ಪಕ್ಷ ಬಿಡೋದು ಶ್ರೀರಾಮುಲು ವೈಯಕ್ತಿಕ, ಹೋಗೋದಾದ್ರೆ ಅವ್ರು ಹೋಗಲಿ: ಜನಾರ್ದನ ರೆಡ್ಡಿ

0
Spread the love

ಬೆಂಗಳೂರು: ಪಕ್ಷ ಬಿಡೋದು ಅವರ ವೈಯಕ್ತಿಕ, ಹೋಗೋದಾದ್ರೆ ಅವ್ರು ಹೋಗಲಿ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಗಣಿನಾಡಲ್ಲಿ ಕಮಲ ಬಾಡಿ ಹೋಗಿದೆ. ಅಲ್ಲದೇ ಆಪ್ತ ಗೆಳೆಯರ ನಡುವೆ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಅದನ್ನು ಶ್ರೀರಾಮುಲು ಬಹಿರಂಗವಾಗಿ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಜನಾರ್ದನ ರೆಡ್ಡಿ ಮಾತನಾಡಿದ್ದಾರೆ.

Advertisement

ಶ್ರೀರಾಮುಲು ಬೇಕು ಬೇಡ ಎಂದರು ನಾನು ಸಾಯೋತನಕ ಅವನನ್ನು ಸ್ನೇಹಿತನಾಗಿಯೇ ನೋಡುತ್ತೇನೆ. ಪಕ್ಷ ಬಿಡೋದು ಅವರ ವೈಯಕ್ತಿಕ, ಹೋಗೋದಾದ್ರೆ ಅವ್ರು ಹೋಗಲಿ, ನನ್ನ ಮೇಲೆ ಆರೋಪ ಮಾಡೋದು ಎಷ್ಟು ಸರಿ? ಎಂದು ಪ್ರಶ್ನಸಿದ್ದಾರೆ. ಅದಲ್ಲದೆ ಬಳ್ಳಾರಿ ಭಾಗದಲ್ಲಿ ಜನರು ಮಾತಾಡ್ತಿದ್ದಾರೆ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲುರನ್ಮು ಕರೆದುಕೊಳ್ಳಬೇಕೆಂದು ಮಾತಾಡ್ತಿದ್ದಾರೆ.

ನೇರವಾಗಿ ನನ್ನ ಮೇಲೆ ಆಪಾದನೆ ಮಾಡಿ, ಹೋಗೋದು ಸರಿಯಲ್ಲ. ನನ್ನ ಕಣ್ಣುಮುಂದೆಯೇ ನನಗೆ ತೊಂದರೆ ಕೊಟ್ಟಿರೋರಿಗೆ ಏನೇನು ಆಗ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ನನಗೆ ತೊಂದರೆ ಕೊಟ್ಟೋರಿಗೆ ಕರ್ಮ ಬಿಡೋದಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here