28.7 C
Gadag
Friday, September 22, 2023

‘ಪರರಾಜ್ಯಕ್ಕೆ ಪೂರೈಸುತ್ತೀರಿ, ಇಲ್ಲಿ ಆಮ್ಲಜನಕವಿಲ್ಲದೇ ಜನ ಸಾಯ್ತಿದ್ದಾರೆ’: ಸದನದಲ್ಲಿ ಸರ್ಕಾರಕ್ಕೆ ಎಚ್ ಕೆ ಪಾಟೀಲ್ ತರಾಟೆ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿಗಳಿಗೆ ಪೂರೈಕೆ ಮಾಡ್ತೀರಿ. ಇಲ್ಲಿ ಆಮ್ಲಜನಕ ಕೊರತೆಯಿಂದ ಕೊವಿಡ್ ರೋಗಿಗಳು ಸಾಯುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅವರು ಮಂಗಳವಾರ ಸದನದಲ್ಲಿ ವೈದ್ಯಕೀಯ ಕಿಟ್ ಖರೀದಿ ಹಗರಣದ ಕುರಿತು ಮಾತನಾಡುತ್ತ,  ಕೊವಿಡ್ ಸೋಂಕಿತರಿಗೆ ಲಿಕ್ವಿಡ್ ಆಕ್ಸಿಜನ್ ಕೊರತೆಯಾಗಿದೆ. ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಆಮ್ಲಜನಕ ಪೂರೈಕೆ ಮಾಡಲು ನಿಮಗೆ ತೊಂದರೆಯೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಕ್ಸಿಜನ್ ಕೊರತೆಯಿಂದ ಎಷ್ಟೋ ಜನ ಸತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೆ ಬೀದರ್, ಬೆಳಗಾವಿ, ಬೆಂಗಳೂರಿನಲ್ಲಿ ಕೊವಿಡ್ ರೋಗಿಗಳು ಸತ್ತಿದ್ದಾರೆ. ಇದರ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಎಚ್‌ಕೆ ಪಾಟೀಲ್ ಆಗ್ರಹಿಸಿದರು. 


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike

Latest Posts

error: Content is protected !!