25.8 C
Gadag
Saturday, June 10, 2023

ಕಳೆದಹೋದ ಮರ್ಯಾದೆ ಮತ್ತೆ ಬರುವಂತೆ ದುರ್ಗದೇವಿಗೆ ಪತ್ರ ಬರೆದು ಬೇಡಿಕೊಂಡ ಭಕ್ತ

Spread the love

ವಿಜಯಸಾಕ್ಷಿ ಸುದ್ದಿ, ಗಂಗಾವತಿ

ಕಳೆದುಹೋದ ಮರ್ಯಾದೆ ಮಾನ ಸನ್ಮಾನಗಳು ಮತ್ತೆ ಬರಲು ಆಶೀರ್ವಾದ ಮಾಡುವಂತೆ ಭಕ್ತನೋರ್ವ ಗಂಗಾವತಿ ಗ್ರಾಮದೇವತೆ ದುರುಗಮ್ಮ ಹುಂಡಿಗೆ ಕಾಣಿಕೆ ಸಮೇತ ಪತ್ರ ಬರೆದು ಹಾಕಿದ್ದಾನೆ.

ದೇವತೆಯ ಕಾಣಿಕೆ ಪೆಟ್ಟಿಗೆ (ಹುಂಡಿ) ಎಣಿಕೆಯ ಸಂದರ್ಭದಲ್ಲಿ ಪತ್ರ ಕಂಡು ಬಂದಿದ್ದು ಏಲಕ್ಕಿ ಚಕ್ಕಿ ಸಮೇತ ಪತ್ರಕ್ಕೆ ಅರಿಷಿಣ ಕುಂಕುಮ ಹಚ್ಚಿ ಪತ್ರವನ್ನು ಹುಂಡಿಯಲ್ಲಿ ಹಾಕಿದ್ದಾರೆ.

ಸಿದ್ದಾಪುರದಲ್ಲಿ‌ ಪ್ಲಾಟ್ ಮಾರಾಟವಾಗಲಿ, ಅಕ್ಕ, ಅಣ್ಣ ತಮ್ಮನ ಮದುವೆಯಾಗಲಿ, ಕೋರ್ಟಿನಲ್ಲಿರುವ ಕೇಸ್ ಗೆದ್ದು ಹೊಲದ ಹಣ ಬೇಗನೆ ಬರಲಿ, ಇಡೀ ಕುಟುಂಬ ಕಷ್ಟದಿಂದ ಬೇಗನೆ ಹೊರಗೆ ಬರಲಿ ಎಂದು‌ ಪತ್ರದಲ್ಲಿ ಬರೆಯಲಾಗಿದೆ.

ಬುಧವಾರ ಹುಂಡಿಯ ಹಣ ಎಣಿಕೆ ಮಾಡಲಾಗಿದ್ದು ಒಟ್ಟು 2,10,070 ರೂ ಸಂಗ್ರಹವಾಗಿದೆ. ಕಳೆದ 5 ತಿಂಗಳ ಹಿಂದೆ ಹುಂಡಿ ಎಣಿಕೆ ಸಂದರ್ಭದಲ್ಲಿ 2,17.000 ರೂ ಹಣ ಸಂಗ್ರಹವಾಗಿತ್ತು
ಹುಂಡಿ ಎಣಿಕೆ ಸಂದರ್ಭದಲ್ಲಿ ಜೋಗದ ನಾರಾಯಣಪ್ಪ, ಬಿ.ಅಶೋಕ, ಬಿಚ್ಚಾಲಿ ಮಲ್ಲಿಕಾರ್ಜುನ, ವಾಮರಜ್ಯೋತಿ ವೆಂಕಟೇಶ ಗೀತಾವಿಕ್ರಂ ಸೇರಿ ಅನೇಕರಿದ್ದರು.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Posts