ಅಂದರ್ ಬಾಹರ್: ತಹಶೀಲ್ದಾರ್ ಕಚೇರಿ ನೌಕರ ಸೇರಿ ಒಂಬತ್ತು ಜನರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮುಂಡರಗಿ ತಹಶೀಲ್ದಾರ ಕಚೇರಿಯ ನೌಕರ, ವರ್ತಕರು ಹಾಗೂ ಮೆಕ್ಯಾನಿಕ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿರುವ ಮುಂಡರಗಿ ಪೊಲೀಸರು, 9500 ರೂ. ವಶ ಪಡಿಸಿಕೊಂಡಿರುವ ಘಟನೆ ಸಮೀಪದ ಘಟರಡ್ಡಿಹಾಳ ರಸ್ತೆಯ ಅಣ್ಣಪ್ಪ ಡಂಬಳ ಅವರ ಜಮೀನಿ ಬಳಿ ನಡೆದಿದೆ.

ಅಣ್ಣಪ್ಪ ರಾಜೇಂದ್ರಪ್ಪ ಡಂಬಳ, ಮೃತ್ಯುಂಜಯ ಮಲ್ಲಯ್ಯ ವಿಭೂತಿ, ಅಜಯ್ ವೀರಣ್ಣ ಘಟ್ಟಿ, ಜಲಾಲ್ ಭಾಷಾಸಾಬ್ ಕೊಪ್ಪಳ, ರಮೇಶ್ ಸೋಮಣ್ಣ ನವಲಗುಂದ, ಮಂಜುನಾಥ್ ರಾಮಚಂದ್ರಪ್ಪ ಲಿಂಗನಾಯ್ಕರ, ಶಿವಾಜಿ ಯಂಕಪ್ಪ ರಾಸಲ್ಕರ್, ಅಂದಪ್ಪ ಈರಪ್ಪ ಸೊತಾರಿ, ಬಸವರಾಜ್ ರಮೇಶ್ ಅಂಕದ ಬಂಧಿತರು. ಇವರೆಲ್ಲಾ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here