ದಾವಣಗೆರೆ: ಮನೆಗೆ ಹಾಲು ಹಾಕುವನಿಂದಲೇ ಡಾಕ್ಟರ್ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ವಿದ್ಯಾನಗರದಲ್ಲಿ ನಡೆದಿದೆ.
ಹರಿಹರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಕಿರಣ್ (24),ಕೊಟ್ರೇಶ್. (22),ನಿತ್ಯಾನಂದ (24),ಶಿವರಾಜ್ (32) ಎನ್ನುವ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಹಾಲು ಹಾಕುತ್ತಿದ್ದ ಶಿವರಾಜ್ ಅಂಡ್ ಗ್ಯಾಂಗ್ ಡಾಕ್ಟರ್ ರಜೆಯಲ್ಲಿರುವ ಟೈಮ್ ನೋಡಿ ಕನ್ನ ಹಾಕಿದ್ದರು.
ಮನೆಯಲ್ಲಿದ್ದ 434 ಗ್ರಾಂ ಬಂಗಾರ, 500 ಗ್ರಾಂ ಬೆಳ್ಳಿ ಆಭರಣ, 25 ಸಾವಿರ ನಗದು, ಆ್ಯಪಲ್ ಫೋನ್, ಸ್ಮಾರ್ಟ್ ವಾಚ್ ಎಲ್ಲವುನ್ನು ಕಳ್ಳರು ದೋಚಿದ್ದಾರೆ.
ಡಾ.ಸಚಿನ್ ಬೊಂಗಳೆ ಅವರು ಹರಿಹರ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಹರಿಹರ ನಗರ ಠಾಣೆಯ ಪೊಲೀಸರು ಖದೀಮರ ಹೆಡೆಮುರಿ ಕಟ್ಟಲು ತನಿಖೆಗೆ ಇಳಿದಿದ್ದರು. ಕೊನೆಗೂ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.