಜರ್ ರಾಹುಲ್ ಎನ್.ಎಚ್, ಮಾಧ್ಯಮ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ನಿರ್ಮಾಪಕರು ವನಿ ಕಾಂತರಾಜ್ (ಬೇಲೂರು) ಆಗಿದ್ದಾರೆ.