ಸಿಎಂ ಬದಲಾವಣೆ ಬಗ್ಗೆ ನಾವೇನ್ ಹೇಳೋದು?, ಸಚಿವ ಸ್ಥಾನ ಉಳಿಸಿಕೊಳ್ಳೋದೆ ಕಷ್ಟವಾಗಿದೆ– ಸತೀಶ್ ಜಾರಕಿಹೊಳಿ

0
Spread the love

ಬಳ್ಳಾರಿ:- ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಈ ವಿಚಾರವನ್ನು ಬೆಂಗಳೂರಿಗೆ ಬಂದು ಕೇಳಿ. ಹೊಸಪೇಟೆಯಲ್ಲಿ ಕುಳಿತು ಏನು ಹೇಳೋಕಾಗೋಲ್ಲ‌. ನೀವು ಬೆಂಗಳೂರಿಗೆ ಬಂದ್ರೆ ನಾನೇ ಸಿಎಂ ಭೇಟಿ ಮಾಡಿಸ್ತೀನಿ. ಅವರ ಬಳಿಯೇ ಕೇಳಿ ಎಂದಿದ್ದಾರೆ.

Advertisement

ದಲಿತ ಸಚಿವರು‌ ಶಾಸಕರ ಸಭೆಯನ್ನು ಮುಂದೆನೂ ಮಾಡ್ತೀವಿ. ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಏನು ಸಂಬಂಧವಿಲ್ಲ. ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮುಗಿದು ಹೋದ ಅಧ್ಯಾಯ. ಅದು ಬಂದಾಗ ನೋಡೋಣ. ಸಚಿವ ಸಂಪುಟ ವಿಸ್ತರಣೆ ಮಾಡೋದ್ರ ಬಗ್ಗೆ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತೆ. ಹೊಸದಾಗಿ ಬಂದ ಶಾಸಕರಿಗೆ ಸಚಿವ‌ ಸ್ಥಾನ ನೀಡಬಾರದು ಎಂಬ ನಿರ್ಧಾರ ಆಗಿದೆ. ನಮ್ಮ ಪ್ರಕಾರ ಯಾರು ಇಲ್ಲ ನೀವು ಬೇಕಾದ್ರೆ ಬೆಂಗಳೂರು- ಡೆಲ್ಲಿಗೆ ಹೋಗಿ ಕೇಳಿ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here