ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬದ ಅಂಗವಾಗಿ ಕಲಬುರಗಿಯಲ್ಲಿ ಏರ್ಪಡಿಸಿರುವ ಕಲ್ಯಾಣ ಕರ್ನಾಟಕ ಕ್ರಿಕೆಟ್ ಕಪ್ ಪಂದ್ಯಾವಳಿಗೆ KKRDB ಅಧ್ಯಕ್ಷ ಹಾಗು ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಚಾಲನೆ ನೀಡಿದ್ರು. ನಗರದ ಎನ್ ವಿ ಮೈದಾನದಲ್ಲಿ ನಡೆದ ಪಂದ್ಯಾವಳಿಗೆ ವಿಶೇಷ ರೀತಿಯಲ್ಲಿ ಚಾಲನೆ ಕೊಡಲಾಯಿತು ಅಂದ್ರೆ ಮೊದಲು ಫೀಲ್ಡಿಗಿಳಿದ ಅಜಯ್ ಸಿಂಗ್ ಬ್ಯಾಟಿಂಗ್ ಮಾಡಿ ಫೋರ್ ಬಾರಿಸುವುದರ ಮೂಲಕ ಯುವ ಪಟುಗಳಲ್ಲಿ ಕ್ರೀಡಾ ಸ್ಪೂರ್ತಿ ತುಂಬಿದ್ರು.
ಶಾಸಕ ಅಲ್ಲಮಪ್ರಭು ಪಾಟೀಲ್ ಭಾಗಿಯಾಗಿ ಪಂದ್ಯ ಆಯೋಜನೆ ಮಾಡಿದ್ದು ಉತ್ತಮ ಬೆಳವಣಿಗೆ ಕ್ರೀಡಾ ಮನೋಭಾವನೆ ಯುವಕರಲ್ಲಿ ಹೆಚ್ಚಾಗಲಿ ಅಂತ ಆಶಿಸಿದ್ರು.ಸತತ 19 ದಿನಗಳ ಪಂದ್ಯಾವಳಿ ನಡೆಯಲಿದ್ದು ಕಲಬುರಗಿ ಬೀದರ್ ಯಾದಗಿರಿ ಸೇರಿದಂತೆ ಕಲ್ಯಾಣದ ಬಹುತೇಕ ಜಿಲ್ಲೆಗಳ ತಂಡಗಳು ಭಾಗಿಯಾಗಿದ್ದು ಸಂತಸ ತಂದಿದೆ ಅಂತ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ಪ್ರವೀಣ್ ಹರವಾಳ್ ಹಾಗು ಡಾ.ಕಿರಣ್ ದೇಶಮುಖ್ ತಿಳಿಸಿದ್ರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಹೊನಗುಂಟಿ ಸೇರಿದಂತೆ ಹಲವಾರು ಕ್ರೀಡಾ ಪ್ರೇಮಿಗಳು ಪಂದ್ಯಕ್ಕೆ ಸಾಕ್ಷಿಯಾಗಿ ಎಲ್ಲರನ್ನು ಪ್ರೋತ್ಸಾಹಿಸಿದ್ರು…