ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮುಂಡರಗಿ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, ಸಂಘದ 14ನೇ ವಾರ್ಷಿಕೋತ್ಸವ ಹಾಗೂ ಹಿರಿಯ ಚೇತನ ದಿ. ಬಿ. ಬಾಬು ಅವರಿಗೆ ನುಡಿ ನಮನ ಕಾರ್ಯಕ್ರಮ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡರಗಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವೀರೇಶ ಹಡಗಲಿ ವಹಿಸಿದ್ದರು.
ಹಿರಿಯ ಛಾಯಾಗ್ರಾಹಕರಾಗಿದ್ದ ದಿ. ಬಿ. ಬಾಬು ಅವರ ಸ್ಮರಣಾರ್ಥ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಗದಗ ಜಿಲ್ಲಾ ಕಾರ್ಯದರ್ಶಿ ಎ.ಕೆ. ಮುಲ್ಲಾನವರ ವಿಶೇಷ ಉಪನ್ಯಾಸ ನೀಡಿ, ಛಾಯಾಗ್ರಹಣ ಕ್ಷೇತ್ರಕ್ಕೆ ಬಾಬು ಅವರು ಸಲ್ಲಿಸಿದ ಸೇವೆ ಹಾಗೂ ಸಂಘದ ಬೆಳವಣಿಗೆಯಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಬಳಿಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದಿ. ಬಿ. ಬಾಬು ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಅವರೊಂದಿಗಿನ ಆತ್ಮೀಯ ಒಡನಾಟ ಮತ್ತು ಸೇವೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗಲಿಂಗಪ್ಪ ಅರ್ಕಸಾಲಿ, ಮಾಜಿ ಗೌರವಾಧ್ಯಕ್ಷ ಕಾಶಿನಾಥ ಕಲಬುರ್ಗಿ, ಹಿರಿಯ ಛಾಯಾಗ್ರಾಹಕ ಅಂದಪ್ಪ ಕುರುಡಗಿ, ಕಾರ್ಯದರ್ಶಿ ಸಂತೋಷ ಅಳವಂಡಿ, ಖಜಾಂಚಿ ಮಾರುತಿ ಯಾವಗಲ್, ಸಹಕಾರ್ಯದರ್ಶಿ ರಾಜು ಚಿಕ್ಕಣ್ಣವರ, ನಿಂಗಪ್ಪ ಮೇಟಿ, ಶಂಭುಲಿಂಗ ಹರಪನಹಳ್ಳಿ, ಪರಶು ಡೊಗ್ನಾರ್, ನಾಗರಾಜ ಪಾಟೀಲ, ತೋಟೇಶ್ ಬೆಳದಡಿ, ದತ್ತ ಕಲಬುರ್ಗಿ ಸೇರಿದಂತೆ ಮುಂಡರಗಿ ತಾಲೂಕಿನ ಅನೇಕ ಛಾಯಾಗ್ರಾಹಕ ಬಂಧುಗಳು ಭಾಗವಹಿಸಿದ್ದರು.
ಸಂಘಟನಾ ಕಾರ್ಯದರ್ಶಿ ರಂಗನಾಥ ಕಂದಗಲ್ ಸ್ವಾಗತಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.



