ಪಿಡಬ್ಲ್ಯೂಡಿ ಎಇಇ ಗೆ ಬೂಟಿನಿಂದ ಹೊಡಿತೀನಿ ಎಂದ ಸಚಿವ ಕತ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ವಿಜಯಪುರ

ವಿಜಯಪುರದಲ್ಲಿ ಸಚಿವ ಉಮೇಶ್ ಕತ್ತಿ ನಾಲಿಗೆ ಹರಿಬಿಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆಯ ಎಇಇಗೆ ಬೂಟಿನಿಂದ ಹೊಡಿತೀನಿ ಎಂದು ‌ಹಾಸ್ಯದ ಮೂಲಕ ಹೇಳಿದ್ದ ವಿಡಿಯೋ ವೈರಲ್ ಆಗಿದೆ. ಬುಧವಾರ ವಿಜಯಪುರ ಸಮೀಪದ ಭುರಣಾಪೂರ ಗ್ರಾಮದ ಬಳಿ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ವೇಳೆ ಉಸ್ತುವಾರಿ ಸಚಿವ ಉಮೇಶ್ ಕತ್ತಿ, ಲೋಕೋಪಯೋಗಿ ಇಲಾಖೆಯ ಎಇಇ ಚಿಕ್ಕಲಗಿ ಎಂಬುವರಿಗೆ ಬೂಟಿನಿಂದ ಹೊಡಿತೀನಿ ಎಂದಿದ್ದಾರೆ.

ನವೆಂಬರ್, ಡಿಸೆಂಬರ್ ಗೆ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ‌ನೀಡಿದಾಗ, ಸಚಿವ ಉಮೇಶ್ ಕತ್ತಿ ಸಾಹೇಬರು, ಉಡಾಪೆಯ ಮೂಲಕ, ಮಾಡಿದ್ರೆ ಹೂಮಾಲಿ ಹಾಕ್ತೀನಿ.. ಇಲ್ಲಂದ್ರೆ ನಿನಗೆ ಬೂಟಿನಿಂದ ಹೊಡಿತಿನಿ ಎಂದರು.

ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳು ಸ್ಥಳದಲ್ಲಿ ಇದ್ದರು.


Spread the love

LEAVE A REPLY

Please enter your comment!
Please enter your name here