ಗದಗ: ಸಿದ್ದರಾಮಯ್ಯ ಕರ್ನಾಟಕವನ್ನು ರಾಕ್ಷಸ ರಾಜ್ಯ ಮಾಡಿದ್ದಾರೆ ಎಂದು ಬಿಜೆಪಿ ನಾಯಕ, ಶಾಸಕ ಜನಾರ್ದನ ರೆಡ್ಡಿ ಬಸವಣ್ಣನವರು, ಕನಕದಾಸರ ವಚನ ಹೇಳಿ ವಾಗ್ದಾಳಿ ನಡೆಸಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು,
ಎಲ್ಲ ಮೀರಿ ಸಿದ್ದರಾಮಯ್ಯ ಜಾತಿಜನಗಣತಿ ಮೂಲಕ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ರಾಜ್ಯದಲ್ಲಿ ಕೆಟ್ಟ ಆಡಳಿತ ನಡೆಸಿದ್ದಾರೆ. ಆದ್ದರಿಂದ ಜನ್ರು ಆಕ್ರೋಶ ಭರತವಾಗಿದ್ದಾರೆ ಎಂದು ಹೇಳಿದರು.
ಎಲ್ಲ ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆಗೆ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ಜನ್ರು ಸರ್ಕಾರ ಕಿತ್ತೆಸೆಯಲು ಸಜ್ಜಾಗಿದ್ದಾರೆ. ಹೀಗಾಗಿ ಈ ದಿಗ್ವಿಜಯ ಯಾತ್ರೆ ನಡೆದಿದೆ ಎಂದರು. ಇನ್ನೂ ಜನಿವಾರ ತೆಗೆಯುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಜನಿವಾರ ತೆಗೆಯುವ ವಿಚಾರ ಸಾಮಾನ್ಯ ವಿಚಾರ ಅಲ್ಲ,
ಹಿಂದೂ ಸಂಸ್ಕೃತಿ ಮೇಲೆ ದಾಳಿ ನಡೆದಿದೆ. ಬ್ರಾಹ್ಮಣತ್ವಕ್ಕೆ ಅಪಚಾರ ಮಾಡುವ ಕೆಲಸ ಮಾಡಿರುವುದರಿಂದ ಆ ಶಾಪದಲ್ಲೇ ಮುಳುಗಿ ಹೋಗ್ತಾರೆ ಎಂದು ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.