ಬಸವೇಶ್ವರ ಶಾಲಾ ಆವರಣದಲ್ಲಿ ನಿಲ್ಲಿಸಿದ್ದ ಸ್ಕೂಟರ್…….ಮೂವರಿಂದ ಕೃತ್ಯ…
ವಿಜಯಸಾಕ್ಷಿ ಸುದ್ದಿ, ಗದಗ
ಶಾಲೆಯ ಆವರಣವೊಂದರಲ್ಲಿ ನಿಂತಿದ್ದ ವಯೋವೃದ್ಧರೊಬ್ಬರ ಗಮನವನ್ನು ಬೇರೆಡೆ ಸೆಳೆದು, ಅವರ ಆಕ್ಟಿವಾ ಸ್ಕೂಟರ್ನ ಡಿಕ್ಕಿಯಲ್ಲಿಟ್ಟಿದ್ದ ಹಣ, ಬ್ಯಾಂಕ್ ಪಾಸ್ಬುಕ್, ಪಾನ್ಕಾರ್ಡ್ ಇತ್ಯಾದಿ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ದಾಸರ ಓಣಿಯ ರಾಜಣಸಾ ಯಲುಸಾ ಹಬೀಬ(68) ಹುಡ್ಕೋ ಕಾಲನಿಯ ಸಿದ್ದಲಿಂಗ ನಗರದಲ್ಲಿರುವ ಬಸವೇಶ್ವರ ಶಾಲೆಯ ಆವರಣದಲ್ಲಿ ನಿಂತಿದ್ದರು.
ಈ ಸಮಯದಲ್ಲಿ ಸುಮಾರು 35-40 ವರ್ಷ ವಯಸ್ಸಿನ ಯಾರೋ ಮೂವರು ಕಳ್ಳರು ದೂರುದಾರರ ಗಮನವನ್ನು ಬೇರೆಡೆ ಸೆಳೆದು ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ನ ಡಿಕ್ಕಿಯಲ್ಲಿರಿಸಿದ್ದ 1.60 ಲಕ್ಷ ರೂ ನಗದು, ಬ್ಯಾಂಕ್ ಪಾಸ್ಬುಕ್, ಪಾನ್ಕಾರ್ಡ್ಗಳನ್ನು ದೋಚಿದ್ದಾರೆ.
ಆರೋಪಿಗಳನ್ನು ಪುನಃ ನೋಡಿದರೆ ಅವರನ್ನು ಗುರುತಿಸಬಲ್ಲೆ ಎಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅಪರಾಧ 0067/2023, ಐಪಿಸಿ ಕಾಯ್ದೆ 1860ರ ಕಲಂ 379ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಗದಗ ಶಹರ ಪೊಲೀಸರು ತನಿಖೆ ನಡೆಸಿದ್ದಾರೆ.