ಬಳ್ಳಾರಿ:- ಕಿಲ್ಲಿಂಗ್ ಸ್ಟಾರ್ ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ ಅವರು ಪತಿಯ ಆರೋಗ್ಯ ವಿಚಾರಿಸಿದರು.
ವಿಜಯಲಕ್ಷ್ಮೀ ಅವರು, ಸಂಬಂಧಿ ಸುಶಾಂತ್ ನಾಯ್ಡು ಅವರ ಜೊತೆ ದರ್ಶನ್ ಭೇಟಿಗಾಗಿ ಬಳ್ಳಾರಿ ಜೈಲಿಗೆ ಆಗಮಿಸಿದ್ರು. ಜೈಲಿನಲ್ಲಿರುವ ದರ್ಶನ್ಗೆ ಜೈಲೂಟ ಕೂಡ ಒಗ್ಗುತ್ತಿಲ್ಲ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಸೊರಗಿ ಹೋಗಿದ್ದಾರೆ. ಪತಿಗಾಗಿ ವಿಜಯಲಕ್ಷ್ಮಿ ಎರಡು ಬ್ಯಾಗ್ ಬಟ್ಟೆಗಳು ,ಹಣ್ಣು, ಡ್ರೈ ಫ್ರೂಟ್ಸ್ ತೆಗೆದುಕೊಂಡು ಬಂದಿದ್ರು.
ವಿಜಯಲಕ್ಷ್ಮಿ ತಂದಿದ್ದ ಬ್ಯಾಗ್ಗಳ ತಪಾಸಣೆ ನಡೆಸಿ ಒಳಗೆ ಬಿಟ್ಟಿದ್ದಾರೆ. ಸೆಲ್ನಿಂದ ಸಂದರ್ಶಕರ ಕೊಠಡಿಗೆ ಬಂದ ದರ್ಶನ್ ನನ್ನು ವಿಜಯಲಕ್ಷ್ಮಿ ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ರು. ವಿಜಯಲಕ್ಷ್ಮಿ ಅವರು ಬೆನ್ನು ನೋವಿನಿಂದ ಬಳಲುತ್ತಿರುವ ಪತಿಯ ಆರೋಗ್ಯವನ್ನು ವಿಚಾರಿಸಿದ್ದಾರೆ ಎನ್ನಲಾಗ್ತಿದೆ.
ನಟ ದರ್ಶನ್ ಗೆ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ಸೆಲ್ನಿಂದ ನಡೆದುಕೊಂಡು ಬರಲು ಕೂಡ ಹೆಣಗಾಡಿದ್ರು. ದರ್ಶನ್ ಹೈ ಸೆಕ್ಯುರಿಟಿ ಸೆಲ್ ನಿಂದ ಸಂದರ್ಶಕರ ಕೊಠಡಿಗೆ ಬರುವಾಗ ದರ್ಶನ್ ನಿಧಾನವಾಗಿ ನಡೆಯುತ್ತಾ ಬಂದ್ರು. ದರ್ಶನ್ ಬೆನ್ನುನೋವಿಗೆ ಬಳಲಿ ಬೆಂಡಾಗಿದ್ದಾರೆ. ಜೈಲಿನಲ್ಲೇ ದರ್ಶನ್ ಥೆರಪಿ ಚಿಕಿತ್ಸೆ ಕೂಡ ನೀಡಲಾಗಿದೆ.