ಹುಬ್ಬಳ್ಳಿ: ಮುಡಾ ನಿವೇಶನ ಯಾರು ಕೊಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ಅಧಿಕಾರದ ದುರುಪಯೋಗದ ಪ್ರಶ್ನೆ ಇದು ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿಂದ ಹೆಸರು ಉಪಯೋಗ ಮಾಡಿಕೊಂಡು ಮೇಲೆರಿದ್ದಾರೆ. ಇದು ಸರ್ಕಾರದ ಖಜಾನೆಯ ಹಗಲು ದರೋಡೆ. ಬಿ ನಾಗೇಂದ್ರ ರಾಜೀನಾಮೆ ಯಿಂದ ನನಗೆ ಸಮಾಧಾನ ಆಗಿಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಒಳಗಾಗಬೇಕು ಎಂದು ಆಗ್ರಹಿಸಿದರು.
ಮುಡಾ ನಿವೇಶನ ಯಾರು ಕೊಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ಅಧಿಕಾರದ ದುರುಪಯೋಗದ ಪ್ರಶ್ನೆ ಇದು ಎಂದ ಕಾರಜೋಳ ಸ್ವಾತಂತ್ರ್ಯ ಬಂದ ಮೇಲೆ ನೂರಾರು ಆಯೋಗ ರಚನೆ ಆಗಿವೆ. ಅದರ ದಾಖಲೆಗಳೆಲ್ಲ ರೆಕಾರ್ಡ್ ರೂಂನಲ್ಲಿವೆ. ಯಾವ ಕಾಲದಲ್ಲಿ ಹಗರಣ ಆಗಿದೆ ಅದೆಲ್ಲವೂ ತನಿಖೆ ಆಗಲಿ ಎಂದು ಹೇಳಿದ್ದಾರೆ.



