ಬೆಂಗಳೂರು: ಒಕ್ಕೂಟದ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯಗಳಿಗೆ ಅನ್ಯಾಯ ಆಗಬಾರದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆಗೆ ಕಾಂಗ್ರೆಸ್ ವಿರೋಧ ವಿಚಾರದ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಒಕ್ಕೂಟದ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯಗಳಿಗೆ ಅನ್ಯಾಯ ಆಗಬಾರದು.
Advertisement
ಸ್ವಾತಂತ್ರ್ಯ ಬಂದ ನಂತರದಿಂದ 50 ವರ್ಷ ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಮಾಡಿದೆ. ಎಲ್ಲಾ ಲೋಕಸಭೆ, ಸಂಪೂರ್ಣ ಬಹುಮತ ಕಾಂಗ್ರೆಸ್ಗೆ ಇತ್ತು. ಅದಾದ ನಂತರ ಕೆಲ ಬದಲಾವಣೆ ಆಗಿದೆ. ಈ ಕಾಂಗ್ರೆಸ್ ಅವರಿಗೆ ಸ್ವಲ್ಪ ಮನವರಿಕೆ ಆಗಿದೆ.
ಏನೋ ತಪ್ಪು ಆಗಿದೆ ಎಂದು ಧ್ವನಿ ಎತ್ತಿದ್ದಾರೆ. ಯಾವ ರೀತಿ ಗೈಡ್ಲೈನ್ಸ್ ಬರುತ್ತೆ ನೋಡೋಣ. ದಕ್ಷಿಣ ಭಾರತದ ವಿಚಾರದಲ್ಲಿ ಯಾವ ರೀತಿ ವಾತಾವರಣ ನಿರ್ಮಾಣ ಆಗುತ್ತೋ ಹಾಗೆ ಚರ್ಚೆ ಮಾಡೋಣ ಎಂದು ತಿಳಿಸಿದರು.