ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ತಾಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ಕೃಷಿ ಸಹಕಾರ ಪತ್ತಿನ ನೂತನ ಸಂಘಕ್ಕೆ, ರಿಟರ್ನಿಂಗ್ ಅಧಿಕಾರಿ ಬಸಮ್ಮನವರ ನೇತೃತ್ವದಲ್ಲಿ ಅಧ್ಯಕ್ಷರಾಗಿ ಸೋಮನಾಥ ಎಂ ಹಾಗೂ ಉಪಾಧ್ಯಕ್ಷರಾಗಿ ಮಲ್ಲೇಶ ಮಡಿವಾಳರಾಗಿ ಸೇರಿದಂತೆ 12 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
Advertisement
ಕೂಲಹಳ್ಳಿ ಗೋಣಿಬಸವೇಶ್ವರ ಮಠದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮಿಗಳು, ನಾಟಿವೈದ್ಯ ಬಿ.ಬಿ. ಹೊಸುರಪ್ಪ, ಗ್ರಾ.ಪಂ ಅಧ್ಯಕ್ಷೆ ಗೌರಮ್ಮ ಮಾದಾಪುರ, ಬಸವರಾಜ ಜೋಗಿ, ಜಗದೀಶ, ಬಣಕಾರ ಮಂಜಣ್ಣ, ಗೋಣಿಬಸ್ಯಾನಾಯ್ಕ, ಹನಮಂತಪ್ಪ ಕೆ, ನಂದನ ಆರ್, ಸಾವಿತ್ರಮ್ಮ ಬಣಕಾರ, ನಾಗೇಶಪ್ಪ ಕಂಚೀಕೆರೆ, ಕಿರಣ ವಾಲ್ಮೀಕಿ, ಗೌಡ್ರ ಸಣ್ಣತಮ್ಮಪ್ಪ, ಭೋವಿ ವೆಂಕಟೇಶ, ಮಾರ್ತಾಂಡಪ್ಪ ಈಡಿಗರ, ಕಾಳೇಶಪ್ಪ, ಯು ಮಂಜುನಾಥ, ಕುಬೇರಪ್ಪ, ಹಾರಾಳ ಮೂಗಪ್ಪ, ಕೆ ಹೊನ್ನಪ್ಪ, ಶಂಕ್ರಾನಾಯ್ಕ, ಮದನ್ ಕುಮಾರ, ಗಂಟಿ ಶಿವಕುಮಾರ ಸೇರಿದಂತೆ ಇತರರು ಭಾಗವಹಿಸಿದ್ದರು.