ವಿಜಯಸಾಕ್ಷಿ ಸುದ್ದಿ, ಡಂಬಳ: ಡಾ.ಬಾಬಾಸಾಹೇಬ ಅಂಬೇಡ್ಕರ್ ದೇಶದ ಪ್ರಜೆಗಳ ಬದುಕು ಆರ್ಥಿಕವಾಗಿ ಸಮಾನತೆಯ ಮೂಲಕ ಮುಂದೆ ಬರಬೇಕು ಎನ್ನುವ ಆಶಾಭಾವನೆ ಹೊಂದಿದ್ದರು. ಆ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಪ್ರಜೆಗಳನ್ನು ಆರ್ಥಿಕ ಪ್ರವಾಹಕ್ಕೆ ತರಲು ಶ್ರಮಿಸುತ್ತಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನೆ, ಗೋದಾಮು, ಮೇವುಂಡಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಗಳಿಗೆ ಕೊಠಡಿ ನಿರ್ಮಾಣ, ವಾಲ್ಮೀಕಿ ಸಮುದಾಯ ಭವನ, ಶ್ರೀ ಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರ, ಶ್ರೀ ಕೃಪೇಶ್ವರ ದೇವಸ್ಥಾನದ ಮುಂದುವರೆದ ಕಾಮಗಾರಿ, ಮೂಲಸೌಕರ್ಯ ಅಭಿವೃದ್ಧಿ, ಡೋಣಿ ಗ್ರಾಮದಲ್ಲಿ ಡೋಣಿ-ಹಿರೇವಡ್ಡಟ್ಟಿ ರಸ್ತೆ ಸುಧಾರಣೆ, ಗೂಳಿ ಬಸವೇಶ್ವರ ದೇವಸ್ಥಾನದ ಹತ್ತಿರ ಹಾಗೂ ಡಿಪಿಇಪಿ ಶಾಲೆಯ ಹತ್ತಿರ ಇರುವ ವಿದ್ಯಾನಗರದಲ್ಲಿ ಸಿ.ಸಿ ರಸ್ತೆ ನಿರ್ಮಾಣ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣ, ಕೆ.ಜಿ.ಎಸ್ ಶಾಲೆಯ 2 ಹೊಸ ಕೊಠಡಿಗಳು, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ನವೀಕರಣ, ಸರಕಾರಿ ಪದವಿಪೂರ್ವ ಕಾಲೇಜುಗಳ ಕೊಠಡಿ ದುರಸ್ತಿ, ಜಿ.ಎಚ್.ಪಿ.ಎಸ್ ಶಾಲೆಯ 2 ಕೊಠಡಿಗಳ ರೂಪ ಬದಲಾವಣೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಡೋಣಿಯ 99 ಕುಟುಂಬಗಳಿಗೆ, ಅತ್ತಿಕಟ್ಟಿ, ಮುರಡಿ ತಾಂಡ ಸೇರಿದಂತೆ ವಿವಿಧ ಗ್ರಾಮಗಳನ್ನು ಉಪ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುವುದು. ಇವೆಲ್ಲವನ್ನೂ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಚುನಾವಣೆಗಳಲ್ಲಿ ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಂತ್ಲಿ ಶಿರೂರ ಗ್ರಾ.ಪಂ ಅಧ್ಯಕ್ಷೆ ಜೈತುನಬಿ ಬಳ್ಳಾರಿ, ಉಪಾಧ್ಯಕ್ಷ ರವಿ ದೊಡ್ಡಮನಿ, ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಅಳವಂಡಿ, ದುರಗವ್ವ ಯಮನೂರಪ್ಪ ತಳಗೇರಿ, ಡಿ.ಡಿ. ಮೋರನಾಳ, ಗ್ರಾ.ಪಂ ಕಟ್ಟಡದ ಭೂದಾನಿ ಹೇಮಣ್ಣ ಪೂಜಾರ, ಇಒ ವಿಶ್ವನಾಥ ಹೊಸಮನಿ, ತಹಸೀಲ್ದಾರ ಯರಿಸ್ವಾಮಿ ಪಿ.ಎಸ್, ಬಸವರಡ್ಡಿ ಬಂಡಿಹಾಳ, ಅಬ್ದುಲಸಾಬ ಕಲಕೇರಿ, ಮಳ್ಳಪ್ಪ ಜೋಂಡಿ, ಮಹೇಶ ಗಡಗಿ, ಕಾಶಪ್ಪ ಹೊನ್ನೂರ, ಗೋಣಿಬಸಪ್ಪ ಕೊರ್ಲಹಳ್ಳಿ, ಬಾಬುಸಾಬ ಮೂಲಿಮನಿ, ಯಮನಪ್ಪ ಚುಂಗಿನ, ಬಸುರಾಜ ಶಿರೋಳ, ಶರಣು ಬಂಡಿಹಾಳ, ಬಸುರಾಜ ಮೇವುಂಡಿ, ಈಶಪ್ಪ ಓಲಿ, ಸೋಮು ಹೈತಾಪೂರ, ರಾಚಪ್ಪ ಗಾಳಪ್ಪನವರ, ಪಿಡಿಒ ವಸಂತ ಕೋಕಾಕ, ವಿರೇಶ ಅವಾರಿ, ಈರಣ್ಣ ಯಳವತ್ತಿ, ಸೋಮಣ್ಣ ಹಳ್ಳಿಕೇರಿ, ಹೇಮಂತ ಹಾರೂಗೇರಿ, ಜಗದೀಶ ಮೇನಳ್ಳಿ, ಬಸುರಾಜ ನಾರಾಯಣಪುರ, ಶರಣಬಸಪ್ಪ ಮುದಿಯಜ್ಜನವರ, ಕಾಶಪ್ಪ ಅಳವಂಡಿ, ವೀರೇಶ ಸಿದ್ನೆಕೊಪ್ಪ, ಈರಣ್ಣ ಯಳವತ್ತಿ, ಯಮನಪ್ಪ ಇಳಗೇರ, ಮಹೇಶ ಕೊರ್ಲಹಳ್ಳಿ, ಮಹಾದೇವಪ್ಪ ಗುಂಜಿ, ಬಸು ಬೇಟಗೇರಿ, ಹನಮಂತಪ್ಪ ಗೋಡಿ, ಯಮನೂರಪ್ಪ ಅರೂಣಸಿ, ಶಿವಕುಮಾರ ಉದಂಡಿ, ಕೋಟ್ರಪ್ಪ ಸ್ವಾಗಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
ಮುಂಡರಗಿ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಶೇ. 98.5ರಷ್ಟು ಸಾಧನೆಯಾಗಿದೆ. ಅನ್ನಭಾಗ್ಯದಡಿ 36640 ಫಲಾನುಭವಿಗಳು ಲಾಭ ಪಡೆದುಕೊಳ್ಳುತ್ತಿದ್ದು, ಶಕ್ತಿ ಯೋಜನೆಯಡಿ 5 ಕೋಟಿ 55 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. 212 ಯುವಕರಿಗೆ ಯುವ ನಿಧಿ ಯೋಜನೆಗಳನ್ನು ಕೊಡುವುದರ ಮೂಲಕ ಯೋಜನೆ ತಲುಪಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಮುಖ್ಯ ಪ್ರವಾಹಕ್ಕೆ ತರಲು ಸರಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.



