25.7 C
Gadag
Wednesday, June 7, 2023

ಜಿಲ್ಲೆಯಲ್ಲಿ 81 ಜನರಿಗೆ ಸೋಂಕು; 112 ಜನರು ಗುಣಮುಖ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಸೋಮವಾರ ದಿ 21 ರಂದು 81 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

81 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8447 ಕ್ಕೇರಿದೆ. ಇಂದು 112 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7478 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 846 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಒಳಗಾಗಿ ಇದುವರೆಗೆ 123 ಜನರು ಮೃತಪಟ್ಟಿದ್ದಾರೆ.

ಗದಗ-51, ಮುಂಡರಗಿ-11, ನರಗುಂದ-02, ರೋಣ-14, ಶಿರಹಟ್ಟಿ-03 ಸೇರಿದಂತೆ 81 ಜನರಿಗೆ ಸೋಂಕು ತಗುಲಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ವೆಂಕಟೇಶ ಟಾಕೀಸ್ ಹತ್ತಿರ, ಅಬ್ಬಿಗೇರಿ ಕಾಂಪೌಂಡ್, ಬಸಪ್ಪ ನಗರ, ಗಂಜಿ ಬಸವೇಶ್ವರ ವೃತ್ತ, ಕಳಸಾಪುರ ರಸ್ತೆ, ಹನುಮಾನ ನಗರ, ಡಿ.ಸಿ.ಆಫೀಸ ಹಿಂದುಗಡೆ, ಭರಮಗೌಡ ದೇವಸ್ಥಾನದ ಹತ್ತಿರ, ವಿಶ್ವೇಶ್ವರಯ್ಯ ನಗರ, ಜರ್ಮನ ಆಸ್ಪತ್ರೆ ಹತ್ತಿರ, ಹೊಸಮಠ ಆಸ್ಪತ್ರೆ ಹತ್ತಿರ, ಮುಳಗುಂದನಾಕಾ, ಅಂಬೇಡ್ಕರ ನಗರ, ಗಾಂಧಿ ನಗರ, ಜೆ.ಟಿ.ಮಠ ರಸ್ತೆ, ವೀರಭದ್ರೇಶ್ವರ ದೇವಸ್ಥಾನ ಹತ್ತಿರ, ಹೆಲ್ತ್ ಕ್ಯಾಂಪ್, ಹುಡ್ಕೋ ಕಾಲೋನಿ, ಕೆ.ಸಿ.ರಾಣಿ ರಸ್ತೆ,

ಗದಗ ತಾಲೂಕಿನ ನರಸಾಪುರ, ಮುಳಗುಂದ, ಯಲಿಶಿರುಂಜ, ಹೊಂಬಳ, ಹುಲಕೋಟಿ, ಬಿಂಕದಕಟ್ಟಿ, ಹರ್ಲಾಪುರ, ಶ್ಯಾಗೋಟಿ, ಹಾತಲಗೇರಿ, ಎಲ್.ಆಯಿ.ಸಿ ಆಫೀಸ ಹತ್ತಿರ, ಶಿರುಂಜ,

ಮುಂಡರಗಿ ಪಟ್ಟಣದ ಅನ್ನದಾನೇಶ್ವರ ನಗರ, ಮುಂಡರಗಿ ತಾಲೂಕಿನ ಚುರ್ಚಿಹಾಳ, ಕಲಕೇರಿ, ಬೂದಿಹಾಳ, ಬಾಗೇವಾಡಿ, ಡಂಬಳ

ನರಗುಂದ ಪಟ್ಟಣದ ಟಿ.ಎಲ್.ಎಚ್. ನರಗುಂದ ತಾಲೂಕಿನ ತಡಹಾಳ,

ರೋಣ ತಾಲೂಕಿನ ಸವಡಿ, ಬಿದರಳ್ಳಿ, ಇಟಗಿ, ಮಲ್ಲಾಪುರ, ಮಾಡಲಗೇರಿ, ಹೊಳೆಆಲೂರ, ನರೇಗಲ್,

ಗಜೇಂದ್ರಗಡ ಪಟ್ಟಣದ ಕೆ.ವಿ.ಜಿ.ಬ್ಯಾಂಕ್ ಹತ್ತಿರ, ಕೆಳಗಲ್ ಪೇಟ, ಪೊಲೀಸ್ ಠಾಣೆ,

ಶಿರಹಟ್ಟಿ ತಾಲೂಕಿನ ಹೆಬ್ಬಾಳ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣ,


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Posts