ಬಿಎಲ್‌ಓ ಕರ್ತವ್ಯಕ್ಕೆ ಗೈರು: ಗ್ರಾಮ ಆಡಳಿತ ಅಧಿಕಾರಿ ಶಿರೂರು ಸಸ್ಪೆಂಡ್; ಡಿಸಿ ಆದೇಶ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

Advertisement

ಬಿಎಲ್‌ಓ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಪಟ್ಟಣದ ಬಸ್ತಿಬಣ ಗ್ರಾಮ ಆಡಳಿತ ಅಧಿಕಾರಿ ವ್ಹಿ.ವ್ಹಿ.ಶಿರೂರ ಅವರನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಅಮಾನತ್ತುಗೊಳಿಸಿದ್ದಾರೆ.

ಲಕ್ಷ್ಮೇಶ್ವರ ಮತಗಟ್ಟೆ ಸಂಖ್ಯೆ 103 ರ ಮತಗಟ್ಟೆ ಅಧಿಕಾರಿಯಾಗಿದ್ದ ವ್ಹಿ.ವ್ಹಿ.ಶಿರೂರ ಅವರು ಬಿಎಲ್‌ಓ ಕರ್ತವ್ಯ ನಿರ್ವಹಿಸಲು ಅನಧಿಕೃತವಾಗಿ ಗೈರು ಹಾಜರಾಗಿದ್ದರು. 7-8-2023 ರಿಂದ ಇಲ್ಲಿಯವರೆಗೂ ಅನಧಿಕೃತವಾಗಿ ಗೈರು ಮತ್ತು 12-8-2023 ರಂದು ಕರೆಯಲಾಗಿದ್ದ ಸಭೆಗೂ ಗೈರಾಗಿದ್ದರು.

ಇದನ್ನೂ ಓದಿ ಪ್ರತ್ಯೇಕ ಪ್ರಕರಣ; ನೀರಲ್ಲಿ ಮುಳುಗಿ ಇಬ್ಬರ ಸಾವು, ಕುಟುಂಬಸ್ಥರ ಆಕ್ರಂಧನ

ಮತಗಟ್ಟೆ ಸಂಖ್ಯೆ 103 ಕ್ಕೆ ಮತಗಟ್ಟೆ ಅಧಿಕಾರಿಯಾಗಿದ್ದರೂ ಮನೆ ಮನೆ ಸಮೀಕ್ಷೆ ಪ್ರಾರಂಭಿಸಿರಲಿಲ್ಲ.

ಇದನ್ನೂ ಓದಿ ಚಲಿಸುತ್ತಿರೋ ಸಾರಿಗೆ ಬಸ್ ನ ಹಿಂಬದಿ ಚಕ್ರ ರಸ್ತೆಗೆ; ಬೆಚ್ಚಿ ಬಿದ್ದ ಪ್ರಯಾಣಿಕರು- ವಿಡಿಯೋ ವೈರಲ್

ಅಲ್ಲದೆ ಅಧಿಕಾರಿಗಳ ದೂರವಾಣಿ ಕರೆಗಳನ್ನು ಸಹ ಸ್ವೀಕರಿಸುತ್ತಿಲ್ಲ. ಕರ್ತವ್ಯ ಲೋಪದಿಂದ ಕಚೇರಿ ಕೆಲಸ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು ಈ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಲಕ್ಷ್ಮೇಶ್ವರ ತಹಸೀಲ್ದಾರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿದ ಜಿಲ್ಲಾಧಿಕಾರಿಗಳು ಅಮಾನತ್ತು ಆದೇಶ ಮಾಡಿದ್ದಾರೆ.

ಮತದಾರ ಪಟ್ಟಿಗಳ ಪರೀಕ್ಷರಣೆ ಮಾಡಲು ಚುನಾವಣಾ ಆಯೋಗ ಮನೆ ಮನೆಗೆ ತೆರಳಿ ಸಂಪೂರ್ಣ ಮಾಹಿತಿ ಸಂಗ್ರಹಿಸಲು ದಿ.21-07-2023 ರಿಂದ 21-08-2023 ರವರೆಗೆ ವೇಳಾಪಟ್ಟಿ ನಿಗದಿ ಮಾಡಿದೆ. ಆಯೋಗದ ಮಾರ್ಗಸೂಚಿಯಂತೆ ನಿಗದಿತ ನಮೂನೆಗಳಲ್ಲಿ ಬಿ.ಎಲ್.ಓಗಳು ಮಾಹಿತಿ ಕ್ರೂಡೀಕರಿಸಿ ಸಲ್ಲಿಸಬೇಕೆಂಬ ಆದೇಶವಿದ್ದರೂ ಕರ್ತವ್ಯದಲ್ಲಿ ತೋರಿದ ನಿರ್ಲಕ್ಷ್ಯದಿಂದ ಶಿರೂರು ಅಮಾನತ್ತಿಗೊಳಗಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here