Home Blog Page 3167

ನಟಿ ಕಂಗನಾ ದೇಹದಲ್ಲಿ ಕೊರೊನಾ ಪಾರ್ಟಿ ಮಾಡುತ್ತಿದೆಯಂತೆ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಸದಾ ವಿವಾದ್ಮಕ ಟ್ವಿಟ್ ಮಾಡಿ ಸುದ್ದಿಯಲ್ಲಿರುತ್ತಿದ್ದ ಕಂಗನಾ ಅವರ ಟ್ವೀಟರ್ ಖಾತೆಯನ್ನು ಇತ್ತಿಚೇಗಷ್ಟೇ ಅಮಾನತು ಮಾಡಲಾಗಿದೆ. ಇದೀಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.

ಸೆಲೆಬ್ರೆಟಿಸ್‌ ಗಳಿಗೂ ಕೊರೊನಾ ಸೋಂಕು ಬಿಡುತ್ತಿಲ್ಲ. ಇದೀಗ ಕಾಂಟ್ರವರ್ಸಿ ಕ್ವೀನ್ ಕಂಗನಾ ರಾಣಾವತ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ವಿಷಯವನ್ನು ತಮ್ಮ ಇನ್‌ ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಅವರು, ಕೆಲವು ದಿನಗಳಿಂದ ಸುಸ್ತು ಹಾಗೂ ಕಣ್ಣು ಉರಿ ಕಾಣಿಸಿಕೊಂಡಿತ್ತು.

ಇನ್ನೂ ಇದೇ ಕಾರಣದಿಂದ ಹಿಮಾಚಲ ಪ್ರದೇಶದಲ್ಲಿರುವ ತಮ್ಮ ಮನೆಗೆ ಹೋಗುವುದಕ್ಕಾಗಿ ಕಂಗನಾ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸದ್ಯ ಕೋವಿಡ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದಾರೆ. ಕೊರೋನಾ ವೈರಸ್ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ ಎಂದು ನನಗೆ ಗೊತ್ತಾಗಿಲ್ಲ. ಆದರೆ, ಇನ್ನು ಅದನ್ನು ನನ್ನ ದೇಹದಲ್ಲಿ ಇರಲು ಬಿಡುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.

ಕೇವಲ 150 ರೂಪಾಯಿಯಲ್ಲಿ ಮದುವೆ ಮಾಡಿಕೊಂಡ ಜೋಡಿ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಸಾಮಾನ್ಯವಾಗಿ ಸ್ಟಾರ್ ನಟರ ಮದುವೆ ಎಂದರೆ ಅಲ್ಲಿ ಆಡಂಬರ ಹಾಗೂ ಅದ್ದೂರಿ ಖಚಿತ ಎಂಬುವುದೇ ಎಲ್ಲರ ಭಾವನೆ. ಆದರೆ, ಇಲ್ಲೊಬ್ಬ ನಟರು ಇದಕ್ಕೆ ಪರ್ಯಾಯವಾಗಿ ಸುದ್ದಿಯಾಗಿದ್ದಾರೆ.

ವಿರಫ್ ಪಟೇಲ್ ತಮ್ಮ ಬಹುಕಾಲದ ಗೆಳತಿ ಸಲೋನಿ ಜೊತೆ ಅತ್ಯಂತ ಸರಳವಾಗಿ ಅದೂ ಕೇವಲ ರೂ. 150 ರ ಖರ್ಚಿನಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಪಟೇಲ್ ಹಿಂದಿ ಕಿರುತೆರೆಯ ಸ್ಟಾರ್ ನಟ. ಮಾಹಿ ವೆ, ಕಿಸ್ಮತ್ ಹೀಗೆ ಹಲವಾರು ಸ್ಟಾರ್ ಧಾರವಾಹಿಗಳಲ್ಲಿ ಮಿಂಚಿದ್ದಾರೆ.

ಈ ಜೋಡಿ ಬಿಹಾರದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಲು ತಯಾರಿ ನಡೆಸಿದ್ದರು. ಇದಕ್ಕೆ ಬೇಕಾದ ಸಿದ್ಧತೆಗಳು ಕೂಡ ಭರದಿಂದ ಸಾಗುತ್ತಿತ್ತು. ಆದರೆ, ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ಇವರಿಬ್ಬರು ಸರಳವಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಅದೇ ರೀತಿ ಮಾಡಿಕೊಂಡಿದ್ದಾರೆ.

ಇವರು ಕೇವಲ ರೂ. 150 ರೂಪಾಯಿಗಳಲ್ಲಿ ತಮ್ಮ ಮದುವೆಯನ್ನು ಮಾಡಿಕೊಂಡಿದ್ದಾರೆ. ಮದುವೆ ನೋಂದಣಿ ಮಾಡಲು ನೂರು ರೂಪಾಯಿ ಹಾಗೂ ವಧು-ವರರ ಫೋಟೋಗಳಿಗೆ ರೂ. 50 ಖರ್ಚು ಮಾಡಿದ್ದಾರೆ. ನನಗೂ ಹಾಗೂ ಸಲೋನಿ ಸರಳವಾಗಿ ಮದುವೆಯಾಗಬೇಕು ಎಂದುಕೊಂಡಿದ್ದೆ. ಹಾಗೆಯೇ ನಡೆದಿದೆ. ಈ ಮದುವೆಗಾಗಿ ಕರ್ಚು ಮಾಡಬೇಕೆಂದಿದ್ದ ಹಣವನ್ನೇ ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಬೇಕು ಎಂದು ಅಂದುಕೊಂಡಿದ್ದೆವ ಎಂದು ಈ ಜೋಡಿ ಹೇಳಿದೆ.

ಸಮಾಜವೇ ಮೆಚ್ಚುವಂತಹ ಕಾರ್ಯ ಮಾಡುತ್ತಿದ್ದಾನೆ ಈ ರೌಡಿ ಶೀಟರ್!


ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿದೆ. ಹೀಗಾಗಿ ಜಗತ್ತಿನ ಬಹುತೇಕ ಆಸ್ಪತ್ರೆಗಳು ರೋಗಿಗಳ ಪ್ರಾಣ ಉಳಿಸಿ ಕೊಳ್ಳಲು ಸತತ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಸೊಂಕಿತರನ್ನು ಕರೆತರಲು ಅಂಬ್ಯುಲೆನ್ಸ್ ಗಳೂ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೆಲೆಬ್ರಿಟಿಗಳು, ಸಂಘ – ಸಂಸ್ಥೆಗಳು ಹಾಗೂ ಹಲವು ಶ್ರೀಮಂತರು ಜನ ಸೇವೆಗೆ ಮುಂದಾಗಿದ್ದಾರೆ. ಇವರೆಲ್ಲರ ಮಧ್ಯೆ ಇಲ್ಲೊಬ್ಬ ರೌಡಿ ಶಿಟರ್ ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಸಲ್ಲಿಸುತ್ತಿದ್ದಾ‌ನೆ.

ಇಲ್ಲಿಯ ಗಣೇಶ ಪೇಟೆ ನಿವಾಸಿ ಇರ್ಷಾದ್ ಬಳ್ಳಾರಿ ಉರ್ಫ್ ಬಲ್ಲಾಶೆಟ್ ಎಂಬ ವ್ಯಕ್ತಿಯು ಸ್ವಯಂ ಆಂಬುಲೆನ್ಸ್ ವಾಹನವನ್ನು ಉಚಿತವಾಗಿ ಸಾರ್ವಜನಿಕ ಸೇವೆಗೆ ನೀಡಿದ್ದಾನೆ. ಅಷ್ಟೇ ಅಲ್ಲ, ಸ್ವತಃ ತಾನೇ ಚಾಲನೆ ಮಾಡುವ ಮೂಲಕ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಕೊರೊನಾದಿಂದ ಮೃತಪಟ್ಟಿರುವ ಮೃತ ದೇಹಗಳನ್ನು ಸಹ ಸಾವಿನ ಹಂಗು ತೊರೆದು ಅಂತ್ಯಕ್ರಿಯೆಗೆ ಕೊಂಡೊಯ್ಯುವುದು ಮಾತ್ರವಲ್ಲದೆ ಬಲ್ಲಾ ಶೇಟ್ ಕೋವಿಡ್ ರೋಗಿಗಳ ಚಿಕಿತ್ಸೆಗೂ ಉಚಿತವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾನೆ.

ಈ ಕಾರ್ಯದಿಂದಾಗಿ ಈ ವ್ಯಕ್ತಿ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ರೌಡಿ ಶಿಟರ್ ಗಳೆಂದರೆ ಒಂದು ಏರಿಯಾದಿಂದ ಮತ್ತೊಂದು ಎರಿಯಾಗೆ ಹೋಗಲು ತನ್ನದೆ ಆದ ಬೆಂಬಲಿಗರನ್ನು ಜೊತೆಗೆ ಇಟ್ಟು ತಿರುಗಾಡುವ ಖಯಾಲಿ ಹೊಂದಿರುತ್ತಾರೆ. ಆದರೆ, ಮನ ಪರಿವರ್ತನೆ ಗಾಗಿ ಕಳೆದ ವರ್ಷದ ಕೋವಿಡ್ -19 ಸಂದರ್ಭದಲ್ಲಿಯೇ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಈ ವ್ಯಕ್ತಿ, ರೋಗದ ವಿರುದ್ಧ ಹೋರಾಟ ನಡೆಸಿ ಸಮಾಜದ ಮೆಚ್ಚುಗೆ ಪಾತ್ರವಾಗಿದ್ದಾನೆ.
ಯಾರಾದರೂ ಕರೆ ಮಾಡಿ ಸಹಾಯ ಕೇಳಿದರೆ ಸಾಕು, ಕೆಲವೇ ಕ್ಷಣದಲ್ಲಿ ಆಂಬುಲೆನ್ಸ್ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿದ್ದಾನೆ.

ಹುಬ್ಬಳ್ಳಿಯ ಯಾವುದೇ ಆಸ್ಪತ್ರೆಯಿಂದ ಕರೆ ಮಾಡಿದರೂ ಇರ್ಷಾದ್ ಸಾರ್ವಜನಿಕ ಸೇವೆಗೆ ಬರುತ್ತಾನೆ. ಅಲ್ಲದೇ, ದಿನದ 24 ಗಂಟೆಯು ಹಗಲು ರಾತ್ರಿ ತನ್ನ ಪರಿವಾರವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾನೆ. ಜಾತಿ, ಧರ್ಮ ಬೇಧ ಮರೆತು ಯಾರೇ ಸಹಾಯಕ್ಕೆ ಕರೆದರೂ ಹೋಗುವುದು ಇತನ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತಿದೆ.
ಒಟ್ಟಿನಲ್ಲಿ ಇರ್ಷಾದ್ ಬಳ್ಳಾರಿ ಅವರ ಕಾರ್ಯ ಇನ್ನೂ ಹೆಚ್ಚು ಹೆಚ್ಚು ವ್ಯಾಪಿಸಲಿ. ಹೆಚ್ಚಿನ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಇವರ ಸಮಾಜ ಸೇವೆ ಇನ್ನುಳಿದ ರೌಡಿಗಳಲ್ಲಿಯೂ ಬದಲಾವಣೆ ತರಲಿ ಎಂಬುವುದು ಎಲ್ಲರ ಆಶಯ.

ಸೋಂಕು ನಿಯಂತ್ರಣಕ್ಕೆ
ಜಿಲ್ಲೆಯಾದ್ಯಂತ ಸೋಮವಾರದಿಂದ ನಿಷೇದಾಜ್ಞೆ ಜಾರಿ; ಡಿಸಿ ಆದೇಶ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973 , ಸಾಂಕ್ರಾಮಿಕ ರೋಗ ಕಾಯ್ದೆ 1897 ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಕೋವಿಡ್-19 ಸರಪಳಿಯನ್ನು ತುಂಡರಿಸಲು ಆದೇಶದಲ್ಲಿ ಅವಕಾಶ ನೀಡಿದ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಿದೆ. ಆದೇಶದಲ್ಲಿ ಹೊರಡಿಸಿರುವ ಷರತ್ತುಗಳಿಗೆ ಒಳಪಟ್ಟು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಅನುಷಾನಗೊಳಿಸುವ ಸಲುವಾಗಿ ಮೇ 10 ರ ಬೆಳಿಗ್ಗೆ 6 ಗಂಟೆಯಿಂದ ಮೇ 24 ರ ಬೆಳಗಿನ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರ ಪ್ರದೇಶಗಳಲ್ಲಿ ರೂ.100 ದಂಡವನ್ನು ವಿಧಿಸಲಾಗುವುದು ಹಾಗೂ ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಎಚ್ಚರ…! ಹಳ್ಳಿ ಹಳ್ಳಿಗೂ ಲಗ್ಗೆಯಿಡುತ್ತಿದೆ ಮಹಾಮಾರಿ ಕೊರೊನಾ!

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಮಹಾಮಾರಿ ಜನರ ನಿರ್ಲಕ್ಷ್ಯದಿಂದಾಗಿ ಹಳ್ಳಿ – ಹಳ್ಳಿಗೂ ಎಂಟ್ರಿ ಕೊಡುತ್ತಿದೆ. ಸದ್ಯ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ 29 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಅಲ್ಲದೇ, ಇದೇ ಗ್ರಾಮದ 1400 ಜನರ ವರದಿ ಇನ್ನೂ ಬಾಕಿ ಉಳಿದಿದೆ. ಹೀಗಾಗಿ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಗ್ರಾಮದ 248 ಜನರನ್ನು ಪರೀಕ್ಷೆ ಮಾಡಲಾಗಿತ್ತು. ಆದರೆ, 29 ಜನರ ವರದಿ ಪಾಸಿಟಿವ್ ಬಂದಿದ್ದು, ಹಲವರ ವರದಿ ಬರುವುದು ಬಾಕಿ ಇದೆ. ಇದು ಆತಂಕಕ್ಕೆ ಕಾರಣವಾಗಿದೆ.

ರಾಮೇಶ್ವರ ಗ್ರಾಮದ ಜನರು ಶೀತ ಹಾಗೂ ಕೆಮ್ಮನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿತ್ತು. ಊರಿನ ಅರ್ಧದಷ್ಟು ಜನ ಈ ರೀತಿ ಬಳಲುತ್ತಿದ್ದರು ಎಂದು ತಿಳಿದು ಬಂದಿತ್ತು. ಹೀಗಾಗಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಸದ್ಯ ಈ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಜನರ ಸಮಸ್ಯೆ ಆಲಿಸಿ ಎಲ್ಲರೂ ಪರೀಕ್ಷೆಗೆ ಒಳಪಡಬೇಕೆಂದು ಮನವಿ ಮಾಡಿದ್ದರು. ಹೀಗಾಗಿ ಗ್ರಾಮದ ಬಹುತೇಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪಾಸಿಟಿವ್ ಬಂದಿರುವವರನ್ನು ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.

ಅಷ್ಟೇ ಅಲ್ಲದೇ, ಗ್ರಾಮದಲ್ಲಿಯೇ ಇನ್ನೂ ಎರಡು ದಿನಗಳ ಕಾಲ ಅಧಿಕಾರಿಗಳು ಉಳಿದು, ಪರೀಕ್ಷೆ ಮಾಡಬೇಕೆಂದು ರೇಣುಕಾಚಾರ್ಯ ತಿಳಿಸಿದ್ದಾರೆ. ಹೀಗಾಗಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಪರೀಕ್ಷೆ ಮಾಡುತ್ತಿದ್ದಾರೆ.

ಮಾಸ್ಕ್ ಹಾಕದಿದ್ದರೆ 100, ಅಂಗಡಿ ತೆರದರೆ 500 ದಂಡ; ಮುತ್ತು ರಾಯರಡ್ಡಿ

ಕೋವಿಡ್-19 ಕಾರ್ಯಪಡೆ ಸಭೆಯಲ್ಲಿ ನಿರ್ಧಾರ

ವಿಜಯಸಾಕ್ಷಿ ಸುದ್ದಿ, ನರಗುಂದ

ಕೋವಿಡ್ ಎರಡನೇ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಕ್ಕ ನರಗುಂದ ಗ್ರಾಮ ಪಂಚಾಯತಿ ಮುಂದಾಗಿದ್ದು, ಗ್ರಾಮದಲ್ಲಿ ಮಾಸ್ಕ್ ಹಾಕದೇ ತಿರುಗುವವರಿಗೆ 100 ರೂ, ದಂಡ, ಹಾಗೂ ಅವಧಿ ಮೀರಿ ಅಂಗಡಿ ಮುಗ್ಗಟ್ಟು ತೆರದವರಿಗೆ 500 ರೂ, ಗಳ ದಂಡ ಹಾಕಲು ತಿರ್ಮಾನ ಕೈಗೊಳ್ಳಲಾಗಿದೆ.

ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅಧ್ಯಕ್ಷ ಮುತ್ತು ರಾಯರಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಕಾರ್ಯಪಡೆಯ ಸಭೆಯಲ್ಲಿ ಈ ತೀರ್ಮಾನ ತಗೆದುಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮುತ್ತು ರಾಯರಡ್ಡಿ, ಗ್ರಾಮದ ಸರಕಾರಿ ಆಸ್ಪತ್ರೆ, ಆವರಣ ಸೇರಿದಂತೆ ಸಿಬ್ಬಂದಿಗಳು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗಿಗಳಿಗೆ ಶುದ್ಧ ಕುಡಿಯುವ ನೀರು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಸಿಬ್ಬಂದಿಗಳು ಗ್ರಾಮದ ಪ್ರತಿ ವಾರ್ಡ್ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಗ್ರಾಮದಲ್ಲಿ ಜನಜಂಗುಳಿ ಸೇರದಂತೆ ಪೊಲೀಸರು ಆಗಾಗ ಗ್ರಾಮಕ್ಕೆ ಭೇಟಿ ಕೊಡಬೇಕು. ಕೊರೊನಾ ಸೋಂಕು ತಡೆಗಟ್ಟಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅಧ್ಯಕ್ಷ ಮುತ್ತು ರಾಯರಡ್ಡಿ ಮನವಿ ಮಾಡಿದರು.

ಪಿಡಿಒ ಶೈನಾಜ್ ಮುಜಾವರ್ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಗ್ರಾಮದ ಪ್ರತಿ ವಾರ್ಡ್ ಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳೋಣ ಎಂದರು.

ಗ್ರಾಮ ಲೆಕ್ಕಾಧಿಕಾರಿ ದೊಡಮನಿ ಮಾತನಾಡಿ, ಕೋವಿಡ್ ಹರಡದಂತೆ ತಡೆಯಲು ಸರಕಾರದ ನಿಯಮಾವಳಿ ಪ್ರಕಾರ ಗ್ರಾಮದಲ್ಲಿ ಹೋಟೆಲ್, ಪಾನ್ ಶಾಪ್, ಬೀಡಾ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಿಸಬೇಕು ಎಂದರು.

ಆರೋಗ್ಯ ಸಹಾಯಕಿ ಶರಾವತಿ ಹಿರೇಮಠ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ, ಮಾಸ್ಕ್ ಹಾಗೂ ಇತರ ಸುರಕ್ಷಿತ ಮಾರ್ಗಗಳ ಕುರಿತು ಮನವರಿಕೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮಾತನಾಡಿ, ಸೋಂಕು ನಿಯಂತ್ರಣಕ್ಕೆ ಹೊರಜಿಲ್ಲೆ, ಹೊರ ರಾಜ್ಯದಿಂದ ಬರುವವರ ಬಗ್ಗೆ ಪ್ರತಿದಿನ ಮಾಹಿತಿ ಸಂಗ್ರಹಿಸಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ತಿಳಿಸಲಾಗಿದೆ. ಗರ್ಭಿಣಿ ಆರೈಕೆ, ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಲು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಹಳೆಮನಿ ಮಾತನಾಡಿ, ಕೊರೊನಾ ಸೋಂಕಿನ ಬಗ್ಗೆ ಈಗಾಗಲೇ ಹಲವು ಬಾರಿ ಮೈಕ್ ಮೂಲಕ ಒಂದು ವಾರಗಳ ಕಾಲ ಪ್ರಚಾರ ಮಾಡಲಾಗಿದೆ. ಆದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಅಧ್ಯಕ್ಷರು, ಪೊಲೀಸ್ ಇಲಾಖೆ ಮೂಲಕ ಮಾಸ್ಕ್ ಧರಿಸದೇ ತಿರುಗಾಡುವಂತಹ ಜನರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಸರ್ಕಾರದ ಆದೇಶದಂತೆ ಕೊರೊನಾ ಕಾರ್ಯಪಡೆ ರಚಿಸಲಾಯಿತು. ನಂತರ ಗ್ರಾಮದಲ್ಲಿ ಸೋಂಕಿನ ಕುರಿತು ಜಾಗೃತಿ ನಡೆಸಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ, ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ್ಣ ಕಂಬಳಿ, ಶರಣಪ್ಪ ಹಳೆಮನಿ, ಬಾಪು ಹಿರೇಗೌಡ್ರ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ಶ್ರುತಿ ಬ್ಯಾಳಿ, ಶಂಕ್ರವ್ವ ಚಲವಾದಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್, ವಿವಿಧ ಇಲಾಖೆಗಳ ಸಿಬ್ಬಂದಿ, ಆಶಾ, ಅಂಗನವಾಡಿ, ಆರೋಗ್ಯ ಇಲಾಖೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗದಗ ಜಿಲ್ಲೆಯಲ್ಲಿ ಕೊರೊನಾ ಸ್ಫೋಟ; 248 ಜನರಿಗೆ ಸೋಂಕು, ಮೂವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 07 ಶುಕ್ರವಾರ ಗದಗ ಜಿಲ್ಲೆಯಲ್ಲಿ ಸೋಂಕು ಸ್ಫೋಟವಾಗಿದೆ. ಕಳೆದ ಮೂರು ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದ್ದ ಸೋಂಕು, ಶುಕ್ರವಾರ ದ್ವಿಶತಕ ದಾಟಿದೆ. 248 ಜನರಿಗೆ ಸೋಂಕು ತಗುಲಿದ್ದು, ಕೋವಿಡ್ ನಿಂದ ಮತ್ತೆ ಮೂವರು ಜನರು ಮೃತಪಟ್ಟಿದ್ದಾರೆ.

ಇಂದಿನ 248 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14035 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -151, ಮುಂಡರಗಿ-19, ನರಗುಂದ-08, ರೋಣ-40, ಶಿರಹಟ್ಟಿ-17, ಹೊರಜಿಲ್ಲೆಯ-13 ಸೇರಿದಂತೆ 248 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ. ಗದಗ ನಗರದ 50 ವರ್ಷದ ಮಹಿಳೆ ಮೇ 01 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದು, ಇನ್ನೊಬ್ಬರು ಮಹಾವೀರ ಕಾಲೋನಿಯ 69 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಮೇ 06 ರಂದು ಮೃತಪಟ್ಟಿದ್ದಾರೆ. ಗದಗನ ಕಳಸಾಪೂರ ರಸ್ತೆಯ ಕೆ ಎಸ್ ಆರ್ಟಿಸಿ ಕಾಲೋನಿಯ 62 ವರ್ಷದ ವ್ಯಕ್ತಿ, ಮೇ 6 ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
153 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 158 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 12809 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1074 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 211 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮೊಹಮ್ಮದ್ ಮೊಹಸಿನ್ ಗದಗ ಜಿ.ಪಂ. ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ವಿಜಯಸಾಕ್ಷಿ ಸುದ್ದಿ, ಗದಗ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 159 ಮತ್ತು 160 ರಡಿ 2016-2021 ರ ಅವಧಿಗೆ ರಚನೆಯಾಗಿದ್ದ ಗದಗ ಜಿಲ್ಲಾ ಪಂಚಾಯತ್ ಆಡಳಿತ ಅವದಿಯು 2021 ರ ಮೇ ತಿಂಗಳ 2 ನೇ ದಿನಾಂಕಕ್ಕೆ ಮುಕ್ತಾಯಗೊಂಡಿದೆ.

ಈ ಹಿನ್ನೆಲೆಯಲ್ಲಿ ಅವಧಿ ಮುಕ್ತಾಯುವಾಗುವ ಮರುದಿನದ ದಿನಾಂಕದಿಂದ ಜಾರಿಗೆ ಬರುವಂತೆ ಗದಗ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿಯನ್ನಾಗಿ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಸಿನ್ ಅವರು ಗದಗ ಜಿಲ್ಲಾ ಪಂಚಾಯತಿಯ ಆಡಳಿತಾದಿಕಾರಿಯ ಅಧಿಕಾರವನ್ನು ವಹಿಸಿಕೊಂಡಿರುತ್ತಾರೆ ಎಂದು ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರಂತರ ಪ್ರೇಮ ಕಾವ್ಯ

ಒಂದು ಸಣ್ಣ ಪ್ರೇಮ ಕಥೆ ನಿಮ್ಮ ಮುಂದೆ,

“ನಾನು ಪ್ರತಿದಿನವೂ ಅಲ್ಲಿಗೆ ಹೋಗುತ್ತಿದ್ದೆ, ಆ ಮರದಡಿಯಲ್ಲಿನ ಖಾಲಿ ಬೆಂಚುಗಳನ್ನು ನೋಡುತ್ತೇನೆ ,ಹೌದು ಅವುಗಳು ಈಗ ಬೆಂಚುಗಳಾಗಿ ಉಳಿದಿವೆ,

“ಆದರೆ ಆ ಬೆಂಚುಗಳು ,ಒಂದು ಪ್ರೇಮ ಕಥೆಗೆ ಸಾಕ್ಷಿ ಯಾಗಿವೆ ,ಅವನಿಗಾಗಿ ಅವಳು ,ಅವಳಿಗಾಗಿ ಅವನು , ಕಾಯುತ್ತ ಕನವರಿಸುತ್ತ ,ಕಂಡ ಹುಸಿ ಮುನಿಸು ತೋರಿಸುತ್ತ ,ಇರುತ್ತಿದ್ದ ಆ ಕಣ್ಣುಗಳು ,

“ಅವರ ಮನದಲ್ಲಿ ಪುಟಿದೇಳುತ್ತಿದ್ದ ತುಮುಲುಗಳು,ಒಬ್ಬರನೊಬ್ಬರು ಕಾಯುತ್ತಿದ್ದ ಕಾತರತೆಯ ಕಣ್ಣುಗಳು ,ಈಗಂತೂ ಕಾಣುತ್ತಿಲ್ಲ ಏಕೆಂದರೆ ಅವರಿಬ್ಬರ ಜೀವನದಲ್ಲಿ ಬಂದ ಪ್ರೀತಿ ಎಂಬ ತಂಗಳಿಯು ಈ ಸಮಾಜದ ಬಿಸಿಯುಸಿರಲ್ಲಿ ಬಿಸಿಯಾಗಿ ಅವರಿಬ್ಬರ ಜೀವನವನ್ನು ದಹಿಸಿ ಮತ್ತೆಲ್ಲಿಯೂ ಸಾಗಿ ಹೋಗಿದೆ,

“ಅವನು ಈಗಲೂ ಅಲ್ಲಿಗೆ ಬರುತ್ತಾನೆ , ಅದೇ ಕಾತರತೆ ,ಅದೇ ತುಮುಲ, ಆದರೆ ಅದೆಲ್ಲ ಬರೀ ನಿರೀಕ್ಷೆ ,ನಿರೀಕ್ಷೆ ಗಳಷ್ಟೇ ,ಏಕೆಂದರೆ ,ಅವನ ಜೀವನ ತಿರುಗಿ ನೋಡಲಾಗದಷ್ಟು ಹಾಳಾಗಿ ಹೋಗಿದೆ, ತಿರುಗಿ ನೋಡಿದರೆ, ಬರೀ ಹಾಳಾದ ರಸ್ತೆ ಯಲ್ಲಿ ಕಾಣುವ ಗುಂಡಿ ಗಳಂತೆ ಇಲ್ಲೊಂದು ಅಲ್ಲೊಂದು ಕಾಡುವ ನೆನಪು, ನೆನಪುಗಳಷ್ಟೇ,

“ಅಂದು ಸಂಜೆ, ಮಳೆ ಜೋರಾಗಿ ಬಲು ಜೋರಾಗಿ ಬರುತ್ತಿದ್ದ ಸಮಯ ,ಅವಳು ಮಳೆಯಲ್ಲಿ ನೆನೆಯುತ್ತಾ ಹೋಗುತ್ತಿದ್ದಳು, ಅಷ್ಟರಲ್ಲಿ ಅವಳಿಗೆ ಮಳೆ ನಿಂತಂತಹ ಅನುಭವ, ಏಕೆಂದರೆ ಅವಳನ್ನು ಯಾವುದೋ ಒಂದು ವಸ್ತು ಮಳೆಯಿಂದ ರಕ್ಷಿಸುತ್ತಲಿತ್ತು, ಹೌದು ಅವನು ,ಅವಳಿಗೆ ಕೊಡೆಯನ್ನು ಹಿಡಿದಿದ್ದ, ಅವಳಿಗೆ ಬೇಡವೆನ್ನಲು ಸಾಧ್ಯವಾಗದೆ ಬೇಕು ಎಂದು ಹೇಳಲಾಗದೇ ಒಂದು ಕ್ಷಣ ಅವನ ಕಡೆ ನೋಡಿ ಸುಮ್ಮನಾಗಿ ಬಿಟ್ಟಳು,

ಅವನು ತನ್ನ ಪರಿಚಯ ಮಾಡಿಕೊಂಡ ಅವಳು ಮೌನಾವಾಗಿದ್ದಳು,”ಆಯ್ತು ತಗೊಳ್ಳಿ ಮಳೆ ಜೋರಾಗಿ ಬಿಳುತ್ತಿದ್ದೆ “ಎಂದು ಅವಳು ಬೇಡವೆಂದರೂ ,ಕೊಡೆಯನ್ನು ಅವಳಿಗೆ ನೀಡಿ ಕ್ಷಣಾರ್ಧದಲ್ಲಿ ಮಳೆಯಲ್ಲಿ ನೆನೆಯುತ್ತ ಮರೆಯಾಗಿದ್ದ,ಅವಳಲ್ಲಿ ಏನೋ ಆತಂಕ,

ಮರುದಿನ ಅವನು ,ಅವಳಿಗಾಗಿ ಅದೇ ಜಾಗದಲ್ಲಿ ಕಾಯುತ್ತಿದ್ದ,ಅವಳು ಬಂದಳು ,ಅವನು ಅವಳನ್ನು ಹಿಂಬಲಿಸತೊಡಗಿದೆ ,ಪ್ರತಿ ದಿನ ಇದೆ ಆಟ ನಡೆಯತೊಡಗಿತ್ತು,ಒಮ್ಮೆ ಅವಳು ಹಿಂತಿರುಗಿ ನಿಂತು ಅವನ್ನೋನಮ್ಮೆ ದಿಟ್ಟಿಸಿ ನೋಡಿ,ನಿನಗೆ ನಾಚಿಕೆಯಗಲ್ವಾ !ಯಾವತ್ತೂ ಒಂದು ದಿನ ಸಹಾಯ ಮಾಡಿದೇ ಅಂತ ಹಿಂದೆ ಬರ್ತೀರಲ್ಲ “ಎಂದಳು, ತಪ್ಪು ತಿಳ್ಕೋಬೇಡ್ರಿ ನಾನು ನಿಮನ್ನು ಹಿಂಬಾಲಿಸುತ್ತಿಲ್ಲ ,ನಾನು ನಿಮ್ಮ ಹಿಂದೇ ಬರುತ್ತಿರುವುದು ನಿಮಗಾಗಿ ಅಲ್ಲ,ನಾನು ಅಂದು ಕೊಟ್ಟ ಕೊಡೆಗಾಗಿ ,ನೀವೇ ಅರ್ಥ ಮಾಡಿಕೊಂಡು ಕೊಡ್ತೀರಾ ಅಂತ ಕಾದೆ ,ನೀವು ತಪ್ಪು ತಿಳಿದುಕೊಂಡರಿ,ನನಗೆ ಆ ಕೊಡೆಯ ಮೇಲೆ ಪ್ರೀತಿ ,ಮೋಹ,ಆರಾಧನಾ ಭಾವ,ಯಾಕ್ ಗೊತ್ತಾ?ಅದೊಂದೇ ನಮ್ಮಪ್ಪ ನನಗೆ ಅಂತ ಬಿಟ್ಟುಹೋದಂತಹ ನೆನಪು,ಅದು ನನ್ನ ಜೊತೆ ಇಲ್ಲ ಅಂದರೆ ಏನೋ ಕಳೆದುಕೊಂಡತಹ ಅನುಭವ,ಅದಕ್ಕೆ ನಿಮ್ಮನ್ನು ಹಿಂಬಾಲಿಸಿದೇ “ಎಂದು ಹೇಳತೊಡಗಿದೆ ,ಅವನನ್ನು ಅವಳು ಗಾಬರಿಯಿಂದ ನೋಡತೊಡಗಿದಳು ,ಏಕೆಂದರೆ ,ಆ ಕೊಡೆ ಕಳೆದು ಹೋಗಿ ತುಂಬಾ ದಿನಗಳೇ ಆಗಿ ಹೋಗಿದ್ದವು,ಅವಳು ಬಿಕ್ಕಳಿಸತೊಡಗಿದಳು ,ಅವನ ಮುಂದೆ ತಲೆ ತಗ್ಗಿಸಿ ನಿಂತಳು “ರಿ ಯಾಕ್ರೀ ಅಳ್ತಿದ್ದೀರ ?ನಾನು ಕೇಳಿದ್ದು ಕೋಡೇನ ,ನಿಮ್ಮ ಹೃದಯಾನ ಅಲ್ಲ”ಎಂದ ಕ್ಷಣದಲ್ಲಿಯೇ ಹುಡುಗನಿಗೆ ಗೊತ್ತಾಗಿ ಹೋಯಿತು ,ಮಾತನಾಡದೆ ,ಅವಳು ಕೂಗಿದರು ತಿರುಗಿ ನೋಡದೆ ಹೊರಟು ಹೋಗಿದ್ದ,

“ಅವಳಲ್ಲಿ, ಅವಳಿಗೆ ಗೊತ್ತುಗದ ಹಾಗೆ ಅವನ ಬಗ್ಗೆ ಭಾವನೆಗಳು ಬೆಳೆಯತೊಡಗಿದಳು,ಕ್ಷಣ ಕ್ಷಣಗಳು ಕೂಡಿ ದಿನವಾಗಿ,ದಿನಗಳು ಕೂಡಿ ತಿಂಗಳಾಗಿ, ತಿಂಗಳು ಕೊಡಿ ಯುಗವಾಗಿ,ಯುಗದ ಯುಗಳ ಗೀತೆ ಹಾಡಲು,ಅವಳ ಮನಸ್ಸು ಹಾತೊರೆಯುತ್ತಿತ್ತು ,ದಿನವೂ ಅವನಿಗಾಗಿ ,ಅವನು ಅವಳಿಗಾಗಿ ಕಾಯುತ್ತಿದ್ದ ಜಾಗದಲ್ಲಿ ಅವಳು ಕಾಯತೊಡಗಿದಳು,ಆದರೂ ಅವನು ಬರಲೇ ಇಲ್ಲ ,

“ಅಂದು ,ಅವನು ಅವಳ ಎದುರಿನಲ್ಲಿ ನಿಂತಿದ್ದು,ಅವಳಲ್ಲಿ ತುಮುಲಗಳು, ಒಂದು ಬಗೆಯ ಗೊಂದಲಗಳು ಕಾಡ ತೊಡಗಿದವು,ಅದನ್ನು ತೋರ್ಗಡದೆ ಅವಳು ಸಾಗಿದಳು ಇವನು ಅವಳ ಪಕ್ಕದಲ್ಲಿ ನಡೆಯುತ್ತಿದ್ದ, ಅವಳು ನಿಂತು ,”ಸಾರಿ ರೀ,ಎಂದಳು ರೀ ನಾನ್ ನನ್ನ ಕೊಡೆಗಾಗಿ ಬರಲಿಲ್ಲ ಕಣ್ರೀ,ಎಂದ, ಮತ್ತೆ ! ಎಂದಳು ” ಕಳೆದುಹೋಗಿರೋ ನನ್ನ ಹೃದಯನಾ ಹುಡುಕಿಕೊಂಡು ಬಂದೆ ,ಅದೇನಾದರು ನಿಮ್ಮ ಏರಿಯಾ ಕಡೆ ಬಂದಿದಿಯೇನೋ ಅಂತ ಬಂದೆ”

“ಸಿಕ್ಕಿದ ಹುಡುಗಿಯರೆಲ್ಲರನ್ನು ಕೇಳ್ತೀರಾ,ಎಂದಳು
ಇಲ್ಲರೀ”ನಿಮ್ಮ ಬಳಿ ಬಂದಾಗಲೆಲ್ಲ ನನ್ನ ಹೃದಯದ ಬಡಿತ “ಲಭ್ ಡಬ್ ಎನ್ನುವ ಬದಲು love -dove ಅನ್ನೋದು ರೀ ಅದಕ್ಕೆ ಹಾಗೇನಾದರು ಆದಿ ತಪ್ಪಿ ಈ ಕಡೆ ಬ0ದಿದ್ದರೆ ಅಂತ ,ಅವಳು ನಕ್ಕಳು,

“ಇಬ್ಬರ ಮನಗಳು ಬೆರೆತು ,ಸ್ವಂಚದವಾಗಿ ಹಾರತೊಡಗಿದವು,ಅಂದಿನಿಂದ ಅವರಿಗೆ ,ಆ ಮರಡಿಯ ಖಾಲಿ ಬೆಂಚು, ಮನೆಯಗತೊಡಗಿತ್ತು ಪ್ರತಿ ದಿನ ಅಲ್ಲೇ ಪ್ರೇಮ ಸಲ್ಲಾಪಗಳು,ಯಾರಾದರೂ ಬೇಗ ಬಂದರೆ ಖಾಲಿ ಬೆಂಚಿನ ಜೊತೆ ಮಾತನಾಡುತ್ತಿದ್ದ ಆ ಕ್ಷಣಗಳು ಅವರಿಗೆ ಇಳೆಗೆ ಸ್ವರ್ಗವಿಳಿದಂತೆ ಆಗಿ ಹೋಗಿತ್ತು,

“ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಪ್ರೇಮಿಸತೊಡಗಿದರು ,ಪ್ರೀತಿನೇ ಹಾಗೆ ರೀ ತನ್ನ ಕಂಬಂದ ಬಾಹುಗಳಿಂದ ಪ್ರೇಮಿಗಳನ್ನು ಅಪ್ಪಿಕೊಂಡರೆ ಮುಗಿತು ಅಲ್ಲಿ ಮತ್ತೆಲ್ಲ ಹೂ ಕಾವ್ಯ ,ಅವರಿಗೆ ಪ್ರೀತಿನೇ ಉಸಿರು ,ಪ್ರೀತಿನೇ ದೇವರು ,ಪ್ರೀತಿನೇ ಭಾಷೆ ,ಜಾತಿ ಎಲ್ಲವೂ ,

“ಅಂದು ಅವಳಿಗೆ ನಿಜವನ್ನು ಹೇಳಿದ್ದ ,ಅವಳಿಗೆ ಕೊಟ್ಟಿದ್ದ ಕೊಡೆಯನ್ನು ಕದಿದ್ದು ಬೇರೆ ಯಾರು ಅಲ್ಲ ಅದು ಅವನೇ ,ಎಲ್ಲ ಅವಳಿಗಾಗಿ ,ಅವಳ ಪ್ರೀತಿಗಾಗಿ, ಮರುದಿನ ಅವಳಿಗಾಗಿ ಕಾಯುತ್ತ ,ಕನವರಿಸುತ್ತ ಕುಳಿತಿದ್ದ,ಆ ಕ್ಷಣಗಳು ಯುಗಗಳಗತೊಡಗಿದವು ,ತುಂತುರು ಮಳೆ ಶುರುವಾಗತೊಡಗಿತ್ತು,ಅವನು ಅಲ್ಲಿಂದ ಏಳಲಿಲ್ಲ ,ಅವಳ ಮೊಬೈಲ್ ಗೆ ರಿಂಗ್ ಮಾಡಿದ ,ರಿಸೀವ್ ಮಾಡಲೇ ಇಲ್ಲ ಅವನು ಚಡಪಡಿಸತೊಡಗಿದೆ ,ಮಳೆ ಜೋರಾಗ ತೊಡಗಿತ್ತು ಅವನು ಕದಲಲಿಲ್ಲ ,ಅವನ ಮನದಲ್ಲಿ ಯಾವುದೋ ಒಂದು ದುಃಸ್ವಪ್ನ ಕಾಡತೊಡಗಿತ್ತು,

“ಇವನ ಮೊಬೈಲ್ ರಿಂಗಾಯಿತು,ಆ ಕಡೆಯಿಂದ ಯಾರದೋ ಬಂದ ಧ್ವನಿ ಪುರುಷನದು, ಕ್ಷಣಾರ್ಧದಲ್ಲಿ ಅವನಿಗೆ ತಿಳಿಯಿತು ,ಆದರೆ ಅದು ಅವನಿಗೆ ಕೇಳಿಸದೆ ಹೋಗಿತ್ತು ,ಏಕೆಂದರೆ ಅವನು ಸರ್ವಸ್ವವೆ ಅವಳೆಂದು ತಿಳಿದುಕೊಂಡು ಪ್ರೀತಿಸಿದ ಅವನ ಆ ಹುಡುಗಿ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿ ಪಂಚಭೂತಗಳಲ್ಲಿ ಲೀನಳಾಗಿದ್ದಳು,ಮಳೆ ನಿಂತಿತು ಅವನು ಅವಳನ್ನು ಎಷ್ಟು ಪ್ರೀತಿಸುತ್ತಿದ್ದ ಎಂದರೆ ಈಗಲೂ ಸಹ ಅವನು ಖಾಲಿ ಬೆಂಚಿನ ಬಳಿ ಬರುತ್ತಾನೆ ,ಅದು ಇಂದು ,ಅಥವಾ ನಾಳೆ ಅವಳು ಬಂದೆ ಬರಬಹುದು ಎಂದು,ಕಾಯುತ್ತ ಕನವರಿಸುತ್ತ ಮತ್ತೆ ಅವಳ ಹುಡುಕಾಟದಲ್ಲಿ ಅತ್ತಿಂದಿತ್ತ ನೋಡುತ್ತಾ ಕೂರುತ್ತಾನೆ,ಅವನ ಕಂಗಳಲ್ಲಿ ತುಂಬಿ ಬರುತ್ತವಾದರು ಕಾಯುತ್ತ ಕೂರುತ್ತಾನೆ,ಈಗ ಪ್ರೀತಿಯ ಸೋನೆ ಮಳೆಯು ನಿಂತಿದೆ ಆದರೆ ಅದರ ಹನಿಗಳಿನ್ನು ನಿಂತಿಲ್ಲ,

ಮುಕ್ತಾಯ”

“ನೆನಪು ಎಂದಿಗೂ ಅಮರ ಅಮರ ಮಧುರ “

✍️ಕವಿತೆಗಳ ಸಾಲಲ್ಲಿ ಲೋಹಿತ್

ಕಣ್ಣಾದವಳು…

ಒಂದು ವೇಳೆ ನಿನಗೆ ನಾ ಸಿಕ್ಕರೆ ನಿನ್ನಲ್ಲಿನ ಮಾತುಗಳು ಯಾವ ರೂಪ ತಾಳಿ ಹೇಳುವೆ ಎಷ್ಟು ದಿನಗಳು ನೀನು ಇಲ್ಲ ಅನ್ನೋ ಕೊರಗು ನನ್ನ ಮನುಷ್ಯ ಅನ್ನೋದನ್ನ ಮರೆಸಿದೆ ಹೇಗೆ ನಿನ್ನ ನೋಡಿದೆ ಯಾಕೆ ನಿನ್ನ ನೋಡಿದೆ ನನ್ನ ಕಣ್ಣಿಗೆ ನೀ ಯಾಕೆ ಬಿದ್ದೆ ಇದೆಲ್ಲವೂ ನನ್ನ ಪ್ರಶ್ನೆಯಾಗಿ ಕಾಡುತ್ತಿದೆ ಯಾವ ಬಂಧವೋ ? ಯಾವ ಅನುರಾಗವೋ ?ನಾ ಕಾಣೆ ನಿನ್ನ ಭಾಹು ಬಂಧನದಲ್ಲಿ ಸಿಲುಕಿ ನರಳಿ ನರಳಿ ನಿನ್ನ ನೆನಪಲ್ಲಿ ಹುಚ್ಚನಾಗಿ ಹೋಗಿದ್ದೇನೆ

“ಹೇಳಲು ನೂರಾರು ಮಾತುಗಳು ಮೂಡುವವು ನೀನು ಜೊತೆಗಿದ್ದಾಗ, ಇಂದು ಅದೇ ತುಟಿಯಿಂದ ಒಂದು ಕಿರುನಗೆಯು ಮೂಡುತ್ತಿಲ್ಲ ಕೈ ಕಾಲುಗಳಿಗೆ ಸ್ವಾಧೀನವೇ ಇದೆಯೋ ಇಲ್ಲವೋ ಅನ್ನೋ ಹಾಗೆ ದಿನಗಳ ಸಾಗಿಸುತ್ತಿದ್ದೇನೆ ,ಎಂದು ಒಂದು ದಿನ ನನ್ನ ಹುಡುಕಿ ಬರುವೆಯೇನೋ ಎಂದು.

“ನೀನಿಲ್ಲದ ಕ್ಷಣಗಳ ನೆನೆಸಿಕೊಂಡರೆ ಮೈಯೆಲ್ಲ ಬಿಸಿಯಾಗಿ ಹಾಕಿದ್ದ ಅಂಗಿ ಕೂಡ ಸುಟ್ಟು ಧಗ ಧಗನೆ ಉರಿದಂತೆ ಅನಿಸುತ್ತಿದೆ ಎಲ್ಲಿ ಹೋದೆ ನೀನು ಬಿಸಿಯಾದ ನನ್ನ ಮನವ ತಣಿಸಲು ನೀನು ಬರಬಾರದೆ ..ಒಂದು ಕ್ಷಣ ನಿನ್ನ ದೂರ ಮಾಡಿ ಇದ್ದವನಲ್ಲ ನಿನ್ನ ಮಡಿಲ ಬಿಟ್ಟು ಅರೆ ಕ್ಷಣವೂ ನಿದ್ದೆ ಹೋದವನಲ್ಲ ನಿನ್ನದೇ ಚಿಂತೆ ನನಗೀಗ …

“ನಿನಗೆ ನೆನಪಿದಿಯ ನಮ್ಮ ಮನೆಯ ಹಿಂಭಾಗದಲ್ಲಿ ಇರುವ ನದಿಯ ಬಳಿಯಲ್ಲಿ ದೋಣಿಯಲ್ಲಿ ಸಾಗಿ ಹೊಂಗೆ ಮರಗಳ ಗುಂಪುಲಿ ನೀನು ನನ್ನ ಕರೆದುಕೊಂಡು ಹೋಗಿ ಮುತ್ತಿನ ಮಳೆಗೆರೆವೆ ಹೊಂಗೆ ಮರದ ಹೂಗಳ ಕಿತ್ತು ನಿನ್ನ ಮುಡಿಯಲ್ಲಿ ಇರಿಸಿ ನಾನು ಹೇಗಿದ್ದೀನಿ ಚೆಂದ ಉಂಟಾ ಎಂದು ಕೇಳುತ್ತಿದ್ದೆ…

“ಅಲ್ಲೇ ಸಣ್ಣದಾಗಿ ಜೇನುಗಳು ಗೂಡು ಕಟ್ಟಿದ್ದು ಕಂಡಾಗ ನೀನು ನನಗೆ ಜೇನು ಬೇಕು ಎಂದು ಹಠ ಮಾಡಿದಾಗ ಹೊಂಗೆ ಮರದ ಎಲೆಗಳನ್ನು ಒಂದೊಂದೇ ಪೋಣಿಸಿ ನನ್ನ ಮುಖವೆಲ್ಲ ಕಾಣದಂತೆ ಮಾಡಿ ,ನನ್ನ ಹೊಟ್ಟೆ ಸುತ್ತಲೂ ಸಣ್ಣ ಸಣ್ಣ ತುಂಡುಗಳ ಮರದ ಎಳೆಯ ಕಡ್ಡಿಗಳನ್ನು ಇಟ್ಟು ದಾರದಲ್ಲಿ ಸುತ್ತಿ ಕಟ್ಟಿ ಸಿಹಿ ಜೇನು ತಂದು ಕೊಡು ಎಂದು ಹಠ ಮಾಡಿ ಜೇನು ಕೀಳಲು ಕಳಿಸುತ್ತಿದ್ದೆ ..

“ನೀನು ಮಾತ್ರ ಮರದ ಹಿಂದೆ ನಿಂತು ಕಣ್ಣು ಮುಚ್ಚಿಕೊಂಡು ಜೇನು ಕಿತ್ತಿದ್ದು ಆಯ್ಥ ಎಂದು ಅಲ್ಲಿಂದಲೇ ಕೇಳುತ್ತಿದ್ದೆ ಎಷ್ಟು ಕಷ್ಟು ಪಟ್ಟು ನಿನಗೆ ಜೇನು ಕಿತ್ತು ನಿನ್ನಲ್ಲಿಗೆ ಬಂದಾಗ” ಬಂಗಾರ ನಿನಗೆ ಏನು ಆಗಿಲ್ಲ ಅಲ್ವಾ ಎಂದು ಕೇಳಿ ಆ ಜೇನನ್ನು ನನಗೆ ಮೊದಲು ತಿನಿಸುತ್ತಿದ್ದೆ ..

“ನಿನಗಾಗಿ ತಂದಿದ್ದು ಎಂದಾಗ ನನಗಾಗಿ ನೀನು ಮೀನಮೇಷ ಎಣಿಸದೆ ಜೇನು ಕೀಳಲು ಹೋದಾಗ ನಿನಗೆ ಏನಾಗುತ್ತದೋ ಎಂಬ ಭಯ ನನ್ನಲಿತ್ತು ನಿನಗೆ ಏನು ಆಗಿಲ್ಲ ! ನನ್ನ ಖುಷಿ ಪಡಿಸುವುದೇ ನಿನ್ನ ಪ್ರೀತಿ ನಿನ್ನ ಪ್ರೀತಿಗಾಗಿ ನಾನು ,ಎಂದು ತಬ್ಬಿ ಹಿಡಿದು ಜೇನು ತಿನ್ನುವರೆಗೂ ನನ್ನ ನೀ ಬಿಡಲೇ ಇಲ್ಲ ..ನನಗೆ ಏನು ಅಗಬಾರದೆಂದು ಹೊಂಗೆ ಮರದ ಕಡ್ಡಿಗಳ ಕಟ್ಟಿದ್ದೇ ಕೂಡ .

“ಈಗಲೂ ಒಬ್ಬನೇ ಇದ್ದಾಗ ಅಲ್ಲಿಗೆ ಹೋಗಿ ಬರುತ್ತೇನೆ ನೀನಿದ್ದಾಗ ಹೊಂಗೆ ಮರದ ಚಿಗುರು ಎಷ್ಟೊಂದು ಸುಂದರವಾಗಿ ಚಿಗುರಿತ್ತು ,ಆದರೆ ನೀನಿಲ್ಲದಾಗ ಆ ಮರದ ಚಿಗುರು ಇಲ್ಲ ,ಆ ಮರದಲ್ಲಿ ಕಿತ್ತು ಮುಡಿದುಕೊಳ್ಳುತ್ತಿದ್ದ ಹೂಗಳ ಗೊಂಚಲು ಇಲ್ಲ ,
ಜೇನು ಕೂಡ ಮತ್ತೆ ಗೂಡು ಕಟ್ಟಿಲ್ಲ ,ನಿನ್ನ ಜೊತೆಗೆ ಇದ್ದ ಎಷ್ಟೋ ಆಸೆಗಳನ್ನು ನಾನೇ ಸಮಾಧಿ ಮಾಡಿದ್ದೇನೆ ನಿನ್ನ ನೆನೆದಾಗ ಆ ಕ್ಷಣಗಳ ನೆನೆದು ಅರಗಿಸಿಕೊಳ್ಳಲು ಆಗುತ್ತಿಲ್ಲ …

“ನೀನು ಎಲ್ಲಿ ಹೋದೆ ನನ್ನ ಒಂಟಿಯಾಗಿ ಬಿಟ್ಟು
ಎಷ್ಟೋ ದಿನಗಳು ನೀನು ನಾನು ಜೊತೆಯಲ್ಲೆ ಕುಳಿತು ಊಟ ಮಾಡಿದ ನೆನಪು ಹಸಿವಾದಾಗ ನಿನ್ನ ಕೈಗಳು ಕರೆಯುತ್ತದೆ ನನ್ನ ಹಸಿವು ನಿನ್ನನ್ನು, ಬಾ ಗೆಳತಿ ಕೈ ತುತ್ತು ನಿಡೆಂದು .

“ಎಷ್ಟೋ ದಿನಗಳು ಮಂಕಾಗಿ ಕುಳಿತಾಗ ನನ್ನ ಕಂಡ ಯಾಕೆ ಹೀಗೆ ಒಬ್ಬನೇ ಕುಳಿತೆ ಏನಾಗಿದೆ ನಿನಗೆ ನಿನ್ನ ಅಣೆಯಲ್ಲಿ ಅವಳನ್ನು ಬರೆದಿಲ್ಲ ಅವಳು ನಿನಗೆ ಇಷ್ಟೇ ದಿನಗಳು ಜೊತೆಯಲ್ಲಿ ಇದ್ದು ಕಣ್ಮರೆಯಾಗಿ ಹೋಗುವೆ ಎಂಬ ಸತ್ಯ ನಿನಗೂ ತಿಳಿಲಿಲ್ಲ ಆ ದೇವರು ನಮಗೂ ತಿಳಿಸಲಿಲ್ಲ ಎಂದು ಅಮ್ಮ ಹೇಳುವಾಗ ಕಣ್ಣಿಂದ ಕಂಬನಿ ತಾನಾಗಿ ಹೊರ ಬಂದಾಗ ಅಮ್ಮ ಸೇರಗಲ್ಲಿ ಕಣ್ಣೀರು ಹೊರೆಸಿ ಸಮಾಧಾನ ಮಾಡುತ್ತಿದ್ದಳು ಅಮ್ಮನಲ್ಲಿ ನಿನ್ನನ್ನೇ ಕಂಡಿದ್ದೆ ಕೂಡ ..

“ಒಂದು ದಿನವೂ ನನ್ನ ಬಿಟ್ಟು ಇರುವವಳು ನೀನಲ್ಲ
ಪ್ರತಿ ದಿನದ ರಾತ್ರಿಯಲ್ಲಿ ನಿದ್ದೆ ಮಾಡುವವನ ಪಕ್ಕದಲ್ಲಿ ಕೂತು ಎರಡು ಕೈಗಳಲ್ಲಿ ಕೆನ್ನೆ ಹಿಡಿದು ಬಂಗಾರ ಎಷ್ಟು ಮುದ್ದಾಗಿ ಇದ್ದೀಯ ಎಂದು ಕೆನ್ನೆ ಸವರಿ ಮುತ್ತು ಕೊಟ್ಟು ಹೋಗುತ್ತಿದ್ದೆ ..

“ಒಮ್ಮೊಮ್ಮೆ ಅಮ್ಮನಲ್ಲಿ ಸಿಕ್ಕಿ ಬಿದ್ದಾಗ ಅವನು ನನ್ನ ಬಂಗಾರ ಅವನನ್ನು ಬೇರೆ ಎಲ್ಲೂ ಗಿರವಿ ಇಡಬೇಡ ಅಂತ ಅಮ್ಮನಿಗೆ ಕೈ ತೋರಿಸಿ ಹೇಳಿ ನಾಚಿ ಓಡಿ ಹೋಗುತ್ತಿದ್ದೆ ಇದೆಲ್ಲ ನನಗೆ ಯಾಕೆ ಮಾಡಿದೆ ಹೀಗೆ ಒಬ್ಬನನ್ನೇ ಬಿಟ್ಟು ಹೋಗುವುದಕ್ಕ?

“ಬರಿ ಸುಖದಲ್ಲಿ ಮಾತ್ರ ನಾನು ನಿನಗೆ ಪಾಲುದಾರ ಎಂದು ಹೇಗೆ ಭಾವಿಸಿದೆ ?..ನಾನು ನಿನ್ನ ಸ್ವತ್ತೆಂದು ನಿನ್ನ ನೋಡಿದಾಗಲೇ ನಿನ್ನ ಪ್ರೀತಿಯಲ್ಲಿ ಬಿದ್ದಾಗಲೇ ನಿನ್ನೆಲ್ಲ ಜವಾಬ್ದಾರಿ ನನ್ನದು ಎಂದು ಯಾಕೆ ಅರಿವಾಗಲಿಲ್ಲ? ಆ ಒಂದು ವಿಷಯವನ್ನು ಮುಚ್ಚಿಟ್ಟು ಏನನ್ನು ಸಾಧಿಸಲು ನೀ ಒಂಟಿಯಾಗಿ ಮಾಡಿ ಒಂದು ಹೆಜ್ಜೆ ಮುಂದೆ ಹೋಗಿಬಿಟ್ಟೆ.

“ನೀನು ನನ್ನ ಬಂಗಾರ ಎಂದು ಕಾಗೆ ಬಂಗಾರ ಅಲ್ಲ ಅಂತ ಪ್ರತಿಕ್ಷಣವೂ ಮುದ್ದಿಸುವ ಪ್ರೀತಿಯನ್ನು ಬೇರೆ ಯಾರು ನನಗೆ ಕೊಡುವರು? ನನ್ನೆರಡು ತುಟಿಗಳ ಹಿಡಿದು ನಿನ್ನ ತುಟಿಗಳ ಹತ್ತಿರ ಬರಸೆಳೆದು ಚುಂಬಿಸುವ ಮೊದಲೇ ನಾಚಿಕೆ ಎಂದು ಕೈಗಳಲ್ಲಿ ಮೊಗವನ್ನು ಮುಚ್ಚಿಕೊಳ್ಳುವ ಆ ತುಂಟಾ ತನವನ್ನು ಯಾರಲ್ಲಿ ಕಾಣಲಿ ?

“ನೀನೇ ಹೇಳು ನೀನು ಮಾಡಿದ್ದು ಸರಿನ ? ಸುಳ್ಳು ಯಾಕೆ ಹೇಳಿದೆ ಒಂದೇ ಒಂದು ಮಾತು ನನಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಯಾಕೆ ಹೇಳಲಿಲ್ಲ ಜಾಸ್ತಿ ದಿನ ನಾ ಉಳಿಯುದಿಲ್ಲ ಎಂಬ ಸತ್ಯ ಯಾಕೆ ನಿನ್ನಿಂದ ಮುಚ್ಚಿ ಇಟ್ಟೇ, ನಿನ್ನನು ಪಡೆದ ನಾನೇ ಧನ್ಯ ಯಾವ ಪುಣ್ಯವೋ ? ಈ ಜನ್ಮದಲ್ಲಿ ನೀ ನನಗೆ ಸಿಕ್ಕಿದ್ದಿಯ ನಿಜವಾಗಿ ಇದು ನನ್ನ ಪುಣ್ಯವಲ್ಲ ಅಮ್ಮನ ಪುಣ್ಯ ಅಮ್ಮನಿಗೆ ಎಂತ ಸೊಸೆ ಸಿಕ್ಕಿದ್ದಾಳೆ ಎಂದು ಎಷ್ಟು ಸಂತೋಷ ಪಟ್ಟಿತ್ತು ಈ ಹೃದಯ ..

“ಇಂದು ಅದೇ ಸಂತೋಷ ಕಸಿದು ನನ್ನಲ್ಲಿಯೂ ಹೇಳದೆ ಮೌನವಾಗಿ ನಿದಿರೆಗೆ ಜಾರಿದೆ ಯಾಕೆ
ಈ ಸತ್ಯ ತಿಳಿದು ನಾನು ಕಂಗಾಲಾಗಬಾರದು ಎಂದು,
ಬಂಗಾರ ನಾನು ಇಲ್ಲವೆಂದು ನೀನು ಕೊರಬೇಡ ನಿನ್ನನ್ನು ಪ್ರತಿ ದಿನ ಪ್ರತಿ ಕ್ಷಣ ನಿನ್ನ ನೋಡಬೇಕು ಎನ್ನುವ ಹಠದಿಂದ ನನ್ನರೆಡು ಕಣ್ಣುಗಳನ್ನು ನನ್ನ ಅಮ್ಮನಿಗೆ ದಾನವಾಗಿ ನೀಡಿದ್ದೇನೆ ಇದು ನನ್ನ ಕನಸು ಕೂಡ, ನನ್ನ ಅಮ್ಮನಿಗೆ ಕಣ್ಣು ಕಾಣಿಸುವುದಿಲ್ಲ ಆದರೆ ನಾನು ಹೋದಮೇಲೆ ನನ್ನಮ್ಮನಿಗೆ ನೀನೇ ಮಗನು ನೀನೇ ಮಗಳು ಬಂಗಾರ, ನಾನು ಇಲ್ಲವೆಂದು ಎಂದಿಗೂ ಕಣ್ಣೀರು ಹಾಕದಿರು ನಾ ಸತ್ತರು ನಿನ್ನಲ್ಲೇ ನಿನ್ನ ಮುಂದೆ ಕಣ್ಣಾಗಿರುವೆ ,ಕಾಣಿಸುತ್ತಿರುವೆ …ನಿನ್ನಲ್ಲೇ ನಾನು ಬಿಂಬವಾಗಿರುವೆ ಸದಾ ನಗುತ್ತಿರು ಎಂದು ಕಾಗದ ಬರೆದು ನಿನ್ನನ್ನೇ ನನಗೆ ತ್ಯಾಗ ಮಾಡಿ ಮರೆಯಾದೆ ನೀನು ….?

“ಕೊನೆಯದಾಗಿ ಅಳಬೇಡ ಬಂಗಾರ ಎಂಬ ಮಾತೊಂದು ಹೇಳಿ ನೀನು ಬಾನಿಗೆ ನಕ್ಷತ್ರವಾದೆ ಭೂಮಿಲಿ ನೀ ಇಲ್ಲದೆ ನಾ ಅನಾಥವಾದೆ…

✍️ಕವಿತೆಗಳ ಸಾಲಲ್ಲಿ ಲೋಹಿತ್

error: Content is protected !!