ವಿಜಯನಗರ ಜಿಲ್ಲಾಧಿಕಾರಿ ಸೈಕಲ್ ಸವಾರಿ: ಹೊಸಪೇಟೆ ಸಿಟಿ ರೌಂಡ್ಸ್

0
Spread the love

ವಿಜಯನಗರ: ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಎಂಎಸ್ , ಹೊಸಪೇಟೆ ನಗರ ಪ್ರದಕ್ಷಣೆ ಮಾಡಿ,  ಸಂಡೂರು ರಸ್ತೆ ಸಾಯಿಬಾಬಾ ಸರ್ಕಲ್,  ಎಪಿಎಂಸಿ ರೋಡ್ ಸಿದ್ಧಿಪ್ರಿಯ ಸರ್ಕಲ್, ವಿಜಯನಗರ ಕಾಲೇಜ್, ಅಂಬೇಡ್ಕರ್ ಸರ್ಕಲ್ ಸರ್ಕಾರಿ ಬಸ್ ನಿಲ್ದಾಣ ವಾರ್ಡ್ ನಂಬರ್ 8 ಮತ್ತು 9 ಇಂದಿರಾನಗರ ಇನ್ನು ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆ ಕಸ ವಿಲೇವಾರಿ ಒಳಚರಂಡಿ ಕುಡಿಯುವ ನೀರಿನ ಲಭ್ಯತೆ ಕುರಿತು ಪರಿಶೀಲನೆ ನಡೆಸಿದರು.

ಬೀದಿ ನಾಯಿಗಳ ಕಾಟ, ಒತ್ತುವರಿ, ಸಮುದಾಯ ಶೌಚಾಲಯಗಳ ಸ್ವಚ್ಛತೆ, ಕೇಂದ್ರ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಸ್ವಚ್ಛತೆ ಮತ್ತು ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ನಾಗರಿಕರಿಂದ ಮಾಹಿತಿ ಪಡೆದರು.

ನಗರಸಭೆ ಅಧಿಕಾರಿಗಳಿಗೆ ಸ್ವಚ್ಛತೆ ಇಲ್ಲದಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಇದೇ ರೀತಿ ಮುಂದೆ ನಗರ ಪ್ರದಕ್ಷಣೆ ಮಾಡಲಾಗುವುದು ಏನಾದರೂ ಲೋಪದೋಷ ಕಂಡುು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.


Spread the love

LEAVE A REPLY

Please enter your comment!
Please enter your name here