Home Blog Page 8

ಕಾರುಣ್ಯವಾರಿಧಿ ಶ್ರೀ ರಾಘವೇಂದ್ರ ಸ್ವಾಮಿಗಳು

ವೆಂಕಟನಾಥರು ಒಮ್ಮೆ ಕುಂಭಕೋಣ ಪ್ರವಾಸ ಮಾಡುತ್ತಿದ್ದಾಗ ವೆಂಕಟನಾಥ ಮತ್ತು ಅವರ ಪತ್ನಿ ಸರಸ್ವತಿ ಬಾಯಿಯವರಿಗೆ ಸಮಾರಂಭಕ್ಕೆ ಆಹ್ವಾನಿಸಲಾಯಿತು. ಆದರೆ ವೆಂಕಟನಾಥರಿಗೆ ಸರಿಯಾದ ಗೌರವಾದರಗಳನ್ನು ಮಾಡದೇ ಆ ಸಮಾರಂಭದಲ್ಲಿ ಶ್ರೀಗಂಧವನ್ನು ತೇಯುವ ಕೆಲಸವನ್ನು ವಹಿಸುತ್ತಾರೆ. ಆದರೆ ವೆಂಕಟನಾಥರು ಭಗವಂತನ ಸಂಕಲ್ಪದಿಂದ ಅಗ್ನಿ ಸೂಕ್ತ ಪಠಿಸುತ್ತ ಗಂಧವನ್ನು ತೇಯ್ದರು. ಆ ಗಂಧ ಲೇಪಿಸಿಕೊಂಡ ವಿಪ್ರರಿಗೆಲ್ಲ ಮೈ ಉರಿ ಶುರುವಾಯಿತು. ಅದಕ್ಕೆ ಕಾರಣವನ್ನು ಹುಡುಕಲಾಗಿ ಗಂಧ ತೇಯುವವರು ಮಹಾನ್ ವ್ಯಕ್ತಿಗಳಾಗಿದ್ದು, ಅವರಿಗೆ ಮಂತ್ರ ಸಿದ್ಧಿಯಾಗಿದೆ. ಅವರು ಅಗ್ನಿ ಸೂಕ್ತ ಪಠಿಸಿದ್ದರಿಂದ ಈ ತರಹದ ಉರಿ ಶುರುವಾಗಿದೆ ಎಂದು ತಿಳಿದು ಬಂದಿತು. ಆಗ ಗೃಹಸ್ಥರು ತಮ್ಮಿಂದ ಅಪರಾಧವಾಗಿದ್ದು ಕ್ಷಮಿಸಬೇಕೆಂದು ವೆಂಕಟನಾಥರಲ್ಲಿ ಬೇಡಿಕೊಂಡರು. ವೆಂಕಟನಾಥರು ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಪುನಃ ಶ್ರೀ ಹರಿಯನ್ನು ಸ್ಮರಣೆ ಮಾಡುತ್ತಾ ವರುಣ ಸೂಕ್ತ ಪಠಿಸಿದಾಗ ಎಲ್ಲರ ಉರಿ ಶಮನವಾಯಿತು. ಇದು ವೆಂಕಟನಾಥರಲ್ಲಿಯ ಮಂತ್ರ ಸಿದ್ಧಿ ಹಾಗೂ ಸಹಾನುಭೂತಿಗೆ ಒಂದು ನಿದರ್ಶನವಾಗಿದೆ.

ಈ ವೆಂಕಟನಾಥರೇ ಮುಂದೆ ಶ್ರೀ ಸುಧೀಂದ್ರ ತೀರ್ಥರಿಂದ ಸನ್ಯಾಸತ್ವ ಸ್ವೀಕರಿಸಿ ರಾಘವೇಂದ್ರ ಸ್ವಾಮಿಗಳಾದರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. ತಂದೆ ತಿಮ್ಮಣ್ಣ ಭಟ್ಟರು, ತಾಯಿ ಗೋಪಿಕಾಂಬೆ. ತಿಮ್ಮಣ್ಣ ಭಟ್ಟರಿಗೆ ಗುರುರಾಜ, ವೆಂಕಟಾಂಬೆ, ವೆಂಕಟನಾಥ ಎಂಬ ಮಕ್ಕಳು ಜನಿಸಿದರು. ವೆಂಕಟನಾಥರು 1595ರಲ್ಲಿ ಈಗಿನ ತಮಿಳುನಾಡಿನ ಭುವನಗಿರಿ ಎಂಬಲ್ಲಿ ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂಪ್ರದಾಯದಲ್ಲಿ ಜನಿಸಿದರು. ಇವರು ಮಧ್ವಾಚಾರ್ಯರ ಅನುಯಾಯಿಗಳಾಗಿ ಮಧ್ವ ಮತದ ದ್ವೆöÊತ ಸಿದ್ಧಾಂತವನ್ನು ಪ್ರತಿಪಾದಿಸಿದರು.

ಶ್ರೀ ಸುಧೀಂದ್ರ ತೀರ್ಥರು ವೇದಾಂತ ಸಾಮ್ರಾಜ್ಯಕ್ಕೆ ತಕ್ಕಂತಹ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ಶ್ರೀಮೂಲರಾಮದೇವರೇ ಬಂದು ವೆಂಕಟನಾಥರನ್ನು ಶಿಷ್ಯರಾಗಿ ಸ್ವೀಕರಿಸುವಂತೆ ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ತಿಳಿಸಿದಾಗ, ವೆಂಕಟನಾಥರು ನಕಾರಾತ್ಮಕ ಉತ್ತರ ಕೊಟ್ಟರು. ಅದರೆ ವೆಂಕಟನಾಥರಿಗೆ ಸಾಕ್ಷಾತ್ ಸರಸ್ವತೀ ದೇವಿಯೇ ಬಂದು ಸನ್ಯಾಸಾಶ್ರಮವನ್ನು ಸ್ವೀಕರಿಸುವಂತೆ ಆಜ್ಞೆಯಿತ್ತಳು.

ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥರು ಸನ್ಯಾಸಾಶ್ರಮ ಸ್ವೀಕರಿಸಿದರು. ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ರಘುನಾಥಭೂಪಾಲನ ಹಾಗೂ ಆಗಿನ ಶ್ರೇಷ್ಠರಾದ ಅನೇಕ ಜನವಿದ್ವಾಂಸರು, ಆಚಾರ್ಯರ ಸಮ್ಮುಖದಲ್ಲಿ ಶ್ರೀ ಸುಧೀಂದ್ರತೀರ್ಥರು ಸಂನ್ಯಾಸಾಶ್ರಮವನ್ನು ನೀಡಿ, ಶ್ರೀ ರಾಘವೇಂದ್ರ ತೀರ್ಥರೆಂಬ ಅದ್ಭುತವಾದ ಹೆಸರಿನಿಂದ ನಾಮಕರಣವನ್ನು ಮಾಡಿ, ಪ್ರಣವ ಮಂತ್ರೋಪದೇಶಪೂರ್ವಕವಾಗಿ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ನೆರವೇರಿಸಿದರು.

ತಮ್ಮ ಪತಿಯ ಸನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಬಾಯಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದರು. ಆಕೆಯ ದುರವಸ್ಥೆಯನ್ನು ನೋಡಿ ಶ್ರೀ ರಾಘವೇಂದ್ರತೀರ್ಥರು ಕರುಣೆಯಿಂದ ಆಕೆಯ ಮೇಲೆ ತೀರ್ಥವನ್ನು ಸಂಪ್ರೋಕ್ಷಿಸಿ ಆಕೆಗೆ ಪಿಶಾಚಿ ಜನ್ಮದಿಂದ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.

ಗದಗ ಜಿಲ್ಲೆಯ ಕಿರಟಗೇರಿಯ ದೇಸಾಯಿಯವರ ಮನೆಯಲ್ಲಿ ಪೂಜಾ ಸಮಾರಂಭವಿರುತ್ತದೆ. ರಾಯರು ಅಲ್ಲಿಗೆ ಆಗಮಿಸಿರುತ್ತಾರೆ. ಕಿರಟಗೇರಿ ದೇಸಾಯಿಯವರ ಮಗನು ಅಲ್ಲಿನ ಜನರ ಭೋಜನಕ್ಕಾಗಿ ತಯಾರಿಸಿದ ಮಾವಿನ ಹಣ್ಣಿನ ಶೀಕರಣಿಯ ದೊಡ್ಡ ಕಡಾಯಿಯಲ್ಲಿ ಬಿದ್ದು ಅಕಾಲ ಮೃತ್ಯು ಹೊಂದಿರುತ್ತದೆ. ರಾಘವೇಂದ್ರಸ್ವಾಮಿಗಳು ಆ ಮಗುವನ್ನು ತಮ್ಮ ತಪಃಶಕ್ತಿಯಿಂದ ಬದುಕಿಸುತ್ತಾರೆ. ರಾಘವೇಂದ್ರ ರಾಯರ ಅನುಗ್ರಹದಿಂದ ಬಡಬ್ರಾಹ್ಮಣನಾದ ವೆಂಕಣ್ಣನು ಅಕ್ಷರಜ್ಞಾನ ಹೊಂದಿ ಆದೋನಿಯ ಆಸ್ಥಾನದ ದಿವಾನನಾದನು.

ರಾಯರು ಸಂಚಾರ ಮಾಡುತ್ತಿದ್ದಾಗ ಆದೋನಿಯ ಪ್ರಾಂತ್ಯದ ನವಾಬನಾದ ಸಿದ್ಧಿ ಮಸೂದ್‌ಖಾನ್ ನವಾಬನು ರಾಘವೇಂದ್ರ ಸ್ವಾಮಿಗಳ ಪರೀಕ್ಷೆ ಮಾಡಬೇಕೆಂದೆನಿಸುತ್ತದೆ. ರಾಯರ ದರ್ಶನಕ್ಕಾಗಿ ಫಲವನ್ನು ಸ್ವೀಕಾರ ಮಾಡಬೇಕು ಎಂದು ಹೇಳಿ ತಟ್ಟೆಯಲ್ಲಿ ಮಾಂಸವನ್ನು ತಂದು ಬಟ್ಟೆ ಹೊದಿಸಿ ಈ ಫಲವನ್ನು ಸ್ವೀಕರಿಸಬೇಕು ಎಂದು ನವಾಬನು ಹೇಳಿದರು. ಆಗ ರಾಘವೇಂದ್ರ ಸ್ವಾಮಿಗಳು ಶಂಖೋದಕ ಪ್ರೋಕ್ಷಿಸಿದಾಗ ಆ ಮಾಂಸವು ಫಲ ಪುಷ್ಪಗಳಾದವು. ಇದನ್ನು ನೋಡಿದ ನವಾಬನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಬೇಡಿದನು. ರಾಯರಿಗೆ ಕಾಣಿಕೆಯಾಗಿ ಕೊಡಲು ಏನನ್ನಾದರೂ ಬೇಡು ಎಂದು ನವಾಬ ತಿಳಿಸಿದರು.

ರಾಯರು ತುಂಗಭದ್ರಾ ನದಿ ತೀರದ ಮಂಚಾಲೆಯ ಕ್ಷೇತ್ರವನ್ನು ಬೇಡಿದರು. ಅದು ಬರಡು ಭೂಮಿಯಾಗಿದ್ದರಿಂದ ಬೇರೆ ಫಲವತ್ತಾದ ಭೂಮಿಯನ್ನು ಬೇಡಲು ನವಾಬನು ಕೇಳಿಕೊಳ್ಳುತ್ತಾನೆ. ಆದರೆ ರಾಯರು ಆ ಮಂಚಾಲೆ ಕ್ಷೇತ್ರವನ್ನೇ ಕೊಡಲು ತಿಳಿಸುತ್ತಾರೆ. ಯಾಕೆಂದರೆ ರಾಯರು ಪ್ರಹ್ಲಾದರಾಯರಾಗಿ ಅವತರಿಸಿದಾಗ ತಪಸ್ಸು ಮಾಡಿದ ಜಾಗ ಅದಾಗಿರುತ್ತದೆ.

1671ರಲ್ಲಿ ಶ್ರಾವಣ ಮಾಸ ಕೃಷ್ಣ ಪಕ್ಷದ ದ್ವಿತೀಯದಂದು ಶ್ರೀ ರಾಘವೇಂದ್ರ ಸ್ವಾಮಿಗಳು ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿ ಸಶರೀರ ವೃಂದಾವನಸ್ಥರಾದರು. ಪ್ರತಿ ವರ್ಷ ಶ್ರಾವಣ ಮಾಸ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಮಾಸ ಕೃಷ್ಣ ಪಕ್ಷ ತದಿಗೆಯವರೆಗೆ ಭವ್ಯ ಆರಾಧನೆ ನಡೆಯುತ್ತದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ರಾಘವೇಂದ್ರ ಸ್ವಾಮಿಗಳು ಮಧ್ವಮತಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕರುಣಾಮಯಿಗಳಾದ ರಾಯರ ಸ್ಮರಣೆ ಮಾತ್ರದಿಂದ ಭಕ್ತರುಗಳು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ರಾಯರ ಸ್ಮರಣೆ ಹಾಗೂ ಸೇವೆಯಿಂದ ಪುನೀತರಾಗೋಣ.

  • ಅಂಜನಾ ರಾಘವೇಂದ್ರ ಕುಬೇರ.
    ಗದಗ.

ಕಾಗದ ರಹಿತ ನೋಂದಣಿ ಸುರಕ್ಷಿತ: ಶಿವಕುಮಾರ ಅಪರಂಜಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸರಕಾರದ ನಿರ್ದೇಶನದಂತೆ ಮುಂದಿನ ದಿನಮಾನಗಳಲ್ಲಿ ಕಾಗದ ರಹಿತ ನೋಂದಣಿ ವ್ಯವಸ್ಥೆ ಜಾರಿಯಾಗಲಿದ್ದು, ಇದರ ಕುರಿತು ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳಲ್ಲಿಯೂ ಸಹ ಕಾರ್ಯಾಗಾರಗಳು ಹಂತ ಹಂತವಾಗಿ ನಡೆಯುತ್ತಿವೆ ಎಂದು ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ ತಿಳಿಸಿದರು.

ಬುಧವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಸರಕಾರದ ನಿರ್ದೇಶನದಂತೆ ಆಯೋಜಿಸಿದ್ದ ಪೇಪರ್‌ಲೆಸ್ ನೋಂದಣಿ ವ್ಯವಸ್ಥೆ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೇಪರ್‌ಲೆಸ್ ವ್ಯವಸ್ಥೆಯಿಂದ ದಸ್ತಾವೇಜಿಗೆ ವಿಶಿಷ್ಟ ಸಂಖ್ಯೆ ಸಿಗಲಿದ್ದು, ದಾಖಲೆ ತಿರುಚಿ ಬೇರೆಯವರಿಗೆ ಮಾರಾಟ ಮಾಡುವದಕ್ಕೆ ಕಡಿವಾಣ, ಭೌತಿಕ ದಾಖಲೆ ಇಲ್ಲದೇ ಇರುವುದರಿಂದ ಕಾಗದ ಸಂಗ್ರಹಿಸುವ ತಂಟೆ ಇಲ್ಲ. ಎಲ್ಲಿ ಬೇಕಾದರೂ ತಮ್ಮ ನೋಂದಣಿಯಾದ ದಾಖಲೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸುರಕ್ಷಿತ ಸಂಗ್ರಹಣೆ ಮತ್ತು ದೀರ್ಘಕಾಲೀನ ದಾಖಲೆಗಳನ್ನು ಸಂರಕ್ಷಿಸಬಹುದಾಗಿದೆ. ಕಾಗದ ರಹಿತ ಮತ್ತು ಪರಿಸರ ಸ್ನೇಹಿ, ದಾಖಲೆಗಳ ಸುಲಭ ಪರಿಶೀಲನೆ ಮತ್ತು ಡಿಜಿಟಲ್ ಆಡಳಿತಕ್ಕೆ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದರು.

ಪೇಪರ್‌ಲೆಸ್ ನೋಂದಣಿ ವ್ಯವಸ್ಥೆ ಕುರಿತು ನಡೆಯುತ್ತಿದ್ದ ಕಾರ್ಯಾಗಾರವನ್ನು ದಸ್ತು ಬರಹಗಾರರು ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು. ಉಪನೋಂದಣಾಧಿಕಾರಿ ಶರಣಪ್ಪ ಪವಾರ, ಜಿಲ್ಲಾ ಐಟಿ ಕನ್ಸಲ್ಟಂಟ್ ಕುನಾಲ್ ಕಾರಭಾರಿ, ಶ್ರೀನಿವಾಸ ಬೆಟಗೇರಿ, ತಾಲೂಕಾ ದಸ್ತು ಬರಹಗಾರರ ಸಂಘದ ಅಧ್ಯಕ್ಷ ಅಶೋಕ ಹುಬ್ಬಳ್ಳಿ, ಶಂಕರ ಕುಸ್ಲಾಪೂರ, ಎಸ್.ವಿ. ದಶಮನಿ, ಮೈನುದ್ದೀನ ಅತ್ತಾರ, ಮಂಜುನಾಥ ಮೆಣನಸಿನಕಾಯಿ, ಮಹಾದೇವಪ್ಪ ಹೊಂಬಾಳಿ, ಪದ್ಮಾವತಿ ಹುಬ್ಬಳ್ಳಿ, ಬಾಬಾಜಾನ್ ಕೋಳಿವಾಡ, ಮಹಾಂತೇಶ ದಶಮನಿ, ಪ್ರವೀಣ ಹುಬ್ಬಳ್ಳಿ, ಚನ್ನಪ್ಪ ಕುರಿ, ಉಮೇಶ ಶೇಳಕೆ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ದಸ್ತು ಬರಹಗಾರರ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನಜೀರ ಡಂಬಳ, ಪೇಪರ್‌ಲೆಸ್ ವ್ಯವಸ್ಥೆ ಜಾರಿ ಮಾಡುವುದರಿಂದ ಅನಕ್ಷರಸ್ಥರಿಗೆ ಮಾರಕವಾಗಲಿದೆ. ರಾಜ್ಯ ಸಂಘದ ನಿರ್ದೇಶನದಂತೆ ಈ ವ್ಯವಸ್ಥೆಯನ್ನು ಧಿಕ್ಕರಿಸಿ ಸಭೆಯಿಂದ ಹೊರನಡೆಯುತ್ತಿದ್ದೇವೆ. ಒಂದು ಸಾರಿ ಓಟಿಪಿ ತೆಗೆದುಕೊಳ್ಳಲಿಕ್ಕೆ ಹರಸಾಹಸ ಮಾಡಬೇಕಾದ ಸ್ಥಿತಿ ಇರುವಾಗ ಪೇಪರ್‌ಲೆಸ್‌ನಿಂದ 3-4 ಬಾರಿ ಓಟಿಪಿ ತೆಗೆದುಕೊಳ್ಳಲು ಕಷ್ಟಸಾಧ್ಯವಾಗಲಿದೆ. ಈ ವ್ಯವಸ್ಥೆ ಕುರಿತು ನಮ್ಮ ಬೇಡಿಕೆಯನ್ನು ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರೂ ಸಹಿತ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಎಂದರು.

ಮಗುವಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶೇಖರಗೌಡ ರಾಮತ್ನಾಳ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ರಕ್ಷಣಾ ಆಯೋಗವು ಮಕ್ಕಳ ರಕ್ಷಣಾ ನೀತಿ ಕುರಿತು ಗಮನದಲ್ಲಿಟ್ಟುಕೊಂಡು ಮಕ್ಕಳ ರಕ್ಷಣಾ ನೀತಿ ಕುರಿತಂತೆ ತರಬೇತಿ ನೀಡುತ್ತಿದೆ. ಪ್ರತಿಯೊಬ್ಬ ಪ್ರಾಂಶುಪಾಲರು ಪ್ರತಿ ಮಗುವಿಗೆ ರಕ್ಷಣೆ, ಕಾನೂನಿನ ರಕ್ಷಣೆ, ಕುಟುಂಬ ವಾತಾವರಣ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗದಗ ಇವರ ಸಹಯೋಗದಲ್ಲಿ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ಐ.ಟಿ.ಐ, ನರ್ಸಿಂಗ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳಿಗೆ ಹಮ್ಮಿಕೊಂಡಿದ್ದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ನೀತಿ, ಸಲಹಾ ಪೆಟ್ಟಿಗೆ, 1098 ಶಾಶ್ವತ ಗೋಡೆ ಬರಹ ಮೂಲಭೂತ ಸೌಕರ್ಯಗಳ ಕುರಿತು ಗಮನ ಹರಿಸಬೇಕು. ನಿಯಮ ಬದಲಾವಣೆ ಆದಂತೆ ಅದನ್ನು ತಿಳಿದು ಮಗುವಿನ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ, ಪೊಕ್ಸೋ, ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚು ಹೆಚ್ಚು ತರಬೇತಿ ಅರಿವು ಕಾರ್ಯಕ್ರಮಗಳು ಆಗಬೇಕು. ಕಾಯ್ದೆಯ ಸರಿಯಾದ ತಿಳುವಳಿಕೆ ಇಲ್ಲದೆ ಇರುವವರು ತರಬೇತಿ ಪಡೆದು ಕಾಯ್ದೆಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ ಮಾತನಾಡುತ್ತಾ, ಮಕ್ಕಳ ರಕ್ಷಣಾ ಸಂಬಂಧಿತ ಕಾಯ್ದೆಗಳನ್ನು ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಹನುಮಂತ ರೆಡ್ಡಿ, ಬಿ.ಆರ್.ಪಿ ಪ್ರೌಢಶಾಲೆ ವಿಭಾಗ, ಬಿ.ಆರ್.ಸಿ, ಮುಂಡರಗಿ ಇವರು ಮಕ್ಕಳ ರಕ್ಷಣಾ ನೀತಿ-2016, ಪೊಕ್ಸೋ-2012 ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಪಿ.ಎಸ್.ಐ ಹೆಚ್.ಡಿ. ಓದುಗೌಡರ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜಯದೇವಿ ಕವಲೂರು, ಪೂರ್ಣಿಮಾ ಹೊಸಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್ ಮಾತನಾಡಿ, ಪ್ರಾಂಶುಪಾಲರು ತರಬೇತಿಯಲ್ಲಿ ಪಡೆಯುವ ಎಲ್ಲಾ ಅಂಶಗಳನ್ನು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಗುಣಮಟ್ಟದ, ಸಂಸ್ಕಾರಭರಿತ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಶಿಕ್ಷಣವನ್ನು ನೀಡಬೇಕು. ಕಾಲೇಜು ಅವಧಿಯಲ್ಲಿ ಮಕ್ಕಳ ಮೇಲೆ ನಿಗಾವಹಿಸಬೇಕು ಹಾಗೂ ಮಕ್ಕಳು ಮೊಬೈಲ್‌ನ್ನು ಬಳಕೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ BJP ಬಲವಾಗಿ ಖಂಡಿಸುತ್ತದೆ: ಬಿ.ವೈ.ವಿಜಯೇಂದ್ರ

0

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ವಿಧಾನಸೌಧದ ಒಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ಕಾಂಗ್ರೆಸ್ಸಿನದು ನಾಲಾಯಕ್ ಸರ್ಕಾರ ಎಂದು ಜನರು ಮಾತನಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಟೀಕಿಸಿದರು.

ಇಂಥ ತೀರ್ಮಾನಗಳನ್ನು ಯಾಕೆ ತೆಗೆದುಕೊಳ್ಳುತ್ತಾರೆಂದು ನನಗಂತೂ ಅರ್ಥ ಆಗುತ್ತಿಲ್ಲ. ಕಳೆದ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ದ್ವೇóಷ ಭಾಷಣ ಸಂಬಂಧ ಕಾಯ್ದೆ ತಂದಿದ್ದರು. ಗಮನಿಸುತ್ತ ಹೋದರೆ, ಈ ಸರಕಾರದ ಒಂದೊಂದು ನಿರ್ಣಯವೂ ಪ್ರಜಾಪ್ರಭುತ್ವವನ್ನು ಅಣಕಿಸುವ ರೀತಿಯಲ್ಲಿದೆ. ಇದು ಖಂಡಿತ ಸರಿಯಲ್ಲ ಎಂದು ನುಡಿದರು.

ಈ ನಿರ್ಧಾರವನ್ನು ರಾಜ್ಯ ಸರಕಾರ ಹಿಂಪಡೆಯಬೇಕು. ಮಾಧ್ಯಮಗಳಿಗೆ ನಿರ್ಬಂಧ ಹೇರುವುದನ್ನು ನಾವು ಖಂಡಿತ ಒಪ್ಪಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಮತ್ತೊಮ್ಮೆ ಹೇಳುವುದಾಗಿ ತಿಳಿಸಿದರು.

ಪಾಕಿಸ್ತಾನ ಜಿಂದಾಬಾದ್ ಎಂದು ಜಯಘೋಷ ಕೂಗುವುದಕ್ಕೆ ಕಡಿವಾಣ ಹಾಕಲು ಈ ಅಯೋಗ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ; ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿದರೂ ಪುರಾವೆಗಳಿಲ್ಲವೆಂದು ತಿಳಿಸಿದ್ದರು.

ಅಂಥ ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಲು ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಖಂಡಿಸಿದರು. ಈಗ ಸಚಿವರ ಕಚೇರಿಯಲ್ಲಿ ಕಳ್ಳತನದ ನೆಪವೊಡ್ಡಿ ಈ ರೀತಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ ಎಂದ ಅವರು, ಈ ಕುರಿತ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದರು.

ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ: 15 ಜನರ ಗುಂಪಿನಿಂದ ಹಲ್ಲೆ ಆರೋಪ!

0

ಗದಗ: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ದೊಣ್ಣೆ ಹಿಡಿದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಗದಗಿನ ನಂದೀಶ್ವರ ನಗರದಲ್ಲಿ ನಡೆದಿದೆ.

ಭೀಮಪ್ಪ ಜಗ್ಗಲ್ ಎಂಬ ಕುಟುಂಬದ ಮೇಲೆ ಕುಮಾರ್ ಮಿರ್ಚಿ ಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂಧಿದ್ದು, ದೊಣ್ಣೆ ಹಿಡಿದು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದು, ಘಟನೆಯಲ್ಲಿ ಮಹಿಳೆಯರೂ ಜಡೆ ಹಿಡಿದು ಕಾದಾಡಿಕೊಂಡಿರುವ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.

ಕುಮಾರ್ ಮಿರ್ಚಿಗೆ ಸೇರಿದ್ದ ಸುಮಾರು 15 ಜನರ ಗುಂಪು ದಾಳಿ ನಡೆಸಿದರೆಂದು ದೂರಲಾಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಘಟನೆ ಗದಗ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಸಾಲದ ವಿಚಾರಕ್ಕೆ ದಂಪತಿ ಜಗಳ: ರಾಡ್‌ʼನಿಂದ ಪತ್ನಿಯ ಹತ್ಯೆಗೈದು ಮನೆಯಲ್ಲೇ ಹೂತುಹಾಕಿದ್ದ ಪತಿ!

0

ವಿಜಯಪುರ: ಸಾಲದ ವಿಚಾರಕ್ಕೆ ದಂಪತಿ ಮಧ್ಯೆ ನಡೆದ ಜಗಳ ತಾರಕಕ್ಕೇರಿ ಪತಿಯೋರ್ವನು ಪತ್ನಿಯನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿ, ಮನೆಯಲ್ಲೇ ಶವವನ್ನು ಹೂತುಹಾಕಿದ್ದ ಭಯಾನಕ ಘಟನೆ 24 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಘಟನೆ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿರುವುದು ತಿಳಿದುಬಂದಿದೆ.

ಹಂತಕ ಪತಿಯನ್ನು ಪ್ರಭು ರತ್ನಾಕರ್ (46) ಹಾಗೂ ಮೃತ ಪತ್ನಿಯನ್ನು ಸರೋಜಿನಿ ರತ್ನಾಕರ್ (45) ಎಂದು ಗುರುತಿಸಲಾಗಿದೆ. ಈ ಸಂಬಂಧ ಸರೋಜಿನಿಯ ತಾಯಿ ಕಮಲವ್ವ ಅವರು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ರತ್ನಾಕರ್ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡಿದ್ದ. ಸಾಲದ ವಿಚಾರವಾಗಿ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಜ.23ರಂದು ರಾತ್ರಿ ಮತ್ತೊಮ್ಮೆ ಜಗಳ ತಾರಕಕ್ಕೇರಿದ್ದು, ಜ.24ರಂದು ಸರೋಜಿನಿಯ ತಲೆಗೆ ಪತಿ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಹತ್ಯೆಯ ಬಳಿಕ ಶವವನ್ನು ಮನೆಯಲ್ಲೇ ಹೂತುಹಾಕಿದ್ದಾನೆ ಎನ್ನಲಾಗಿದೆ. 24 ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಶವವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

Muslim Reservation: ಮುಸ್ಲಿಮರ ಶೇಕಡಾ 5ರಷ್ಟು ಮೀಸಲಾತಿ ರದ್ದು! ಮಹಾ ಸರ್ಕಾರದಿಂದ ಮಹತ್ವದ ನಿರ್ಧಾರ

0

ಮಹಾರಾಷ್ಟ್ರ: ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ (SEBC) ಅಡಿಯಲ್ಲಿ ಮುಸ್ಲಿಂ ಸಮುದಾಯದ ಕೆಲವು ವರ್ಗಗಳಿಗೆ ನೀಡಲಾಗಿದ್ದ ಶೇಕಡಾ 5ರಷ್ಟು ಮೀಸಲಾತಿಯನ್ನು ಮಹಾರಾಷ್ಟ್ರ ಸರ್ಕಾರ ಹಿಂತೆಗೆದುಕೊಂಡಿದೆ. 2014ರ ಆದೇಶವನ್ನು ರದ್ದುಗೊಳಿಸಲು ಹೊಸ ಸರ್ಕಾರಿ ನಿರ್ಣಯ (GR) ಹೊರಡಿಸಲಾಗಿದೆ.

ಸಾಮಾಜಿಕ ನ್ಯಾಯ ಇಲಾಖೆ ಮಂಗಳವಾರ ತಡರಾತ್ರಿ ಆದೇಶ ಹೊರಡಿಸಿದ್ದು, ಶಿಕ್ಷಣ ಸಂಸ್ಥೆಗಳ ಪ್ರವೇಶ ಹಾಗೂ ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಗಳ ನೇಮಕಾತಿಗೆ ಅನ್ವಯವಾಗುತ್ತಿದ್ದ ಕೋಟಾವನ್ನು ಅಧಿಕೃತವಾಗಿ ರದ್ದುಗೊಳಿಸಿದೆ ಎಂದು ಎಎನ್ಐ ವರದಿ ತಿಳಿಸಿದೆ.

ಇದು ಹೊಸ ನೀತಿ ನಿರ್ಧಾರವಲ್ಲ. ವರ್ಷಗಳಿಂದ ಅಸ್ತಿತ್ವದಲ್ಲಿರುವ ಕಾನೂನು ಸ್ಥಿತಿಗೆ ಅನುಗುಣವಾಗಿ ಅಧಿಕೃತ ದಾಖಲೆಗಳನ್ನು ಸರಿಪಡಿಸುವ ಕ್ರಮ ಮಾತ್ರ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಟಾವನ್ನು ಪರಿಚಯಿಸಿದ ಸುಗ್ರೀವಾಜ್ಞೆ ಎಂದಿಗೂ ಕಾನೂನಾಗಿ ಜಾರಿಗೆ ಬರಲಿಲ್ಲ ಮತ್ತು ನಂತರ ಅದು ರದ್ದಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜುಲೈ 2014ರಲ್ಲಿ ಆಗಿನ ಸಚಿವ ಸಂಪುಟವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಪ್ರಸ್ತಾವನೆಯನ್ನು ಅಂಗೀಕರಿಸಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಕೆಲವು ಮುಸ್ಲಿಂ ಸಮುದಾಯಗಳಿಗೆ ಶೇಕಡಾ 5ರಷ್ಟು ಕೋಟಾವನ್ನು ನೀಡಿತ್ತು. ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಪ್ರಯೋಜನ ಪಡೆಯಲು ಅರ್ಹರಿಗೆ ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.

ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. 2014ರ ನವೆಂಬರ್ 14ರಂದು ಸಾರ್ವಜನಿಕ ಉದ್ಯೋಗದಲ್ಲಿ ಕೋಟಾ ಅನುಷ್ಠಾನಕ್ಕೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಇತ್ತೀಚಿನ GRನಲ್ಲಿ, 2014ರ ಸುಗ್ರೀವಾಜ್ಞೆಯನ್ನು ರಾಜ್ಯ ವಿಧಾನಮಂಡಲವು ಕಾನೂನಾಗಿ ಪರಿವರ್ತಿಸದ ಕಾರಣ ಅದು ಜಾರಿಗೆ ಬರಲಿಲ್ಲ ಎಂದು ಸರ್ಕಾರ ಉಲ್ಲೇಖಿಸಿದೆ. ಅದರ ಪರಿಣಾಮವಾಗಿ, 2014 ಮತ್ತು 2015ರಲ್ಲಿ SEBC ಕೋಟಾ ಸಂಬಂಧ ಹೊರಡಿಸಲಾದ ಸರ್ಕಾರಿ ನಿರ್ಣಯಗಳು ಮತ್ತು ಸುತ್ತೋಲೆಗಳು ಕಾನೂನು ಮಾನ್ಯತೆ ಕಳೆದುಕೊಂಡಿವೆ.

ಸರ್ಕಾರ ಈ ಕ್ರಮವನ್ನು ಕೇವಲ ಕಾರ್ಯವಿಧಾನಾತ್ಮಕ ಎಂದು ವಿವರಿಸಿದ್ದರೂ, ಈ ನಿರ್ಧಾರ ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ಮೂಲ ಕೋಟಾವನ್ನು ಮುಸ್ಲಿಂ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕವಾಗಿ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಉದ್ಯೋಗ ಹಿಂದುಳಿದಿರುವಿಕೆಯನ್ನು ನಿವಾರಿಸುವ ಉದ್ದೇಶದಿಂದ ಜಾರಿಗೆ ತರಲಾಗಿತ್ತು.

ಮಂಡ್ಯದಲ್ಲಿ ಸಿನೆಮಾ ಸ್ಟೈಲ್ ದರೋಡೆ ಡ್ರಾಮಾ ಬಯಲು: ಪೊಲೀಸರ ಅತಿಥಿಯಾದ ಚಿನ್ನದಂಗಡಿ ಮಾಲೀಕ

0

ಮಂಡ್ಯ: ಚಿನ್ನದಂಗಡಿ ಮೇಲೆ ಆ್ಯಸಿಡ್ ದಾಳಿ ಮಾಡಿ ಕೋಟ್ಯಂತರ ಮೌಲ್ಯದ ಚಿನ್ನ-ಬೆಳ್ಳಿ ದರೋಡೆ ನಡೆದ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಸತ್ಯ ಹೊರಬಂದಿದ್ದು, ದರೋಡೆ ನಾಟಕವನ್ನೇ ರೂಪಿಸಿದ್ದವರು ಅಂಗಡಿ ಮಾಲೀಕ ಜಿತೇಂದ್ರ ಸಿಂಗ್ ಎಂಬುದು ಬೆಳಕಿಗೆ ಬಂದಿದೆ.

ರಾಜಸ್ಥಾನ ಮೂಲದ ಜಿತೇಂದ್ರ, ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮಹಾಲಕ್ಷ್ಮಿ ಜುವೆಲರಿ ನಡೆಸುತ್ತಿದ್ದ. ದುಷ್ಕರ್ಮಿಗಳು ತನ್ನ ಮುಖಕ್ಕೆ ಆ್ಯಸಿಡ್ ಎರಚಿ 170 ಗ್ರಾಂ ಚಿನ್ನ ಹಾಗೂ 8 ಕೆಜಿ ಬೆಳ್ಳಿ ಕದ್ದೊಯ್ದಿದ್ದಾರೆ ಎಂದು ದೂರು ನೀಡಿದ್ದ. ಆದರೆ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿರುವುದು, ಮುಖದ ಗಾಯಗಳ ಸ್ವರೂಪ ಮತ್ತು ಘಟನಾ ಸ್ಥಳದಲ್ಲಿ ಸಾಕ್ಷ್ಯಗಳ ಕೊರತೆ ಪೊಲೀಸರ ಅನುಮಾನಕ್ಕೆ ಕಾರಣವಾಯಿತು.

ಪರಿಶೀಲನೆ ವೇಳೆ ಜಿತೇಂದ್ರ ತನ್ನ ಮುಖಕ್ಕೆ ಆ್ಯಸಿಡ್ ಅಲ್ಲ, ಚಿನ್ನಕ್ಕೆ ಬಳಸುವ ರಾಸಾಯನಿಕವನ್ನು ಹಚ್ಚಿಕೊಂಡಿರುವುದು ಗೊತ್ತಾಯಿತು. ನಾಪತ್ತೆಯಾದ ಡಿವಿಆರ್ ಕೆರೆಯಲ್ಲಿ ಪತ್ತೆಯಾಯಿತು. ವಿಚಾರಣೆ ಕಠಿಣಗೊಳಿಸಿದಾಗ ಜಿತೇಂದ್ರ ಸಾಲದ ಒತ್ತಡದಿಂದ ದರೋಡೆ ನಾಟಕ ರೂಪಿಸಿದ್ದಾನೆ ಎಂಬುದು ಬಹಿರಂಗವಾಯಿತು.

ಸಾಲ ತೀರಿಸಲು ಮತ್ತು ಅಡವಿಟ್ಟಿದ್ದ ಒಡವೆಗಳ ವಿಚಾರದಲ್ಲಿ ಜನರನ್ನು ಯಾಮಾರಿಸಲು ಈ ಸಂಪೂರ್ಣ ಕಥೆ ರೂಪಿಸಿದ್ದಾನೆ. ಅಂಗಡಿಯ ಚಿನ್ನ-ಬೆಳ್ಳಿಯನ್ನು ಸ್ನೇಹಿತನ ಬಳಿ ಇಟ್ಟು, ಬಳಿಕ ರಾಜಸ್ಥಾನಕ್ಕೆ ತೆರಳುವ ಯೋಜನೆಯೂ ಸಿದ್ಧವಾಗಿತ್ತು. ಆದರೆ ಪೊಲೀಸರ ಸೂಕ್ಷ್ಮ ತನಿಖೆಯಿಂದ ನಾಟಕ ಪತ್ತೆಯಾಗಿ, ಜಿತೇಂದ್ರ ಬಂಧನಕ್ಕೊಳಗಾಗಿದ್ದಾನೆ.

ಸಿನಿಮಾ ಕಥೆಯನ್ನು ಮೀರಿಸಿದ ಈ ದರೋಡೆ ಡ್ರಾಮಾ ಇದೀಗ ಪೊಲೀಸರ ಕೈಯಲ್ಲಿ ಮುಗಿದಿದೆ.

ನಿದ್ರಿಸಿದ್ದ ಬಾಲಕನ ಕ್ಯಾಬ್‌ನಲ್ಲೆ ಬಿಟ್ಟುಹೋದ ಪೋಷಕರು: ‘ನಮ್ಮ 112’ ಚುರುಕು ಕಾರ್ಯಾಚರಣೆಯಿಂದ ರಕ್ಷಣೆ!

0

ಬೆಂಗಳೂರು: ನಗರದಲ್ಲಿ ಆತಂಕ ಮೂಡಿಸಿದ ಘಟನೆ ಹೆನ್ನೂರಿನಲ್ಲಿ ನಡೆದಿದೆ. ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಪೋಷಕರು ಕ್ಯಾಬ್ನಲ್ಲಿಯೇ ಮರೆತು ಮನೆಗೆ ತೆರಳಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ ರಾಜ್ಯದ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಾದ ‘ನಮ್ಮ 112’ ಸಮಯೋಚಿತ ಕ್ರಮದಿಂದ ಮಗು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಗೊಂಡಿದೆ.

ಜಿಯಾನ್ ಚುಂಗಿ (4) ರಕ್ಷಿಸಲಾದ ಬಾಲಕ. ಕುಟುಂಬಸ್ಥರು ಒಟ್ಟಾಗಿ ಇಸ್ಕಾನ್ ದೇವಸ್ಥಾನಕ್ಕೆ ತೆರಳಿದ್ದರು. ಮರಳಿ ಬರುವಾಗ ಕ್ಯಾಬಿನ ಹಿಂಬದಿ ಆಸನದಲ್ಲಿ ಜಿಯಾನ್ ನಿದ್ರೆಗೆ ಜಾರಿದ್ದಾನೆ. ಅಪಾರ್ಟ್‌ಮೆಂಟ್ ತಲುಪಿದ ಬಳಿಕ ಕುಟುಂಬಸ್ಥರು ತುರ್ತಾಗಿ ಇಳಿದು ಮನೆಗೆ ತೆರಳಿದ್ದು, ನಿದ್ರಿಸುತ್ತಿದ್ದ ಮಗುವಿನ ಬಗ್ಗೆ ಯಾರಿಗೂ ಗಮನವಾಗಿಲ್ಲ. ಇನ್ನೂ ಆತಂಕಕಾರಿ ಸಂಗತಿಯೇನೆಂದರೆ, ಕ್ಯಾಬ್ ಚಾಲಕ ಮಗು ಇರುವುದನ್ನು ಗಮನಿಸದೇ ಮತ್ತೆರಡು ಟ್ರಿಪ್‌ಗಳನ್ನು ಪೂರೈಸಿದ್ದಾನೆ.

ಮನೆ ತಲುಪಿದ ಬಳಿಕ ಮಗು ಕಾಣೆಯಾಗಿರುವುದು ಗೊತ್ತಾಗಿ ಕುಟುಂಬಸ್ಥರು ಕಾಲ್ ಸೆಂಟರ್ ಮೂಲಕ ಕ್ಯಾಬ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅದು ವಿಫಲವಾದ ಹಿನ್ನೆಲೆಯಲ್ಲಿ ತಕ್ಷಣ ‘ನಮ್ಮ 112’ಗೆ ಮಾಹಿತಿ ನೀಡಿದ್ದಾರೆ. ಹೋಯ್ಸಳ-51 ಪೇಟ್ರೋಲಿಂಗ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಕ್ಯಾಬ್ ನೋಂದಣಿ ಸಂಖ್ಯೆ ಆಧಾರದಲ್ಲಿ ತಂತ್ರಜ್ಞಾನ ಬಳಸಿ ಚಾಲಕನನ್ನು ಸಂಪರ್ಕಿಸಲಾಗಿದೆ.

ವಾಹನ ಪರಿಶೀಲಿಸಿದಾಗ ಜಿಯಾನ್ ಸುರಕ್ಷಿತವಾಗಿ ನಿದ್ರಿಸುತ್ತಿರುವುದು ಕಂಡುಬಂದಿದ್ದು, ಬಾಲಕನನ್ನು ಎಚ್ಚರಿಸದೆ ಅಪಾರ್ಟ್‌ಮೆಂಟ್‌ಗೆ ಮರಳುವಂತೆ ಚಾಲಕನಿಗೆ ಸೂಚಿಸಲಾಗಿದೆ. ಹುಡುಕಾಟ ಆರಂಭವಾದ 1 ಗಂಟೆಯೊಳಗೆ ಕ್ಯಾಬ್ ಅಪಾರ್ಟ್‌ಮೆಂಟ್‌ಗೆ ತಲುಪಿದ್ದು, ಬಾಲಕನನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ. ವಿಶೇಷವೆಂದರೆ, ಇಡೀ ಅವಧಿಯಲ್ಲಿ ಮಗು ನಿದ್ರೆಯಲ್ಲೇ ಇದ್ದಿದ್ದು, ಮನೆ ತಲುಪಿದ ಬಳಿಕವೇ ಎಚ್ಚರವಾಗಿದೆ ಎನ್ನಲಾಗಿದೆ.

“ನಾನು ಸತ್ತರೆ ನಿನ್ನ ನೋಡಿಕೊಳ್ಳೋದ್ಯಾರು”: ಪತ್ನಿಯ ಉಸಿರುಗಟ್ಟಿಸಿ ಕೊಂದ ನಿವೃತ್ತ ಇಸ್ರೋ ನೌಕರ

0

ಬೆಂಗಳೂರು: ನಗರದ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್ಮೆಂಟಿನಲ್ಲಿ ಬೆಚ್ಚಿಬೀಳಿಸುವ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ನಿವೃತ್ತ ನೌಕರ ನಾಗಲೇಶ್ವರ ರಾವ್ ತನ್ನ ಪತ್ನಿ ಸಧ್ಯಾರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಆಲವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ನಾಗಲೇಶ್ವರ ರಾವ್ ಮತ್ತು ಸಧ್ಯಾ ವಿರ್ಟುಸೊ ಅಪಾರ್ಟ್ಮೆಂಟಿನಲ್ಲಿ ವಾಸವಾಗಿದ್ದರು. ಪ್ರಾಥಮಿಕ ವಿಚಾರಣೆ ವೇಳೆ “ನಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳೋವರು ಯಾರು? ಸಂಬಂಧಿಕರು ಇಲ್ಲ, ಆಕೆಯ ಮುಂದಿನ ಜೀವನ ಹೇಗೆ?” ಎಂಬ ಕಾರಣ ನೀಡಿ ಕೊಲೆ ಮಾಡಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ.

ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ದಂಪತಿಗೆ ಒಬ್ಬ ಮಗಳು ಇದ್ದು, ಆಕೆ ಅಮೆರಿಕದಲ್ಲಿ ನೆಲೆಸಿದ್ದಾಳೆ ಎನ್ನಲಾಗಿದೆ.

error: Content is protected !!