ವಿಜಯಸಾಕ್ಷಿ ಸುದ್ದಿ, ಹಿರೇಕೆರೂರ:
ಕಳೆದ ಒಂದು ತಿಂಗಳಿಂದ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ, ಹಿರೇಕೆರೂರ ಪೊಲೀಸರ ನಿದ್ದೆಗೆಡಿಸಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಫೀಕ್ ನಜೀರಸಾಬ್ ಕಚವಿ, ಮುಬಾರಕ್ ಖಾದರಸಾಬ್ ಇಂಗಳಗೊಂದಿ ಹಾಗೂ ಸಾಧಿಕ್ ಸೈಯದ್ ಅಹ್ಮದ್ ರಟ್ಟಿಹಳ್ಳಿ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 185 ಗ್ರಾಂ ಚಿನ್ನ, 555ಗ್ರಾಂ ಬೆಳ್ಳಿ, 90 ಸಾವಿರ ನಗದು, ಕೃತ್ಯಗಳಿಗೆ ಬಳಿಸಿದ ಮೂರು ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನ ಪ್ರಕರಣ ಬೇದಿಸಲು ಡಿವೈಎಸ್ಪಿ ಟಿ.ವಿ.ಸುರೇಶ್, ಸಿಪಿಐ ಆರ್.ಆರ್.ಪಾಟೀಲ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು.
ಆರೋಪಿಗಳ ಪತ್ತೆಗೆ ಶ್ರಮಿಸಿದ ರಟ್ಟಿಹಳ್ಳಿ ಪಿಎಸ್ಐ ಕೃಷ್ಣಪ್ಪ ತೋಪಿನ್, ಹಂಸಭಾವಿ ಪಿಎಸ್ಐ ಚಂದನ ಚಲುವಯ್ಯಾ, ಹಿರೇಕೆರೂರ ಪಿಎಸ್ಐ ವಸಂತ ಕುಮಾರ್, ಪ್ರೊಬೇಶನರಿ ಮಹಿಳಾ ಪಿಎಸ್ಐ ವೀಣಾ, ಸಿಬ್ಬಂದಿಗಳಾದ ಡಿ.ಎಸ್.ದೊಡ್ಮನಿ, ಕೇಶವ ಕೊಲಪ್ಪನವರ್, ರವಿ ಲಮಾಣಿ, ಬಸವರಾಜ್ ಸಣ್ಣಪ್ಪನವರ್, ಕೃಷ್ಣ ಕೊರವರ, ಪರಶುರಾಮ್ ಹೊಸಳ್ಳಿ, ಮನೋಹರ ಭೋಗಾವಿ, ಫಯಾಜ್ ಕುಂದೂರು, ಮಂಜುನಾಥ್ ಕಾಟೇನಳ್ಳಿ, ಚಂದ್ರಶೇಖರ ಅಂಬಿಗೇರ, ಮಹೇಶ್ ಒಡೇರಳ್ಳಿ, ಸತೀಶ್, ಮಂಜುನಾಥ ಹಂಚಿನಮನಿ, ಮಾರುತಿ ಹಾಲಭಾವಿ, ಬಸವರಾಜ್ ಡೋಣನವರ್, ರಮೇಶ್ ಬಡಿಗೇರ್, ಎನ್.ಹೆಚ್.ಡೋಲೆ ಅವರ ಕಾರ್ಯಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.