ಪಾದಚಾರಿ ಮಹಿಳೆಯ ತಾಳಿ ಸರ ಎಗರಿಸಿದ ಕಳ್ಳರು

0
Spread the love

ಬೈಕ್ ನಲ್ಲಿ ಬಂದ ಇಬ್ಬರಿಂದ ಕೃತ್ಯ……

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಬಂಗಾರದ ತಾಳಿ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿ.16.2.2023ರಂದು ಮಧ್ಯಾಹ್ನ 12-10ರ ಸುಮಾರಿಗೆ ಇಲ್ಲಿನ ಆದರ್ಶನಗರದಲ್ಲಿರುವ ಏಕನಾಥ ಕುಲಕರ್ಣಿ ಇವರ ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಯಾರೋ ಇಬ್ಬರು 25-28 ವಯೋಮಾನದ ಅಪರಿಚಿತರು ಬೈಕ್‌ನಲ್ಲಿ ಬಂದು, ಬ್ಯಾಹಟ್ಟಿಯ ಫಿರ್ಯಾದಿ ರತ್ನಾ ಗಂಗಾಧರ ಹುಬ್ಬಳ್ಳಿ(52) ಇವರ ಕೊರಳಿನಲ್ಲಿದ್ದ 1.20 ಲಕ್ಷ ರೂ. ಬೆಲೆಬಾಳುವ ಸುಮಾರು 40 ಗ್ರಾಂ. ತೂಕದ ಬಂಗಾರದ ತಾಳಿ ಸರವನ್ನು ಬಲವಂತದಿಂದ ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಗದಗ ಶಹರ ಪೊಲೀಸರು ತನಿಖೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here