ಕೆಲಸದ ಒತ್ತಡ: ಹೊಸಪೇಟೆ ನಗರಸಭೆ ಸಿಬ್ಬಂದಿ ನೇಣಿಗೆ ಶರಣು!

0
Spread the love

ವಿಜಯನಗರ: ಕೆಲಸದ ಒತ್ತಡ ಹಾಗೂ ಮಾನಸಿಕ ಒತ್ತಡಕ್ಕೊಳಗಾಗಿ ಹೊಸಪೇಟೆ ನಗರಸಭೆ ಸಿಬ್ಬಂದಿ ನೇಣಿಗೆ ಶರಣಾಗಿರುವ ಘಟನೆ ಕಡ್ಡಿರಾಂಪುರದ ಖಾಸಗಿ ಹೊಂಸ್ಟೇನಲ್ಲಿ ನಡೆದಿದೆ. ಮಂಜುನಾಥ್ ಮೃತ ದುರ್ಧೈವಿಯಾಗಿದ್ದು,

Advertisement

ಈ ಹಿಂದೆಯೂ ಕೂಡ ನಗರಸಭೆ ಪೌರಾಯುಕ್ತ ಮತ್ತು ಇತರರ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್‌ನನ್ನು ಚಿಕಿತ್ಸೆ ಕೊಡಿಸಿ, ಸಮಾಧಾನ ಪಡಿಸಿದ್ದರು.

ಆದ್ರೆ ಎಲ್ಲವೂ ಸರಿಹೋಯ್ತು ಎನ್ನುವಷ್ಟರಲ್ಲಿ ಮಂಜುನಾಥ್ ಈಗ ನೇಣಿಗೆ ಕೊರಳೊಡ್ಡಿದ್ದಾರೆ. ಸದ್ಯ ಘಟನೆ ಸಂಬಂಧ ಹಂಪಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here