ಅಂದರ್-ಬಾಹರ್: ಸರಕಾರಿ ನೌಕರ ಸೇರಿ ಆರು ಜನರ ಬಂಧನ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡದ ಶರಣಬಸವೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಬಯಲು ಜಾಗೆಯಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ, ಸಾರಿಗೆ ಸಂಸ್ಥೆಯ ನೌಕರ ಸೇರಿದಂತೆ ಆರು ಜನರನ್ನು ಗಜೇಂದ್ರಗಡ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಗಜೇಂದ್ರಗಡ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಸಾರಿಗೆ ಸಂಸ್ಥೆಯ ಚಾಲಕ ಹನಮಂತಪ್ಪ ಭೀಮಪ್ಪ ಜಿಗಳೂರು ಸೇರಿದಂತೆ ಇವರ ಜೊತೆ ಜೂಜಾಟದಲ್ಲಿ ತೊಡಗಿದ್ದ, ಶಿವಪ್ಪ ಕಳಕಪ್ಪ ತಳವಾರ, ಮಹಾಂತೇಶ್ ಶರಣಪ್ಪ ರೊಟ್ಟಿ, ಶಿವಯೋಗಿ ವೀರಭದ್ರಪ್ಪ ಜಿಗಳೂರು, ಪರಶುರಾಮಪ್ಪ ಭೀಮಪ್ಪ ಆಡಿನ, ಸಿದ್ದಯ್ಯ ಶರಣಯ್ಯ ಕಾರಡಗಿಮಠ ಇವರನ್ನು ಬಂಧಿಸಿದ್ದು, ಬಂಧಿತರಿಂದ ಗಜೇಂದ್ರಗಡ ಪೊಲೀಸರು ಕೇವಲ 2,600 ಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ.

ಇವರೆಲ್ಲರೂ ನಾಗೇಂದ್ರಗಡ ಗ್ರಾಮದವರಾಗಿದ್ದು, ಘಟನೆ ಸೆ.26 ರಂದೇ ನಡೆದಿತ್ತು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here