HomeGadag Newsದೀಪಾವಳಿ ಹಬ್ಬದ ಪೂಜಾ ಮುಹೂರ್ತಗಳು

ದೀಪಾವಳಿ ಹಬ್ಬದ ಪೂಜಾ ಮುಹೂರ್ತಗಳು

For Dai;y Updates Join Our whatsapp Group

Spread the love

ಖ್ಯಾತ ಜ್ಯೋತಿಷಿಗಳಾದ ಶರಣಯ್ಯಶಾಸ್ತ್ರಿಗಳ ಮಾಹಿತಿ

ವಿಜಯಸಾಕ್ಷಿ ಸುದ್ದಿ, ಗದಗ

ದೀಪಾವಳಿ ಹಬ್ಬವು ಅ. 23ರಿಂದ ಆರಂಭವಾಗಲಿದ್ದು ಅಂದು ರವಿವಾರ ಧನತ್ರಯೋದಶಿ ನೀರು ತುಂಬುವ ಹಬ್ಬ, 24ರಂದು ಸೋಮವಾರ ನರಕ ಚತುರ್ದಶಿ (ಹಿರಿಯರ ಹಬ್ಬ) ಸಾಯಂಕಾಲ 5 ಗಂಟೆಯ ಒಳಗೆ ಮಾಡಬೇಕು. ಅಂದೇ ಸಂಜೆ 5-26ಕ್ಕೆ ಅಮವಾಸ್ಯೆ ಕೂಡುವುದು. ಆದರೆ, ಅಂದು ಅಮವಾಸ್ಯೆ ಮಾಡಬಾರದು ಎಂದು ನಗರದ ಖ್ಯಾತ ಜ್ಯೋತಿಷಿಗಳಾದ ವೇದಮೂರ್ತಿ ಶರಣಯ್ಯಶಾಸ್ತಿಗಳು ವಿ. ಶಿವಪ್ಪಯ್ಯನಮಠ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅ. 25ರಂದು ಮಂಗಳವಾರ ದೀಪಾವಳಿ ಅಮಾವಾಸ್ಯೆ ಮುಂಜಾನೆ 5-30 ರಿಂದ 8-50ರ ವರೆಗೂ ಅಮೃತ ವೇಳೆ, 10-48 ರಿಂದ 1-12ರ ವರೆಗೂ ಅಮೃತ (ಮಧ್ಯಾನ್ಹ 3-00 ರಿಂದ 4-30 ರ ವರೆಗೆ ರಾಹುಕಾಲ ಅಶುಭ ) ನಂತರ ಗ್ರಸ್ತಾಸ್ತ ಸೂರ್ಯ ಗ್ರಹಣ ಇದೆ.

ಈ ಗ್ರಹಣವು ಸಾಯಂಕಾಲ 4-35ಕ್ಕೆ ಪ್ರಾರಂಭವಾಗಿ ಸಂಜೆ 6-27ರ ವರೆಗೂ ಇರುತ್ತದೆ. ಕಾರಣ ಅಂದು ವಯಸ್ಸಾದ ಹಿರಿಯರು, ಚಿಕ್ಕ ಮಕ್ಕಳು, ರೋಗಿಗಳು, ಬಾಣಂತಿಯರು ಗರ್ಭಿಣಿ ಸ್ತ್ರೀಯರು ಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಊಟ ಮಾಡಬೇಕು.

ಗ್ರಹಣದ ಸಮಯದಲ್ಲಿ ಏನನ್ನೂ
ಸೇವಿಸಬಾರದು. ಅಮಾವಾಸ್ಯೆ ದಿವಸ ಮುತೈದೆಯರಿಗೆ ಇಟ್ಟು ಲಕ್ಷ್ಮೀ ಪೂಜೆ ಮಾಡುವವರು ಮಧ್ಯ್ಯಾಹ್ನ 3-30 ರ ಒಳಗೆ ಮಾಡಬೇಕು. ಅಷ್ಟರಲ್ಲಿ ಆಗದಿದ್ದರೆ ಸಂಜೆ 7-10 ರಿಂದ ರಾತ್ರಿ 9-12ರವರೆಗೂ ಮಾಡಬಹುದು.

ಅ.26 ಬುಧವಾರ ದೀಪಾವಳಿ ಪಾಡ್ಯ ಪೂಜೆ ಬೆಳಿಗ್ಗೆ 3-48 ನಿಮಿಷದಿಂದ 11-55ರ ವರೆಗೂ ಅಮೃತ ವೇಳೆ. ಮಧ್ಯಾಹ್ನ 1-35 ರಿಂದ 2-56ರವರೆಗೆ. ಸಾಯಂಕಾಲ 6-36 ರಿಂದ ರಾತ್ರಿ 9-12ರವರೆಗೆ ಪೂಜಿಸುವುದು ಸೂಕ್ತ ಸಮಯವಾಗಿದೆ. ಆದರೆ ರಾಜಯೋಗವಿದ್ದರೂ ಸಹ ಗೃಹಪ್ರವೇಶಕ್ಕೆ ಮುಹೂರ್ತ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವೇದಮೂರ್ತಿ ಶರಣಯ್ಯಶಾಸ್ರ್ತಿ ವಿ. ಶಿವಪ್ಪಯ್ಯನಮಠ. ಬೆಟಗೇರಿ, ಮೊ: 9741978073 ಸಂಪರ್ಕಿಸಲು ಕೋರಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!