ಹಳ್ಳಿ-ಹಳ್ಳಿಗೂ ಕಾಲಿಟ್ಟ ಕಳ್ಳರು: ಕೈಯಲ್ಲಿ ದೊಣ್ಣೆ, ಚಾಕು ಹಿಡಿದುಕೊಂಡು ಕಳ್ಳತನ ಮಾಡುತ್ತಿರುವ ಖದೀಮರು!

0
Spread the love

ಹಾವೇರಿ: ಜಿಲ್ಲೆಯಲ್ಲಿ ಕಳ್ಳರ ಹಾವಳಿ ನಿಲ್ಲುತ್ತಿಲ್ಲ, ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರು ಈಗ ಹಳ್ಳಿಗೂ ಎಂಟ್ರಿ ಕೊಟ್ಟಿದ್ದಾರೆ.ಕೈಯಲ್ಲಿ ದೊಣ್ಣೆ, ಚಾಕು ಹಾಗೂ ಕಲ್ಲು ಹಿಡಿದುಕೊಂಡು ಎರಡು ಮನೆಗಳಲ್ಲಿ ಕಳ್ಳತನ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹುನಗುಂದ ಗ್ರಾಮದಲ್ಲಿ ನಡೆದಿದೆ.

Advertisement

ದೊಣ್ಣೆ ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ. ಹುನಗುಂದ ಗ್ರಾಮದ ವಾಸು ಮುನವಾಡ ಹಾಗೂ ಲಕ್ಷ್ಮಣ್ ಮುನವಾಡ ಎಂಬುವರು ಮನೆಯಲ್ಲಿ ಕಳ್ಳತನ ಮಾಡಿದ್ದು, ಮನೆಯಲ್ಲಿದ್ದ ತಾಳಿ ಚೈನ್, ಬಂಗಾರದ ಗುಂಡು ಸೇರಿದಂತೆ ಒಟ್ಟು ನಾಲ್ಕು ಲಕ್ಷ. ರೂ ಬೆಲೆ ಬಾಳುವ ಒಡವೆ ಕದ್ದು ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂಕಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here