ಕೋವಿಡ್ ಹೆಚ್ಚಳ; ಸಂಕ್ರಾಂತಿಗೆ ಬಿಂಕದಕಟ್ಟಿ ZOO ಬಂದ್

0
Spread the love

ಮೂರು ದಿನ ಬಿಂಕದಕಟ್ಟಿ ಮೃಗಾಲಯ, ಉದ್ಯಾನವನ ಬಂದ್

Advertisement

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜ.14 ರಿಂದ 16ರವರೆಗೆ ಗದಗ ತಾಲ್ಲೂಕಿನ ಬಿಂಕದಕಟ್ಟಿಯ ಮೃಗಾಲಯ ಹಾಗೂ ಸಾಲು ಮರದ ತಿಮ್ಮಕ್ಕ ಉದ್ಯಾನವನ ಬಂದ್ ಆಗಿರಲಿವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೆ ಅವರು ತಿಳಿಸಿದ್ದಾರೆ.

ಶುಕ್ರವಾರ ಮಕರ ಸಂಕ್ರಮಣ ಇರುವ ಹಿನ್ನೆಲೆಯಲ್ಲಿ ಅಧಿಕ ಪ್ರಮಾಣದಲ್ಲಿ ‌ಜಿಲ್ಲೆಯ ಇವೆರಡೂ ಪ್ರೇಕ್ಷಣೀಯ ಸ್ಥಳಗಳಿಗೆ ವಿವಿಧ ಭಾಗಗಳಿಂದ ಸುಮಾರು 5-6 ಸಾವಿರ ಪ್ರವಾಸಿಗರು ಭೇಟಿ‌ ನೀಡುವ ಸಾಧ್ಯತೆ ಇದೆ. ಹೀಗಾಗಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಮೂರು ದಿನಗಳ ಕಾಲ ಮೃಗಾಲಯ ಹಾಗೂ ಉದ್ಯಾನವನ ಬಂದ್ ಇರಲಿದ್ದು, ಪ್ರವಾಸಿಗರಿಗೆ ನಿರಾಸೆಯನ್ನುಂಟು ಮಾಡಿದೆ.


Spread the love

LEAVE A REPLY

Please enter your comment!
Please enter your name here