ಬೆಂಗಳೂರು:- ಪವರ್ ಶೇರಿಂಗ್ ಮ್ಯಾಟರ್ ಗೆ ಸಂಬಂಧಿಸಿದಂತೆ ಬಹಿರಂಗವಾಗಿ ಮಾತನಾಡೋರಿಗೆ ನೋಟೀಸ್ ಕೊಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಪವರ್ ಶೇರ್, ಸಂಪುಟ ಪುನಾರಚನೆ ಬಗ್ಗೆ ಮಾತಾಡಿದ್ರೆ ಮಾನ್ಯತೆ ಇಲ್ಲ. ಹೈಕಮಾಂಡ್ ಹೇಳಬೇಕು, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಮಾತನಾಡಬೇಕು. ಹೈಕಮಾಂಡ್ ಯಾವಾಗ ಮಾತಾಡಬೇಕು ಮಾತಾಡುತ್ತೆ. ಬಹಿರಂಗವಾಗಿ ಮಾತನಾಡೋರಿಗೆ ನೋಟೀಸ್ ಕೊಟ್ಟಿದೆ. ಇನ್ನೂ ಕೊಡ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಸಿಎಂ ಡಿನ್ನರ್ ಮೀಟಿಂಗ್ ಕುರಿತು ಮಾತನಾಡಿ, ಸಿಎಂ ಸಾಹೇಬ್ರು ಕರೆಸ್ತಾರೆ, ನಾಟಿ ಕೋಳಿ ತಿನ್ನಿಸ್ತಾರೆ. ನನಗೆ ಸೋಮವಾರ, ಮಂಗಳವಾರ ಏನಿಲ್ಲ. ನಮ್ದು ವಿಶ್ ಫುಲ್ ಥಿಂಕಿಂಗ್. ಅವರು ಮುದ್ದೆ ಸೊಪ್ಪು ಸಾರು ಹಾಕಿದ್ರು ಓಕೆ. ನಮ್ಮ ಸಿಎಂ ಅವರು ಊಟಕ್ಕೂ ಕರೆಯಬೇಡ ಅಂದ್ರೆ ಹೇಗೆ? ನಾಳೆ ಡಿಸಿಎಂ ಕರೆಯುತ್ತಾರೆ, ನಾನು ಕರೆಯುತ್ತೇನೆ ಎಂದರು.