ಬುದ್ಧ, ಬಸವ, ಅಂಬೇಡ್ಕರ್ ಮಹಾಮಾನವತಾವಾದಿಗಳು

0
2694th Shivanubhava programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬುದ್ಧ, ಬಸವ, ಅಂಬೇಡ್ಕರರು ಮಹಾನ್ ವ್ಯಕ್ತಿಗಳು, ಜೀವಪರ ಕಾಳಜಿಯುಳ್ಳವರು. ಸಮಸ್ತ ಜೀವರಾಶಿಗಳಿಗೆ ಕಲ್ಯಾಣ ಬಯಸುವ ವಿಶೇಷ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಮಹಾನ್ ಮಾನವತಾವಾದಿಗಳು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2694ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, 2500 ವರ್ಷಗಳ ಹಿಂದೆ ವೇದ, ಆಗಮ, ಧರ್ಮ, ದೇವರು, ವರ್ಗ, ವರ್ಣಗಳ ಹೆಸರಿನಲ್ಲಿ ಶೋಷಣೆ, ಭೇದಭಾವ ನಡೆಯುತ್ತಿತ್ತು. ಇಂತಹ ಅಮಾನವೀಯ ಘಟನೆಗಳು ಜರುಗುತ್ತಿರುವ ಸಂದರ್ಭದಲ್ಲಿ ಗೌತಮ ಬುದ್ಧ ಅರಮನೆಯನ್ನು ತ್ಯಾಗ ಮಾಡಿ ಧ್ಯಾನಯೋಗದ ಮೂಲಕ ಧ್ಯಾನವನ್ನು ಸಂಪಾದಿಸಿ ಸಮಸ್ತ ಮನುಕುಲಕ್ಕೆ ಶಾಂತಿಯ ಸಂದೇಶವನ್ನು ನೀಡಿದ್ದಾರೆ. ಬುದ್ಧನ ಅಷ್ಟಾಂಗಿಕ ಮಾರ್ಗ, ನಾಲ್ಕು ಆರ್ಯಸತ್ಯಗಳು, ಪಂಚಶೀಲಗಳನ್ನು ಇಂದು ಚಿಂತನೆ ಮಾಡುವ ಅಗತ್ಯವಿದೆ. ಬುದ್ಧನ ಮಾನವೀಯ ಸಂದೇಶಗಳು ಬಹಳಷ್ಟು ಜನರನ್ನು ಆಕರ್ಷಿಸಿ, ನೆರೆ ರಾಷ್ಟçಗಳಿಗೂ ಹಬ್ಬಿದೆ. ಬುದ್ಧ, ಬಸವ, ಅಂಬೇಡ್ಕರ್ ಇವರು ಶೋಷಣೆ ಮತ್ತು ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆತ್ತಿ ಮಹಾಮಾನವತಾವಾದಿಗಳಾಗಿದ್ದಾರೆ ಎಂದರು.

ಬೌದ್ಧ ಅನುಯಾಯಿಗಳಾದ ವೆಂಕಟೇಶಯ್ಯ ಗದಗ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪಂಚಶೀಲಗಳನ್ನು ಒಳಗೊಂಡಿರುವ ಬುದ್ಧವಂದನೆಯನ್ನು ಹೇಳಿ ಅನೇಕ ಮಹತ್ವದ ಸಂಗತಿಗಳನ್ನು ತಿಳಿಸಿಕೊಟ್ಟರು.

ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪವಿತ್ರಾ ಹನಮಪ್ಪ ಹೊಸಳ್ಳಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಗದಗ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ನಿಮಿತ್ತ ಸೌಜನ್ಯ ದೊಡ್ಡಯಲ್ಲಪ್ಪ ಸಿಡ್ಲಣ್ಣವರ, ಸರಕಾರಿ ಪ್ರೌಢಶಾಲೆ ಲಿಂಗದಾಳ ಅವರನ್ನು ಪೂಜ್ಯರು ಸಂಮಾನಿಸಿದರು.

ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು.

ಧರ್ಮಗ್ರಂಥ ಪಠಣವನ್ನು ಕು. ಮಲ್ಲಿಕಾರ್ಜುನ ದೇವಲಾಪೂರ, ವಚನ ಚಿಂತನೆಯನ್ನು ಕು. ಪ್ರಭು ಮೂಲಿಮನಿ ಇವರು ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಈಶಣ್ಣ ಮುನವಳ್ಳಿ ಅವರನ್ನು ಪೂಜ್ಯರು ಸಂಮಾನಿಸಿದರು.

ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

ಕೆ.ಎ. ಬಳಿಗೇರ ಉಪನ್ಯಾಸ ನೀಡಿ, ಗೌತಮ ಬುದ್ಧರು ಸತ್ಯ, ಅಹಿಂಸೆ, ಅಸ್ತೆಯ, ಬ್ರಹ್ಮಚರ್ಯ ಈ ನಾಲ್ಕು ವಿಷಯಗಳಿಗೆ ಬಹಳಷ್ಟು ಒತ್ತು ಕೊಟ್ಟಿದ್ದಾರೆ. ಬೌದ್ಧ ಧರ್ಮ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದೆ. ಗೌತಮ ಬುದ್ಧನ ಸಂದೇಶಗಳು ನೋಂದ ಮನಸ್ಸಿಗೆ, ಬೆಂದ ಹೃದಯಕ್ಕೆ ಸಾಂತ್ವನ ನೀಡಿ ಸಮಾಜದಲ್ಲಿ ಶಾಂತಿ, ಸಾಮರಸ್ಯ ಉಂಟಾಗುವಂತೆ ಮಾಡಲು ಇವತ್ತಿಗೂ ಅಗತ್ಯವಾಗಿವೆ ಎಂದರು.


Spread the love

LEAVE A REPLY

Please enter your comment!
Please enter your name here