ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಅಕ್ಕನ ಬಳಗದಲ್ಲಿ ಅಕ್ಕನ ಜಯಂತಿ ಉತ್ಸವದ ಅಂಗವಾಗಿ 4ನೇ ದಿನವಾದ ಮಂಗಳವಾರ ಅಕ್ಕಮಹಾದೇವಿಯನ್ನು ತೊಟ್ಟಲಿಗೆ ಹಾಕಿ ಹೆಸರಿಡುವ ಹಾಗೂ ಮುತ್ತೈಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಉಡಿ ತುಂಬುವ ಸೇವೆಯನ್ನು ಅನುಪಮಾ ಅಮರೇಶ್ವರ ಮಾಳೆಕೊಪ್ಪಮಠ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷೆ ಅನ್ನಪೂರ್ಣ ಮಾಳೆಕೊಪ್ಪಮಠ, ಕಾರ್ಯದರ್ಶಿ ರೇಣುಕಾ ಎಲ್.ಅಮಾತ್ಯ, ಖಜಾಂಚಿ ಜಯಲಕ್ಷ್ಮಿ ವಿ.ಬಳ್ಳಾರಿ, ಟ್ರಸ್ಟಿಗಳಾದ ನಾಗರತ್ನ ಹುಬ್ಬಳ್ಳಿಮಠ, ಗೀತಾ ಮಾನ್ವಿ, ಶಶಿರೇಖಾ ಶಿಗ್ಲಿಮಠ, ಶಾರದಾ ಹಿರೇಮಠ, ಶಾಂತ ಸಂಕನೂರು, ಶಿವಲೀಲಾ ಕುರುಡಗಿ, ಸದಸ್ಯರಾದ ಪ್ರೀತಿ ಶಿವಪ್ಪನಮಠ, ಮಂಗಳ ನಲವತವಾಡಮಠ, ಶಿವಲೀಲಾ ಅಕ್ಕಿ, ಸುವರ್ಣ ಹೊಸಂಗಡಿ, ವಿದ್ಯಾ ತಡಿ. ಮಹಾಂತ ಹಿರೇಮಠ, ಖುಷಿ ಮುದೇಗಣ್ಣವರ, ಶಿವಲೀಲಾ ಹಿರೇಮಠ, ಶೋಭಾ ಪಟ್ಟಣಶೆಟ್ಟಿ, ಮಾಧುರಿ ಮಳೆಕೊಪ್ಪ, ಸುಜಾತ ಬಳ್ಳಾರಿ, ಕಮಲ ಭೂಮಾ, ಗಿರಿಜಾ ನಲವತವಾಡಮಠ, ಮಂಜುಳಾ ಹುಬ್ಬಳ್ಳಿಮಠ, ಪ್ರಭಾವತಿ ಯಳಮಲಿ ನಿರ್ಮಲ ಹುಬ್ಬಳ್ಳಿಮಠ, ಸುಜಾತಾ ಬಳ್ಳಾರಿ, ಲತಾ ಪತ್ತಾರ, ಶಿವಲೀಲಾ ಹಿರೇಮಠ ಶಕುಂತಲಾ ಉಪಸ್ಥಿತರಿದ್ದರು.