36.4 C
Gadag
Friday, June 2, 2023

ಚುನಾವಣಾ ದ್ವೇಷಕ್ಕೆ ಅಡಿಕೆ ತೋಟ ನಾಶ

Spread the love

ವಿಜಯಸಾಕ್ಷಿ ಸುದ್ದಿ, ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ದ್ವೇಷಕ್ಕೆ ನೂರಾರು ಅಡಿಕೆ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮಪಂಚಾಯತಿ ಚುನಾವಣೆಯ ಪ್ರಚಾರಕ್ಕೆ ಹೋದ ತಪ್ಪಿಗೆ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿಯ ನೆಟ್ಟೆಗೆರೆ ಗೇಟ್ ಸಮೀಪ ಈ ಘಟನೆ ನಡೆದಿದೆ.

ನೆಟ್ಟೆಗೆರೆಯ ನಿವಾಸಿ ಮಾಯಣ್ಣಗೌಡ ಎಂಬುವರು ಪಂಚಾಯತಿ ಚುನಾವಣೆ ವೇಳೆ ಗಿರಿಯಮ್ಮ ಅನ್ನೋ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು, ಇದನ್ನು ಸಹಿಸದೇ ವಿರೋಧಿ ಬಣದವರು ಈ ದುಶ್ಕೃತ್ಯ ಎಸಗಿದ್ದಾರೆ ಅಂತಾ ಆರೋಪಿಸಿದ್ದಾರೆ.

ತಡರಾತ್ರಿ ಸುಮಾರು 250ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಬೆಂಕಿ ಇಟ್ಟ ನಂತರ ಕಿಡಿಗೇಡಿಗಳು ಪರಾರಿಯಾಗಿದ್ದಾರೆ‌. ಬೆಳೆಯುವ ಹಂತದಲ್ಲಿದ್ದ ಅಡಿಕೆ ಗಿಡಗಳು, ಹನಿ ನೀರಾವರಿಯ ಪೈಪ್ ಗಳು, ಪಂಪ್ ಸೆಟ್ ಮೋಟಾರ್ ಗಳು ಬೆಂಕಿಗೆ ಆಹುತಿಯಾಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Posts