ಕಾಲ್ತುಳಿತ ಕೇಸ್: ಕಾಂಗ್ರೆಸ್ ಸರ್ಕಾರದ ವಜಾಕ್ಕೆ ಆಗ್ರಹಿಸಿದ ವಿಪಕ್ಷ ನಾಯಕ ಆರ್ ಅಶೋಕ್!

0
Spread the love

ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಕೇಸ್ ಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವಜಾಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದು ದರಿದ್ರ ಸರ್ಕಾರ, ಇದನ್ನ ಬೇವರ್ಸಿ ಸರ್ಕಾರ ಅನ್ಬೇಕಾ.. ಇಲ್ವಾ ಗೊತ್ತಾಗ್ತಿಲ್ಲ. ನಾವಿಲ್ಲಿ ನಲವತ್ತು ಜನ ಪ್ರತಿಭಟನೆ ಮಾಡ್ತಿದ್ದೀವಿ. ಪೊಲೀಸರು 150 ಜನ ಬಂದಿದ್ದಾರೆ, ಗನ್‌ಗಳನ್ನೂ ತಂದಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ, ನಮ್ಮನ್ನೂ ಬಂಧಿಸಬಹುದು. ಸಿಎಂ, ಡಿಸಿಎಂ ವಿಸ್ಕಿ ಬಾಟಲಿ ಆರ್‌ಸಿಬಿ ಪ್ರಮೋಷನ್‌ಗೆ ವಿಧಾನಸೌಧ ಕಾರ್ಯಕ್ರಮ ಮಾಡಿದ್ದಾರೆ. ಆರ್‌ಸಿಬಿ ಅಂದ್ರೆ Real Culprits of Bangalore ಅಂತ ಲೇವಡಿ ಮಾಡಿದ್ದಾರೆ.

Advertisement

ಇದೇ ವೇಳೆ ಪೊಲೀಸರ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿ, ಪೊಲೀಸರ ರಕ್ಷಣೆ ಯಾರು ಮಾಡ್ತಾರೆ? ನಾವು ಪೊಲೀಸರ ಜೊತೆ ನಿಲ್ತೇವೆ. ಈ ಪ್ರಕರಣದಲ್ಲಿ ಪೊಲೀಸರ ಪರ ನಮ್ಮ ಹೋರಾಟ, ದುರಂತದಲ್ಲಿ ಪೊಲೀಸರ ಪಾತ್ರ ಇಲ್ಲ. ವಿಧಾನಸೌಧ ಡಿಸಿಪಿ ಕ್ಲೀನಾಗಿ ಪತ್ರದಲ್ಲಿ ಬರೆದಿದ್ದಾರೆ. ಸಿಬ್ಬಂದಿ ಇಲ್ಲ ಅಂದ್ರೂ ಹೇಗೆ ಕಾರ್ಯಕ್ರಮ‌ ಮಾಡಿದ್ರಿ? ಅಂತ ಪ್ರಶ್ನೆ ಮಾಡಿದ್ದಾರೆ.

ಒಬ್ಬ ಪೊಲೀಸ್ ಅಧಿಕಾರಿ ಆಗಲ್ಲ ಅಂದ್ಮೇಲೂ ನೀನು ಹೇಗಯ್ಯ ಕಾರ್ಯಕ್ರಮ ಮಾಡಿದೆ? ಯಾವ ಕಾನೂನು ಅಡಿ ಕಾರ್ಯಕ್ರಮ ಮಾಡಿದೆ? ಎಂದು ಏಕವಚನದಲ್ಲಿ ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ ಮಾಡಿದರು. ಅಲ್ಲದೇ ಪೊಲೀಸರು ಸಾವಿನ ಬಗ್ಗೆ ಹೇಳಲಿಲ್ಲ ಅಂತಾರೆ. ನಿಮ್ಮ ಅಧಿಕಾರಿಗಳು ಮಣ್ಣು ತಿಂತಿದ್ರಾ? ಟಿವಿಗಳಲ್ಲಿ ಕ್ಷಣಕ್ಷಣಕ್ಕೂನ್ಯೂಸ್ ಬರ್ತಿತ್ತಲ್ಲ. ಈ ಸರ್ಕಾರ ವಜಾ ಆದ್ರೆ ಮಾತ್ರ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತೆ ಅಂತ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here