ವಿಜಯಸಾಕ್ಷಿ ಸುದ್ದಿ, ತುಮಕೂರು: ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಯುವಕನ ಸಾವಿಗೆ ತಹಸೀಲ್ದಾರ್ ಒಬ್ಬರು ಕಾರಣರಾಗಿದ್ದಾರಾ ಎನ್ನುವ ಅನುಮಾನ ಬರುವಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮದ್ಯದ ಮತ್ತಿನಲ್ಲಿ ಹರೀಶ್(25) ಎಂಬ ಯುವಕನಿಗೆ ಪಾವಗಡ ತಹಸೀಲ್ದಾರ್ ನಾಗರಾಜು ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಪಾವಗಡ-ಮಡಕಶಿರಾ ರಸ್ತೆಯ ರಾಜವಂತಿ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಗಾಯಗೊಂಡಿದ್ದ ಹರೀಶ್ ನನ್ನು ಆಸ್ಪತ್ರೆಗೆ ಸೇರಿಸುವ ಸೌಜನ್ಯವನ್ನೂ ತಹಸೀಲ್ದಾರ್ ನಾಗರಾಜು ತೋರಿಸದೇ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದು ರಾಜವಂತಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.