ಬೈಕ್‌ ರ‌್ಯಾಲಿಯಲ್ಲಿ ಪಾಲ್ಗೊಳ್ಳುವ ಗ್ರಾಮೀಣ ಕಾರ್ಯಕರ್ತರ ಬೈಕ್‌ಗಳಿಗೆ ಉಚಿತ ಪೆಟ್ರೋಲ್!?

0
Spread the love

ಬಂಕ್‌ನಲ್ಲಿ ಸಾಲುಗಟ್ಟಿ ನಿಂತ ಕಾರ್ಯಕರ್ತರು…….

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಪಾರ್ವತಿ ಪೆಟ್ರೋಲ್‌ ಬಂಕ್‌ನಲ್ಲಿ ನೂರಾರು ಬೈಕ್‌ಗಳು ಪೆಟ್ರೋಲ್‌ ಹಾಕಿಸಿಕೊಳ್ಳಲು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದವು. ಇದೇನು, ರಾತ್ರೋರಾತ್ರಿ ಪೆಟ್ರೋಲ್‌ ಬೆಲೆಯಲ್ಲಿ ಏರಿಕೆಯಾಗಲಿರುವ ಮುನ್ಸೂಚನೆಯಾ ಅಂದುಕೊಳ್ಳುವಂತಿಲ್ಲ!

ಗದಗ ನಗರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯ ಬೈಕ್ ರ‌್ಯಾಲಿಯಲ್ಲಿ ಭಾಗಿಯಾದ ಕಾರ್ಯಕರ್ತರ ಬೈಕ್‌ಗಳಿಗೆ ಉಚಿತ ಪೆಟ್ರೋಲ್ ಹಾಕಿಸುವ ಆಫರ್‌ ನೀಡಲಾಗಿತ್ತು, ಈ ಸಂಬಂಧ ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಪಾರ್ವತಿ ಪೆಟ್ರೋಲಿಂನಲ್ಲಿ ಪೆಟ್ರೋಲ್ ವ್ಯವಸ್ಥೆ ಮಾಡಲಾಗಿತ್ತು.

https://youtu.be/2HTNBDxb_lk

ಕಾರ್ಯಕತರು ತಮ್ಮ ಬೈಕ್‌ಗಳಿಗೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಪಾಳಿ ಹಿಡಿದು ನಿಂತಿದ್ದರು.
ಸ್ಪ್ಲೆಂಡರ್‌ನಂಥಹ 100 ಸಿಸಿ ಬೈಕ್‌ಗಳಿಗೆ 100 ರೂ, ಪಲ್ಸರ್ ಇತ್ಯಾದಿ ಬೈಕ್‌ಗಳಿಗೆ 200 ರೂ. ಪೆಟ್ರೋಲ್ ತುಂಬಿಸುವ ಆಫರ್‌ ನೀಡಲಾಗಿದ್ದು, ಗ್ರಾಮೀಣ ಭಾಗದ ಕಾರ್ಯಕರ್ತರು ಈ ಮೊದಲೇ ತಮಗೆ ನೀಡಲಾದ ಚೀಟಿಯನ್ನು ಹಿಡಿದು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು.

ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಭಾಗಿಯಾಗಲಿರುವ ಈ ಸಮಾವೇಶದ ಬೈಕ್‌ ರ‌್ಯಾಲಿಯಲ್ಲಿ ಭಾಗಿಯಾಗಲು ಕಾರ್ಯಕರ್ತರು ಹುಮ್ಮಸ್ಸಿನಿಂದ ಸಿದ್ಧವಾಗಿದ್ದು ಕಂಡುಬಂದಿತು.


Spread the love

LEAVE A REPLY

Please enter your comment!
Please enter your name here