ಹೊಟ್ಟಿನ ಬಣವೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು; ಸುಟ್ಟು ಕರಕಲಾದ ಮೇವು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್

ದುಷ್ಕರ್ಮಿಗಳು ಹೊಟ್ಟು- ಮೇವಿನ ಬಣವೆಗೆ ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲೆಗೆ ಹೊಟ್ಟು ಸುಟ್ಟು ಭಸ್ಮವಾಗಿರುವ ಘಟನೆ
ರೋಣ ತಾಲ್ಲೂಕಿನ ಕುರಡಗಿ ಗ್ರಾಮದಲ್ಲಿ ನಡೆದಿದೆ.

ಸಹೋದರ ಸಂಬಂಧಿಗಳಾದ ನಾಗಪ್ಪ ದೇವರಮನಿ, ಬಸಪ್ಪ ದೇವರಮನಿ, ಮಹಾರುದ್ರಪ್ಪ ದೇವರಮನಿ, ವೀರೇಶ ದೇವರಮನಿ ಎಂಬುವವರಿಗೆ ಸೇರಿದ್ದ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.

ವರ್ಷಪೂರ್ತಿ ದನಕರುಗಳಿಗೆ ಸಂಗ್ರಹಿಟ್ಟಿದ್ದ ಆಹಾರ ಬೆಂಕಿಗಾಹುತಿಯಾಗಿದೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಹೊಟ್ಟು ಮೇವು ಸುಟ್ಟು ಕರಕಲಾಗಿದ್ದು, ರೈತರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಹಾಗೂ ಗ್ರಾಮಸ್ಥರ ನೆರವಿನಿಂದ ಬೆಂಕಿ‌ ನಂದಿಸಿದ್ದಾರೆ‌. ಬೆಂಕಿ ಬಿದ್ದ ಬಣವೆಯ ಅಕ್ಕಪಕ್ಕದಲ್ಲೇ ನೂರಾರು ಹೊಟ್ಟು ಮೇವಿನ ಬಣವೆಗಳಿದ್ದಿದ್ದರಿಂದ ಸಂಭವಿಸಬಹುದಾದ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ.

ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here